ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ವೀರ ಸಾವರ್ಕರ್ ಭಾವಚಿತ್ರ ಅನಾವರಣ: ಶಿಕ್ಷಣ ಸಚಿವ ನಾಗೇಶ್ ಭಾಗಿ

ಇಂದು ಗುರುವಾರ ಡಿಸೆಂಬರ್ 29ರಂದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಲಾಯಿತು. 
ವೀರ ಸಾವರ್ಕರ್ (ಫೋಟೋ ಕೃಪೆ-ಫೇಸ್ ಬುಕ್)
ವೀರ ಸಾವರ್ಕರ್ (ಫೋಟೋ ಕೃಪೆ-ಫೇಸ್ ಬುಕ್)
Updated on

ಬೆಳಗಾವಿ: ಇಂದು ಗುರುವಾರ ಡಿಸೆಂಬರ್ 29ರಂದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಲಾಯಿತು. 

ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸಮ್ಮುಖದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಿ ಅದಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು.

1950 ರ ಏಪ್ರಿಲ್ 4 ರಿಂದ ಜುಲೈ 13 ರವರೆಗೆ 99 ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಅವರನ್ನು ಕೈದಿಯಾಗಿ ಬಂಧನದಲ್ಲಿರಿಸಲಾಗಿತ್ತು. ಈ ಕಾರಣದಿಂದ ಹಿಂದೂವಾದಿ, ಸಮಾಜಸುಧಾರಕ ಸಾವರ್ಕರ್ ಫೋಟೋವನ್ನು ಜೈಲಿನೊಳಗೆ ಅಳವಡಿಸಬೇಕೆಂಬ ಒತ್ತಾಯ ಕೇಳಿಬರುತ್ತಿತ್ತು. 

ಫೋಟೋವನ್ನು ಅನಾವರಣಗೊಳಿಸಿದ ನಂತರ ಅಲ್ಲಿದ್ದವರು ಸ್ವತಂತ್ರ ವೀರ ದಾಮೋದರ್ ಸಾವರ್ಕರ್ ಅವರಿಗೆ ಜಯವಾಗಲಿ, ಬೋಲೋ ಭಾರತ್ ಮಾತಾ ಕಿ ಜೈ ಎಂದು ಕೂಗಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com