ಹಾಸನ: ಯೋಧರಿಬ್ಬರ ನಡುವಿನ ಜಮೀನು ವಿವಾದ ಕೊಲೆಯಲ್ಲಿ ಅಂತ್ಯ

ಬೇಲೂರು ತಾಲೂಕಿನ ತಿರುಮಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಇಬ್ಬರು ಯೋಧರ ಕುಟುಂಬಗಳ ನಡುವೆ ನಡೆದ ವಾಗ್ವಾದ ದುರಂತದಲ್ಲಿ ಅಂತ್ಯವಾಗಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಾಸನ: ಬೇಲೂರು ತಾಲೂಕಿನ ತಿರುಮಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಇಬ್ಬರು ಯೋಧರ ಕುಟುಂಬಗಳ ನಡುವೆ ನಡೆದ ವಾಗ್ವಾದ ದುರಂತದಲ್ಲಿ ಅಂತ್ಯವಾಗಿದೆ

ಇಲ್ಲಿನ ಬೇಲೂರು ತಾಲೂಕಿನ ತಿರುಮನಹಳ್ಳಿಯಲ್ಲಿ ಜಮೀನು ವಿಚಾರಕ್ಕೆ ನಡೆದ ಜಗಳವು ಕೊಲೆಯಲ್ಲಿಅಂತ್ಯವಾಗಿದೆ. ಯೋಧ ಯಶವಂತ್‌ ಎಂಬಾತ ಮೃತ ದುರ್ದೈವಿ.

ಯೋಧ ಚಂದನ್ ಮೇವು ಹಾಕುವ ಮೂಲಕ ವಾಕಿಂಗ್ ಪಾತ್ ಒತ್ತುವರಿ ಮಾಡಿಕೊಂಡಿದ್ದರು. ಅದನ್ನು ತೆರವುಗೊಳಿಸುವಂತೆ ಯಶವಂತ ಚಂದನ್ ಜೊತೆ ಜಗಳವಾಡಿದ್ದ ಎನ್ನಲಾಗಿದೆ. ಯೋಧರಿಬ್ಬರ ಕುಟುಂಬಗಳ ನಡುವೆ ಜಮೀನು ವಿಚಾರಕ್ಕೆ ಗಲಾಟೆ ಆಗಿದ್ದು, ಯೋಧ ಚಂದನ್‌ ಹಾಗೂ ಆತನ ಸಂಬಂಧಿಕರು, ಯಶವಂತ್‌ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವಗೊಂಡ ಯಶವಂತ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಯೋಧ ಚಂದನ್‌ ಯಶವಂತ್ ಹಾಗೂ ಆತನ ಸಹೋದರ ಯತೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿದ್ದ ಯಶವಂತ್‌ರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಯಶವಂತ್‌ ಸಹೋದರ, ಯೋಧ ಯತೀಶ್ ಕೂಡ ತೀವ್ರ ಗಾಯಗೊಂಡಿದ್ದು, ಅವರಿಗೆ ಖಾಸಗಿ‌‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಳೇಬೀಡು ಪೊಲೀಸರು ಚಂದನ್‌ನನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com