ಬೆಂಗಳೂರು: ಸಮಸ್ಯೆಗೆ ಪರಿಹಾರ ಕೇಳಲು ಬಂದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಜ್ಯೋತಿಷಿ ಪರಾರಿ

ಸಮಸ್ಯೆಗೆ ಪರಿಹಾರ ಕೇಳಲು ಬಂದ ಯುವತಿ ಮೇಲೆ ಅತ್ಯಾಚಾರವೆಸಗಿರುವ ಸ್ವಯ ಘೋಷಿತ ಜ್ಯೋತಿಷಿಯೊಬ್ಬ ತನ್ನ ಆಶ್ರಮದಿಂದ ಪರಾರಿಯಾಗಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸಮಸ್ಯೆಗೆ ಪರಿಹಾರ ಕೇಳಲು ಬಂದ ಯುವತಿ ಮೇಲೆ ಅತ್ಯಾಚಾರವೆಸಗಿರುವ ಸ್ವಯ ಘೋಷಿತ ಜ್ಯೋತಿಷಿಯೊಬ್ಬ ತನ್ನ ಆಶ್ರಮದಿಂದ ಪರಾರಿಯಾಗಿದ್ದಾನೆ.

ಆವಲಹಳ್ಳಿಯಲ್ಲಿ ಆಶ್ರಮ ನಡೆಸುತ್ತಿರುವ ಆನಂದ್ ಮೂರ್ತಿ (52) ಪರಾರಿಯಾಗಿರುವ ಜ್ಯೋತಿಷಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ತಿಂಗಳ ಹಿಂದೆ ತಮ್ಮ ಸಮಸ್ಯೆಗೆ ಪರಿಹಾರ ಕೇಳಿಕೊಂಡು ಆನಂದ ಮೂರ್ತಿಯನ್ನು ಸಂಪರ್ಕಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲಾ ಸಮಸ್ಯೆಯನ್ನು ಪರಿಹರಿಸುವ ದೇವಿಯನ್ನು ತಾನು ಪೂಜಿಸುತ್ತಿದ್ದೇನೆ ಎಂದು ಮೂರ್ತಿ ಹೇಳಿಕೊಂಡಿದ್ದ. ಆಕೆಯ  ಪರಿಸ್ಥಿತಿಯ ಲಾಭ ಪಡೆದ ಆತ ಲೈಂಗಿಕವಾಗಿ ಬಳಸಿಕೊಂಡಿದ್ದ. ಆಕೆಗೆ ಜ್ಯೂಸ್ ನಲ್ಲಿ ಮತ್ತು ಬರುವ ಔಷಧಿ ನೀಡಿ ಅತ್ಯಾಚಾರವೆಸಗಿದ್ದ.

ಅತ್ಯಾಚಾರವೆಸಗಿದ್ದ ವಿಡಿಯೋ ರೆಕಾರ್ಡ್ ಮಾಡಿದ್ದ ಆನಂದ ಮೂರ್ತಿ ಅದನ್ನು ಸಂತ್ರಸ್ತೆಯ ಪ್ರಿಯಕರನಿಗೆ ಕಳುಹಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ.

ದೂರಿನ ಆಧಾರದ ಮೇಲೆ ಕೆಆರ್ ಪುರಂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದು ಆಶ್ರಮದಿಂದ ಪರಾರಿಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com