ಸರ್ಕಾರಿ ಕಚೇರಿಗಳಲ್ಲಿ ವಿಶೇಷ ವಿಕಲಚೇತನರನ್ನು ನೇಮಿಸಿ: ವಿಶ್ವ ವೀಲ್ ಚೇರ್ ಸುಂದರಿ 'ಡಾ. ರಾಜಲಕ್ಷ್ಮಿಎಸ್ ಜೆ'

ವಿಕಲಚೇತನರನ್ನು ವಿವಿಧ ಸರ್ಕಾರಿ ಕಚೇರಿಗಳಲ್ಲಿ ನೇಮಕ ಮಾಡಬೇಕು. ಆಗ ಮಾತ್ರ ಅಂಗವಿಕಲರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಹರಿಸಲು ಸಾಧ್ಯ ಎಂದು ವಿಶ್ವ ವೀಲ್ ಚೇರ್ ಸುಂದರಿ 'ಡಾ.ರಾಜಲಕ್ಷ್ಮಿಎಸ್ ಜೆ' ಎಂದು ಹೇಳಿದ್ದಾರೆ.
ವಿಶ್ವ ವೀಲ್ ಚೇರ್ ಸುಂದರಿ ಡಾ.ರಾಜಲಕ್ಷ್ಮಿಎಸ್ ಜೆ
ವಿಶ್ವ ವೀಲ್ ಚೇರ್ ಸುಂದರಿ ಡಾ.ರಾಜಲಕ್ಷ್ಮಿಎಸ್ ಜೆ
Updated on

ಬೆಂಗಳೂರು: ವಿಕಲಚೇತನರನ್ನು ವಿವಿಧ ಸರ್ಕಾರಿ ಕಚೇರಿಗಳಲ್ಲಿ ನೇಮಕ ಮಾಡಬೇಕು. ಆಗ ಮಾತ್ರ ಅಂಗವಿಕಲರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಹರಿಸಲು ಸಾಧ್ಯ ಎಂದು ವಿಶ್ವ ವೀಲ್ ಚೇರ್ ಸುಂದರಿ 'ಡಾ.ರಾಜಲಕ್ಷ್ಮಿಎಸ್ ಜೆ' ಎಂದು ಹೇಳಿದ್ದಾರೆ.

ಅಂಗವಿಕಲರಿಗಾಗಿ ಇರುವ ಎನ್‌ಜಿಒ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸಬಿಲಿಟಿ (ಎಪಿಡಿ) ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಕಲಚೇತನರ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ರಾಜಲಕ್ಷ್ಮಿ ಅವರು ಮಾತನಾಡಿದರು.

ಸಚಿವಾಲಯಗಳಲ್ಲಿ ಅಂಗವಿಕಲರು ಇರಬೇಕು. ಒಬ್ಬ ಸಚಿವರು ಅಥವಾ ನಿರ್ಧಾರ ತೆಗೆದುಕೊಳ್ಳುವವರು ಅಂಗವಿಕಲರಾಗಿದ್ದರೆ, ಅವರು ಅಂಗವಿಕಲರ ಕಲ್ಯಾಣಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.

ಎಪಿಡಿಯ ಸಿಇಒ ಸೆಂಥಿಲ್ ಕುಮಾರ್ ಮಾತನಾಡಿ, "ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ ಅಂಗವೈಕಲ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಸಮಾನತೆಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಅವಕಾಶ ಸಿಕ್ಕಿದಂತಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರೇತರ ಸಂಘಟನೆಯ ಕನ್ನಡ ಶಿಕ್ಷಕಿ ರಮ್ಯಾ ಮಾತನಾಡಿ, ಮೂಲಸೌಕರ್ಯ ಕಲ್ಪಿಸುವಂಥ ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ವಿಕಲಚೇತನರು ಹೆಚ್ಚು ಒಳಗೊಳ್ಳುವಂತೆ ಸರ್ಕಾರ ಮಾಡಬೇಕು ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com