ಶಿಥಿಲಾವಸ್ಥೆಯ ಕಟ್ಟಡಗಳು, ಆತಂಕದಲ್ಲಿ ಶಿಕ್ಷಣ ಸಾಗಿಸುತ್ತಿರುವ ಶಿಕ್ಷಕರು-ಮಕ್ಕಳು: ಹಲವು ಜಿಲ್ಲೆಗಳ ಸರ್ಕಾರಿ ಶಾಲೆಗಳು ಅಪಾಯದಲ್ಲಿ!

ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಕಳಪೆ ಮಟ್ಟದ್ದಾಗಿದೆ ಎಂಬುದು ಗೊತ್ತಿರುವ ವಿಚಾರವೇ. ಶಾಲೆಗಳ ಕಟ್ಟಡಗಳು ಅಪಾಯದ ಅಂಚಿನಲ್ಲಿದ್ದು ಎಚ್ಚರಿಕೆಯ ಗಂಟೆ ಬಡಿಯುತ್ತಿರುತ್ತವೆ.
ಸರ್ಕಾರಿ ಶಾಲೆಯೊಂದರ ಕಟ್ಟಡ
ಸರ್ಕಾರಿ ಶಾಲೆಯೊಂದರ ಕಟ್ಟಡ

ಬೆಂಗಳೂರು: ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ (Government Schools) ಗುಣಮಟ್ಟ ಕಳಪೆ ಮಟ್ಟದ್ದಾಗಿದೆ ಎಂಬುದು ಗೊತ್ತಿರುವ ವಿಚಾರವೇ. ಶಾಲೆಗಳ ಕಟ್ಟಡಗಳು ಅಪಾಯದ ಅಂಚಿನಲ್ಲಿದ್ದು ಎಚ್ಚರಿಕೆಯ ಗಂಟೆ ಬಡಿಯುತ್ತಿರುತ್ತವೆ, ಇನ್ನು ಶಾಲೆಗಳಲ್ಲಿ ಕಲಿಕೆ ಗುಣಮಟ್ಟ ಕೂಡ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು ದಶಕದ ಹಿಂದಿನ ಅಂಕಿಅಂಶವೊಂದು ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಗುಣಮಟ್ಟ ಕಳಪೆಯಾಗಿರುವುದರಿಂದ ದಾಖಲಾಗುವ ಮಕ್ಕಳ ಸಂಖ್ಯೆ ಸುಮಾರು 10 ಲಕ್ಷದಷ್ಟು ರಾಜ್ಯದಲ್ಲಿ ಇಳಿಕೆಯಾಗಿದೆ.

ರಾಜ್ಯದ ಅಲ್ಲಲ್ಲಿ ಶಾಲೆಗಳ ಕಟ್ಟಡಗಳು ಕುಸಿಯುವುದು, ಸರ್ಕಾರೇತರ ಸಂಘಟನೆಗಳು ರಿಪೇರಿ ಕೆಲಸಗಳನ್ನು ಮಾಡುವ ಬಗ್ಗೆ ವರದಿಗಳು ಕೇಳುತ್ತಿರುತ್ತದೆ. ಎನ್ ಜಿಒಗಳ ಪ್ರಯತ್ನ ಮತ್ತು ಸರ್ಕಾರ ಬಜೆಟ್ ನಲ್ಲಿ ಪ್ರತ್ಯೇಕ ಹಣವನ್ನು ಶಿಕ್ಷಣಕ್ಕೆ ಮೀಸಲಿಟ್ಟರೂ ಕೂಡ ಅನೇಕ ಶಾಲೆಗಳು ದುರಸ್ತಿ ಸ್ಥಿತಿಯಲ್ಲಿವೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ (New Indian express) ಪ್ರತಿನಿಧಿಗಳು ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಅನೇಕ ಆತಂಕಕಾರಿ ವಿಷಯಗಳು ತಿಳಿದುಬಂದಿವೆ. ಕರ್ನಾಟಕ ಸಾಕ್ಷರತೆ ಮತ್ತು ಶಿಕ್ಷಣ ಇಲಾಖೆಗಳು ನೀಡಿರುವ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ 47 ಸಾವಿರದ 608 ಸರ್ಕಾರಿ ಶಾಲೆಗಳಿದ್ದು 45.42 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಒಟ್ಟು ಸುಮಾರು 2.5 ಲಕ್ಷ ತರಗತಿಗಳಿವೆ. ಇವುಗಳಲ್ಲಿ 40 ಸಾವಿರ ತರಗತಿಗಳನ್ನು ತುರ್ತು ರಿಪೇರಿ ಮಾಡಬೇಕಿದೆ ಎಂದು ಸಾರ್ವಜನಿಕ ಸಲಹಾ ಆಯುಕ್ತ ಆರ್ ವಿಶಾಲ್ ಹೇಳುತ್ತಾರೆ. ಸರ್ಕಾರ ಈಗ ವಿವೇಕ ಯೋಜನೆ ಆರಂಭಿಸಲು ಯೋಜಿಸುತ್ತಿದ್ದು ಅದರಲ್ಲಿ 10 ಸಾವಿರ ತರಗತಿಗಳ ದುರಸ್ತಿಗೆ ಮುಂದಾಗಿದೆ.

