'ನನ್ನನ್ನು ಹಿಂಬಾಲಿಸುತ್ತಿರುವ ಸುದ್ದಿವಾಹಿನಿಗಳಿಂದ ಮಾನಸಿಕ ಹಿಂಸೆಯಾಗಿದೆ': ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಪವಿತ್ರಾ ಲೋಕೇಶ್

ನರೇಶ್ -ರಮ್ಯಾ ರಘುಪತಿ ನಡುವಣ ಕುಟುಂಬ ಕಲಹ ಬೀದಿಗೆ ಬಂದು ಕನ್ನಡ ಮೂಲದ ಬಹುಭಾಷಾ ನಟಿ ಪವಿತ್ರಾ ಲೋಕೋಶ್ ವಿನಲ್ ನಂತೆ ಸಮಾಜದ ಕಣ್ಣಿಗೆ ಕಾಣುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್ ಮಧ್ಯೆ ಅನೈತಿಕ ಸಂಬಂಧವಿದ್ದು ಮದುವೆಯಾಗಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
ನಟಿ ಪವಿತ್ರಾ ಲೋಕೇಶ್(ಸಂಗ್ರಹ ಚಿತ್ರ)
ನಟಿ ಪವಿತ್ರಾ ಲೋಕೇಶ್(ಸಂಗ್ರಹ ಚಿತ್ರ)

ಮೈಸೂರು: ನರೇಶ್ -ರಮ್ಯಾ ರಘುಪತಿ ನಡುವಣ ಕುಟುಂಬ ಕಲಹ ಬೀದಿಗೆ ಬಂದು ಕನ್ನಡ ಮೂಲದ ಬಹುಭಾಷಾ ನಟಿ ಪವಿತ್ರಾ ಲೋಕೋಶ್ ವಿಲನ್ ನಂತೆ ಸಮಾಜದ ಕಣ್ಣಿಗೆ ಕಾಣುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್ ಮಧ್ಯೆ ಅನೈತಿಕ ಸಂಬಂಧವಿದ್ದು ಮದುವೆಯಾಗಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಕೆಲ ದಿನಗಳ ಹಿಂದೆಯಷ್ಟೆ ಪವಿತ್ರಾ ಲೋಕೇಶ್ ಮೈಸೂರಿನ ಸೈಬರ್‌ ಠಾಣೆಯಲ್ಲಿ ತಮ್ಮ ಹೆಸರಲ್ಲಿ ಯಾರೋ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅನುಚಿತವಾಗಿ ವರ್ತಿಸುತ್ತಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಕೋರಿ ದೂರು ದಾಖಲಿಸಿದ್ದರು. ಇದೀಗ ಸುದ್ದಿ ವಾಹಿನಿಗಳು ನನ್ನನ್ನು ಹಿಂಬಾಲಿಸುತ್ತಿದ್ದು, ನನ್ನ ನೆಮ್ಮದಿ ಭಂಗಗೊಳಿಸಿ, ಮಾನಸಿಕವಾಗಿ ಘಾಸಿ ಮಾಡಿವೆ. ಈ ಸಂಬಂಧ ಅಂಥ ವಾಹಿನಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಮೊನ್ನೆ ಶನಿವಾರ ಸಂಜೆ ಮೈಸೂರಿನ ವಿವಿ ಪುರಂ ಪೊಲೀಸ್‌ ಠಾಣೆಗೆ ಪವಿತ್ರಾ ಲೋಕೇಶ್‌ ದೂರು ನೀಡಿದ್ದಾರೆ.

ತೆಲಗು ನಟ ನರೇಶ್ ಬಾಬು ಜೊತೆ ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರು ಮದುವೆಯಾಗಿದ್ದಾರೆಂಬ ಸುದ್ದಿ ಇತ್ತೀಚೆಗೆ ಸದ್ದು ಮಾಡುತ್ತಿದೆ. ಅದಕ್ಕೆ ಪುಷ್ಟಿ ಎಂಬಂತೆ ನಿನ್ನೆ ಭಾನುವಾರ ಬೆಳಗ್ಗೆ ಮೈಸೂರಿನ ಖಾಸಗಿ ಹೊಟೇಲ್ ನ ಕೊಠಡಿಯಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ತಂಗಿದ್ದು ರಮ್ಯಾ ರಘುಪತಿ ಮುಂದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದು ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಕೊನೆಗೆ ಪೊಲೀಸರ ರಕ್ಷಣೆಯಲ್ಲಿ ಅವರು ಅಲ್ಲಿಂದ ಹೊರಹೋಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com