ಮಂತ್ರಾಲಯ ಗುರು ರಾಯರ ಸನ್ನಿಧಾನಕ್ಕೆ ರಾಹುಲ್ ಗಾಂಧಿ ಭೇಟಿ, ವಿಶೇಷ ಪೂಜೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ರಾತ್ರಿ ಮಂತ್ರಾಲಯದಲ್ಲಿರುವ ಪ್ರಸಿದ್ಧ ಗುರು ರಾಘವೇಂದ್ರ ಸ್ವಾಮಿಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ರಾಘವೇಂದ್ರ ಸ್ವಾಮಿ ದರ್ಶನ ಪಡೆದ ರಾಹುಲ್ ಗಾಂಧಿ
ರಾಘವೇಂದ್ರ ಸ್ವಾಮಿ ದರ್ಶನ ಪಡೆದ ರಾಹುಲ್ ಗಾಂಧಿ

ಆಂಧ್ರ ಪ್ರದೇಶ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ರಾತ್ರಿ ಮಂತ್ರಾಲಯದಲ್ಲಿರುವ ಪ್ರಸಿದ್ಧ ಗುರು ರಾಘವೇಂದ್ರ ಸ್ವಾಮಿಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಭಾರತ್ ಜೋಡೋ ಯಾತ್ರೆಯ 43 ನೇ ದಿನವಾದ ಗುರುವಾರ ರಾಹುಲ್ ಗಾಂಧಿ, ತಮ್ಮ ದಿನದ ವೇಳಾಪಟ್ಟಿಯ ಕೊನೆಯಲ್ಲಿ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನ ಪಡೆದರು. 

ಇದಕ್ಕೂ ಮುನ್ನ ಮುಗಟಿ, ಹಾಲಹರವಿಯಲ್ಲಿ ಐಕ್ಯತಾ ಯಾತ್ರೆ ನಡೆಸಿದರು. ಗುರುವಾರ ರಾತ್ರಿ ಮಂತ್ರಾಲಯದಲ್ಲಿಯೇ ತಂಗಿದ್ದ ರಾಹುಲ್ ಗಾಂಧಿ, ಶುಕ್ರವಾರ ಬೆಳಗ್ಗೆ ಮಂತ್ರಾಲಯದಿಂದ ಕರ್ನಾಟಕವನ್ನು ಮತ್ತೊಮ್ಮೆ ಪ್ರವೇಶಿಸಲಿದ್ದು, ಯಾತ್ರೆ ಮುಂದುವರೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com