64 ವರ್ಷ ವಯಸ್ಸಿನ ಪೋಸ್ಟ್ ಮಾಸ್ಟರ್ ಸಾಧನೆ; ಒಂದೇ ದಿನದಲ್ಲಿ ದಾಖಲೆಯ ಪ್ರಮಾಣದ ಅಂಚೆ ಖಾತೆ ಓಪನ್!

ಒಂದೇ ದಿನದಲ್ಲಿ 151 ಅಂಚೆ ಉಳಿತಾಯ ಖಾತೆಗಳನ್ನು ತೆರೆಯುವ ಮೂಲಕ ಕರ್ನಾಟಕದ ಬ್ರಾಂಚ್ ಪೋಸ್ಟ್‌ಮಾಸ್ಟರ್ ದಾಖಲೆ ನಿರ್ಮಿಸಿದ್ದಾರೆ.
ಶಾಖಾ ಪೋಸ್ಟ್ ಮಾಸ್ಟರ್ ಡಿ.ಕೆ.ರಂಗನಾಥ್
ಶಾಖಾ ಪೋಸ್ಟ್ ಮಾಸ್ಟರ್ ಡಿ.ಕೆ.ರಂಗನಾಥ್
Updated on

ಬೆಂಗಳೂರು: ಒಂದೇ ದಿನದಲ್ಲಿ 151 ಅಂಚೆ ಉಳಿತಾಯ ಖಾತೆಗಳನ್ನು ತೆರೆಯುವ ಮೂಲಕ ಕರ್ನಾಟಕದ ಬ್ರಾಂಚ್ ಪೋಸ್ಟ್‌ಮಾಸ್ಟರ್ ದಾಖಲೆ ನಿರ್ಮಿಸಿದ್ದಾರೆ.

ರಾಜ್ಯದಲ್ಲೇ ಮೊದಲ ಮತ್ತು ಬಹುಶಃ ದೇಶದ ಏಕೈಕ ವಿಶಿಷ್ಟ ದಾಖಲೆಯನ್ನು ಮೈಸೂರು ಜಿಲ್ಲೆಯ ನಂಜನಗೂಡು ವಿಭಾಗದ ದಾಸನೂರು ಶಾಖಾ ಅಂಚೆ ಕಚೇರಿಯ 64 ವರ್ಷದ ಬ್ರಾಂಚ್ ಪೋಸ್ಟ್ ಮಾಸ್ಟರ್ ಡಿ ಕೆ ರಂಗನಾಥ್ ಸೋಮವಾರ (ಡಿಸೆಂಬರ್ 5) ನಿರ್ಮಿಸಿದ್ದಾರೆ.

ಡಿಸೆಂಬರ್ 7, 1977 ರಂದು ಅಂಚೆ ಇಲಾಖೆಗೆ ಸೇರ್ಪಡೆಗೊಂಡ ಅವರು 45 ವರ್ಷ ಅಂಚೆ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಮುಂದಿನ ವರ್ಷ ನವೆಂಬರ್ 23 ರಂದು ಅವರು ನಿವೃತ್ತರಾಗಲಿದ್ದಾರೆ. ದಾಸನೂರು, ಪಡುವಲಮರಳಿ, ಔತಲಾಪುರ ಮತ್ತು ರಾಮಶೆಟ್ಟಿಪುರ ಗ್ರಾಮಗಳು ಈ ಶಾಖಾ ಕಚೇರಿ ವ್ಯಾಪ್ತಿಗೆ ಒಳಪಡುತ್ತವೆ. ಉತ್ತಮ ಬಾಂಧವ್ಯ ಮತ್ತು ಗ್ರಾಮಸ್ಥರೊಂದಿಗಿನ ಅವರ ವೈಯಕ್ತಿಕ ಸಂಪರ್ಕವು ಈ ಸಾಧನೆಯನ್ನು ಸಾಧಿಸಲು ಸಹಾಯ ಮಾಡಿದೆ ಎಂದು ಅವರ ಮೇಲಧಿಕಾರಿ ಹೇಳುತ್ತಾರೆ.

