4 ಮೇಲ್ಸೇತುವೆ ನಿರ್ಮಿಸಲು ಬಿಬಿಎಂಪಿ ಸಜ್ಜು: ಅಂದಾಜು 230 ಕೋಟಿ ರೂ., 18 ತಿಂಗಳ ಗಡುವು!

ನಗರದಲ್ಲಿ ಸಂಚಾರ ಸುಗಮಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಇದರ ಬೆನ್ನಲ್ಲೇ ಮಹಾನಗರ ಪಾಲಿಕೆ ನಾಲ್ಕು ಹೊಸ ಮೇಲ್ಸೇತುವೆ ನಿರ್ಮಾಣದ ಯೋಜನಾ ವರದಿ(ಡಿಪಿಆರ್)ಗೆ ಸರ್ಕಾರದಿಂದ ಅನುಮತಿ ಪಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದಲ್ಲಿ ಸಂಚಾರ ಸುಗಮಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಇದರ ಬೆನ್ನಲ್ಲೇ ಮಹಾನಗರ ಪಾಲಿಕೆ ನಾಲ್ಕು ಹೊಸ ಮೇಲ್ಸೇತುವೆ ನಿರ್ಮಾಣದ ಯೋಜನಾ ವರದಿ(ಡಿಪಿಆರ್)ಗೆ ಸರ್ಕಾರದಿಂದ ಅನುಮತಿ ಪಡೆದಿದೆ.

ಫ್ಲೈಓವರ್‌ ನಿರ್ಮಾಣಕ್ಕಾಗಿ ಬಿಬಿಎಂಪಿ 404 ಕೋಟಿ ರೂಪಾಯಿ ಅನುದಾನ ಪಡೆದಿದೆ. ಇತ್ತಮಡು, ಜೆಸಿ ರಸ್ತೆ, ಸಾರಕ್ಕಿ ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮೇಲ್ಸೇತುವೆ ಯೋಜನೆಗಳನ್ನು 230 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು ಇದಕ್ಕಾಗಿ 18 ತಿಂಗಳ ಗಡುವು ಹಾಕಿಕೊಂಡಿದೆ.

ರಾಜ್ಯ ಸರ್ಕಾರದ ಅಮೃತ ನಾಗೋತ್ಥಾನದ ಅಡಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು ಏಳು ಮೇಲ್ಸೇತುವೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಜೆಸಿ ರಸ್ತೆ ಫ್ಲೈಓವರ್ ಒಂದು ಪ್ರಮುಖ ಯೋಜನೆಯಾಗಿದ್ದು, ಒಮ್ಮೆ ಪೂರ್ಣಗೊಂಡ ನಂತರ, ಇದು ಎರಡು ಬದಿಯ ವಾಹನ ಸಂಚಾರದೊಂದಿಗೆ ಸಿಟಿ ಮಾರ್ಕೆಟ್ ಫ್ಲೈಓವರ್ನ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಬಿಬಿಎಂಪಿ, ಯೋಜನೆಗಳ ಮುಖ್ಯ ಎಂಜಿನಿಯರ್ ಲೋಕೇಶ್ ಹೇಳಿದ್ದಾರೆ.

ವರದಿ ಪ್ರಕಾರ, ಇತ್ತಮಡುವಿನಿಂದ ಕಾಮಕ್ಯ ಜಂಕ್ಷನ್‌ಗೆ ಬಿಬಿಎಂಪಿ 40.50 ಕೋಟಿ ರೂ., ಬಸವೇಶ್ವರ ನಗರದಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆವರೆಗೆ 30.64 ರೂ., ಜೆಸಿ ರಸ್ತೆಯಿಂದ ಹಡ್ಸನ್ ವೃತ್ತಕ್ಕೆ 20. 64 ಕೋಟಿ ರೂ., ಸಾರಕ್ಕಿ ಜಂಕ್ಷನ್‌ನಿಂದ ಕನಕಪುರವರೆಗೆ ಅಂದಾಜು 20.64 ಕೋಟಿ ರೂ. ಹಾಗೂ ಮುಖ್ಯ ರಸ್ತೆಗೆ 130 ಕೋಟಿ ರೂ. ಅಂದಾಜಿಸಲಾಗಿದೆ.

ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ರವಿಕಾಂತೇಗೌಡ ಅವರು ಸಿಎಂ ಸಂಚಾರ ಸುಗಮಗೊಳಿಸಲು ನಗರದ ಕೆಲವೆಡೆ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ ಎಂದಿದ್ದಾರೆ. ಸಿಎಂ ಕಳೆದ ವಾರ ನಗರದ ವಿವಿಧ ಭಾಗಗಳಲ್ಲಿ ಟ್ರಾಫಿಕ್ ಸಿಂಕ್ರೊನೈಸೇಶನ್‌ಗೆ ತೆರಳಲು ಅಧಿಕಾರಿಗಳಿಗೆ ಸೂಚಿಸಿದ್ದರು. ನಗರದಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಸಲೆಗಳ ಕೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com