ಬಂಡೂರು ಕುರಿಗಳ ಸಂರಕ್ಷಣೆಗಾಗಿ ಮೈಸೂರು ರೈತನಿಗೆ ಒಲಿದ ಐಸಿಎಆರ್ ಪ್ರಶಸ್ತಿ

ಹರಿಯಾಣದ ಕರ್ನಾಲ್‌ನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) - ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ 'ತಳಿ ಸಂರಕ್ಷಣೆ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಯಡಹಳ್ಳಿ ಗ್ರಾಮದ ಯಶೋಧವನ ಗೋಟ್ ಫಾರ್ಮ್‌ನ ಮಾಲೀಕ ಯು.ಕೆ. ಶ್ರೀನಿವಾಸ್ ಆಚಾರ್ಯ ಮೂರನೇ ಬಹುಮಾನ ಪಡೆದಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಮೈಸೂರು: ಹರಿಯಾಣದ ಕರ್ನಾಲ್‌ನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) - ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ 'ತಳಿ ಸಂರಕ್ಷಣೆ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಯಡಹಳ್ಳಿ ಗ್ರಾಮದ ಯಶೋಧವನ ಗೋಟ್ ಫಾರ್ಮ್‌ನ ಮಾಲೀಕ ಯು.ಕೆ. ಶ್ರೀನಿವಾಸ್ ಆಚಾರ್ಯ ಮೂರನೇ ಬಹುಮಾನ ಪಡೆದಿದ್ದಾರೆ.

ಸ್ಥಳೀಯ ಬಂಡೂರು ಕುರಿಗಳ ಸಂರಕ್ಷಣೆಗಾಗಿ ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಿದ ಆಚಾರ್ಯ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದ ಬಂಡೂರು ಕುರಿ ಮಾಂಸದ ಪ್ರಮುಖ ಬ್ರಾಂಡ್ ಆಗಿದೆ. ಉಣ್ಣೆ ಮತ್ತು ಮಾಂಸಕ್ಕಾಗಿ ಜನಪ್ರಿಯವಾಗಿರುವ ಬಂಡೂರಿನಲ್ಲಿ ಕುಬ್ಜ ಕುರಿಗಳನ್ನು ಪ್ರತ್ಯೇಕವಾಗಿ ಸಾಕಲಾಗುತ್ತದೆ ಎಂದರು.

ನಾನು ಮೈಸೂರು ಭಾಗದ ರೈತರಿಗೆ ವಿತರಿಸಲು 85 ತಳಿ ಕುರಿಗಳೊಂದಿಗೆ ಪ್ರಾರಂಭಿಸಿದೆ. ಅವುಗಳೀಗ 400ಕ್ಕೂ ಹೆಚ್ಚು ಶುದ್ಧ ಬಂಡೂರು ತಳಿಯ ಕುರಿಗಳಾಗಿವೆ. 2012ರಲ್ಲಿ 2,500 ಕುರಿಗಳಿದ್ದು, ಆಯ್ದ ತಳಿ ಮತ್ತು ತಳಿಗಳ ಉನ್ನತೀಕರಣದಿಂದಾಗಿ ಈಗ ಸುಮಾರು 25,000 ಕುರಿಗಳನ್ನು ಹೊಂದಿದ್ದೇವೆ. 50 ಎಕರೆ ಸಾವಯವ ಕೃಷಿ ಭೂಮಿಯಲ್ಲಿ ಹರಡಿಕೊಂಡಿರುವ ಅವರ ಫಾರ್ಮ್ ಅನ್ನು 2012 ರಲ್ಲಿ ಪ್ರಾರಂಭಿಸಲಾಯಿತು ಎಂದು ಹೇಳಿದರು.

ನಾವು ಮೇಕೆಗಳು ಮತ್ತು ಇತರ ಜಾನುವಾರುಗಳ ಉತ್ತಮ ಗುಣಮಟ್ಟದ ತಳಿಗಳನ್ನು ಸಾಕುತ್ತಿದ್ದೇವೆ. ಮೇಕೆ ಹಾಲು, ತುಪ್ಪ ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಸರಿಯಾದ ವಿಧಾನ ಮತ್ತು ನಿರ್ವಹಣೆಯೊಂದಿಗೆ ಮೇಕೆ ಸಾಕಣೆಯು ವಾಣಿಜ್ಯಿಕವಾಗಿ ಕಾರ್ಯಸಾಧ್ಯ ಮತ್ತು ಲಾಭದಾಯಕ ವ್ಯವಹಾರವಾಗಿದೆ. ನೈಜೀರಿಯಾ, ಭೂತಾನ್ ಮತ್ತು ಶ್ರೀಲಂಕಾ ಸೇರಿದಂತೆ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ 25,000 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೇಕೆ ಸಾಕಣೆ ಕುರಿತು ತರಬೇತಿ ನೀಡಿದ್ದೇವೆ ಎಂದು ಅವರು ಹೇಳಿದರು.

ಆಚಾರ್ಯ ಅವರು ಡಿಸೆಂಬರ್ 23 ರಂದು ಕಿಸಾನ್ ದಿನದಂದು 15,000 ರೂಪಾಯಿ ನಗದು ಬಹುಮಾನ ಮತ್ತು ಪ್ರಮಾಣಪತ್ರದೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com