ಈ ಬಗ್ಗೆ TNIE ಯೊಂದಿಗೆ ಮಾತನಾಡಿದ ರಂಗನಾಥ್, “ನಾನು ತೆರೆದ ಎಲ್ಲಾ ಖಾತೆಗಳು ಆರ್ ಡಿ ಖಾತೆಗಳಾಗಿವೆ. 151 ಖಾತೆಗಳನ್ನು ತಲಾ 100 ರೂ ವೆಚ್ಚದಲ್ಲಿ ತೆರೆಯಲಾಗಿದೆ ಮತ್ತು ಅವರು ಪ್ರತಿ ತಿಂಗಳು ಇದೇ ಮೊತ್ತವನ್ನು ಜಮಾ ಮಾಡುತ್ತಾರೆ. ನಾನು ಇಲ್ಲಿ 45 ವರ್ಷಗಳಿಂದ ಕೆಲಸ ಮಾಡಿದ್ದೇನೆ ಮತ್ತು ಎಲ್ಲರೂ ನನ್ನನ್ನು ತಿಳಿದಿದ್ದಾರೆ ಮತ್ತು ಸೋಮವಾರ ಬಂದು ತಮ್ಮ ಖಾತೆಗಳನ್ನು ತೆರೆಯಲು ನಾನು ಅವರನ್ನು ಕೇಳಿದೆ. ಅವರು ಈ ಆರ್‌ಡಿ ಖಾತೆಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ನಿರಂತರವಾಗಿ ಕೆಲಸ ಮಾಡಿದರು ಎಂದು ಅವರು ಹೇಳಿದರು. ತಮ್ಮ ಈ ಸಾಧನೆಯಲ್ಲಿ ತಮ್ಮ ಕಚೇರಿಯಲ್ಲಿ ಅಂಚೆ ನಿರೀಕ್ಷಕ ಮೋಹನ್ ಬಾಬು ಹಾಗೂ ಮೇಲ್ ಮೇಲ್ವಿಚಾರಕ ಮಹೇಂದರ್ ಅವರು ಅಮೂಲ್ಯ ನೆರವು ನೀಡಿದರು ಎಂದು ಹೇಳಿದರು.

ನಂಜನಗೂಡು ವಿಭಾಗದ ಅಂಚೆ ಅಧೀಕ್ಷಕ ಎಚ್.ಸಿ.ಸದಾನಂದ ಮಾತನಾಡಿ, ಅಂಚೆ ಸಿಬ್ಬಂದಿ ನಿತ್ಯ ಮೂರ್ನಾಲ್ಕು ಗಂಟೆ ಮಾತ್ರ ಕೆಲಸ ಮಾಡುತ್ತಾರೆ. ಅವರು ಅಂಚೆ ಕಚೇರಿಗಳನ್ನು ನೋಡಿಕೊಳ್ಳುವ ಜೊತೆಗೆ ಅಂಚೆ ವಿತರಣೆಯನ್ನು ನಿರ್ವಹಿಸಬೇಕಾಗುತ್ತದೆ. ಅವರು 65 ನೇ ವಯಸ್ಸಿಗೆ ನಿವೃತ್ತರಾಗುತ್ತಾರೆ. ಈ ನಿರ್ದಿಷ್ಟ ನಿದರ್ಶನದಲ್ಲಿ, ಅವರು ಪೂರ್ಣ ದಿನದ ಕೆಲಸದಲ್ಲಿ ತೊಡಗಿಕೊಂಡರು ಮತ್ತು ಎಲ್ಲಾ ಖಾತೆಗಳನ್ನು ತೆರೆದಿದ್ದಾರೆ ಎಂದು ಹೇಳಿದರು.

ಪೋಸ್ಟ್‌ಮಾಸ್ಟರ್ ಸಲ್ಲಿಸಿದ ಸೇವೆಯನ್ನು ಶ್ಲಾಘಿಸಿದ ಸದಾನಂದ ಅವರು, “ಇಲಾಖೆಯ ಹೊಸ ಯೋಜನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ವಿವಿಧ ಯೋಜನೆಗಳಿಗೆ ಸೇರಿಸಬಹುದಾದ ಸೂಕ್ತ ಗ್ರಾಹಕರನ್ನು ಗುರುತಿಸುವಲ್ಲಿ ಅವರು ನಿಪುಣರಾಗಿದ್ದಾರೆ. 10 ಲಕ್ಷ ಅಪಘಾತ ರಕ್ಷಣೆ ಸೇರಿದಂತೆ ಎಲ್ಲಾ ಗ್ರಾಮಸ್ಥರನ್ನು ವಿಮಾ ರಕ್ಷಣೆಯ ಅಡಿಯಲ್ಲಿ ತರಲಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com