ಬೆಂಗಳೂರು: 10 ವರ್ಷದಿಂದಲೇ ಕಳ್ಳತನ, 54 ನೇ ವಯಸ್ಸಿನಲ್ಲಿ ಖಾಕಿ ಬಲೆಗೆ ಬಿದ್ದ ಖತರ್ನಾಕ್!

ಬಾಲ್ಯದಿಂದಲೇ ಕಳ್ಳತನವನ್ನು ವೃತ್ತಿ ಮಾಡಿಕೊಂಡು ಹಲವೆಡೆ ಕೃತ್ಯ ಎಸಗುತ್ತಿದ್ದ ಆರೋಪದಡಿ ಪ್ರಕಾಶ್ (54) ಎಂಬುವವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಾಲ್ಯದಿಂದಲೇ ಕಳ್ಳತನವನ್ನು ವೃತ್ತಿ ಮಾಡಿಕೊಂಡು ಹಲವೆಡೆ ಕೃತ್ಯ ಎಸಗುತ್ತಿದ್ದ ಆರೋಪದಡಿ ಪ್ರಕಾಶ್ (54) ಎಂಬುವವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿ ಪ್ರಕಾಶ್, 1978ರಿಂದಲೇ ಕಳ್ಳತನ ಕೃತ್ಯ ಎಸಗಲಾರಂಭಿಸಿದ್ದ. 20 ಬಾರಿ ಪೊಲೀಸರಿಗೆ ಸಿಕ್ಕಿಬಿದ್ದು, ಜೈಲಿಗೂ ಹೋಗಿ ಜಾಮೀನಿನ ಮೇಲೆ ಹೊರಬಂದಿದೆ. ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಪ್ರಕಾಶ್‌ನನ್ನು ಮತ್ತೊಮ್ಮೆ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು, ಶಿವಮೊಗ್ಗ, ಬಳ್ಳಾರಿ, ಕೋಲಾರ ಮೂಲದ ಮೂವರು ಪತ್ನಿಯರಿದ್ದು, ಏಳು ಮಕ್ಕಳಿದ್ದಾರೆ.

ಆರೋಪಿ ಬೆಂಗಳೂರು, ಕೋಲಾರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಕಲಬುರಗಿ ಸೇರಿದಂತೆ ವಿವಿಧೆಡೆ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಈತ ಮಹಾರಾಷ್ಟ್ರ, ಗೋವಾ, ಕೇರಳದಲ್ಲಿಯೂ ಕಳ್ಳತನದಲ್ಲಿ ಭಾಗಿಯಾಗಿದ್ದಾನೆ.

ಪ್ರಕಾಶ್  ಸಹೋದರ ವರದರಾಜ್, ಅವರ ಮಕ್ಕಳಾದ ಬಾಲರಾಜ್ ಮತ್ತು ಮಿಥುನ್ ಮತ್ತು ಅಳಿಯ ಜಾನ್ ಅವರಿಗೆ ಈ ಅಪರಾಧಗಳಲ್ಲಿ ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ. ಪ್ರಕಾಶ್ ಐಷಾರಾಮಿ ನಿವಾಸಗಳು, ಆಭರಣ ಅಂಗಡಿಗಳು ಮತ್ತು ಹಣಕಾಸು ಕಚೇರಿಗಳನ್ನು ಗುರಿಯಾಗಿಸಿಕೊಂಡಿದ್ದರು.

ಕೇರಳದ ಕೊಟ್ಟಾಯಂನಲ್ಲಿ ಸುಮಾರು 2.5 ಕೆಜಿ ಚಿನ್ನವನ್ನು ಈತ ಕದ್ದಿದ್ದ,  ಶೇಷಾದ್ರಿಪುರಂನ ಆಭರಣ ಮಳಿಗೆಯೊಂದರ ಪಕ್ಕದ ಗೋಡೆ ಕೊರೆದು ಕಳ್ಳತನ ಮಾಡಲಾಗಿದ್ದು, ನಗರದ ಮಾರುಕಟ್ಟೆಯ ಗಿರವಿ ಅಂಗಡಿಯಲ್ಲಿದ್ದ ಸುಮಾರು 4.2 ಕೆಜಿ ಚಿನ್ನಾಭರಣ ಕಳ್ಳತನ ಮಾಡಿದ್ದ. 1989ರಲ್ಲಿ ತನ್ನ ಸಹಚರರ ಸಹಾಯದಿಂದ ಮೈಸೂರಿನಲ್ಲಿ ಕಳ್ಳತನ ಮಾಡಿದ್ದ.

1992ರಲ್ಲಿ ಮತ್ತೊಬ್ಬ ಸಹಚರನ ಜತೆ ಸೇರಿ ಮಹಾರಾಷ್ಟ್ರದ ಕೊಲ್ಹಾಪುರದ ಎರಡು ಆಭರಣ ಮಳಿಗೆಗಳಿಂದ ಸುಮಾರು 17 ಕೆಜಿ ಚಿನ್ನಾಭರಣ ಕಳವು ಮಾಡಿದ್ದ. ಶಿವಮೊಗ್ಗದಲ್ಲಿ ಫೈನಾನ್ಸ್ ಕಚೇರಿಯಲ್ಲಿ ಸುಮಾರು ಏಳು ಕೋಟಿ ನಗದು ದೋಚಿದ್ದ. ಬೆಂಗಳೂರು, ಬಳ್ಳಾರಿ, ಶಿವಮೊಗ್ಗ ಸೇರಿ ಹಲವು ನಗರಗಳಲ್ಲಿ 160 ಕಡೆ ಆರೋಪಿ ಕಳ್ಳತನ ಮಾಡಿದ್ದ. ಈತನ ಕುಟುಂಬದವರೂ ಕಳ್ಳತನಕ್ಕೆ ಸಹಕಾರ ನೀಡುತ್ತಿದ್ದರು’ ಎಂದೂ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com