ರಾಜ್ಯದ ಸರ್ಕಾರಿ ಶಾಲೆಗಳ ಸರಿಸುಮಾರು ಶೇಕಡಾ 20ರಷ್ಟು ತರಗತಿ ಕೊಠಡಿಗಳಿಗೆ ದುರಸ್ತಿ ಅಗತ್ಯವಿದೆ. ಅವುಗಳಲ್ಲಿ ಅರ್ಧದಷ್ಟು ಪ್ರಮುಖ ಕೂಲಂಕಷ ಪರೀಕ್ಷೆಯ ಅಗತ್ಯವಿರುತ್ತದೆ, ಪ್ರಾಜೆಕ್ಟ್ ವಿವೇಕ್ ಅಡಿಯಲ್ಲಿ, ದುರಸ್ತಿ ಅಗತ್ಯವಿರುವ ತರಗತಿ ಕೊಠಡಿಗಳನ್ನು ಅಖೈರುಗೊಳಿಸಲಾಗಿದೆ. ಹೆಚ್ಚುವರಿ ತರಗತಿ ಕೊಠಡಿಗಳ ಅಗತ್ಯವಿರುವ ಶಾಲೆಗಳು ಮತ್ತು ಈ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಸಹ ಪಟ್ಟಿ ಒಳಗೊಂಡಿದೆ ಎಂದು ಅವರು TNIE ಗೆ ತಿಳಿಸಿದರು. ಪ್ರಮುಖ ದುರಸ್ತಿಗೆ 5-8 ಲಕ್ಷ ರೂಪಾಯಿ ಬೇಕಾಗಬಹುದು. 

ಹಿಂದಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಿದ್ಧಪಡಿಸಿದ ವರದಿಯನ್ನು ಅನುಸರಿಸಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಈಗ, ಶಾಲೆಗಳ ದತ್ತಾಂಶವನ್ನು ಸಂಗ್ರಹಿಸಲು ಸಣ್ಣ ವರದಿಗಳನ್ನು ಮಾತ್ರ ದುರಸ್ತಿ ಮಾಡಲಾಗುತ್ತಿದೆ, ಆದರೆ ಸುರೇಶ್ ಕುಮಾರ್ ಅವರು ಶಿಕ್ಷಣ ಸಚಿವರಾಗಿದ್ದಾಗ ಸಿದ್ಧಪಡಿಸಿದಂತಹ ಯಾವುದೇ ಸಮಗ್ರ ದಾಖಲೆಯನ್ನು ಸಿದ್ಧಪಡಿಸಲಾಗುತ್ತಿಲ್ಲ ಎಂದು ಅವರು ಹೇಳಿದರು.

ಆದಾಗ್ಯೂ, ತಜ್ಞರು ಯೋಜನೆಯ ಪರಿಣಾಮದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಶಿಕ್ಷಣತಜ್ಞ ಡಾ.ನಿರಂಜನಾರಾಧ್ಯ ವಿ.ಪಿ, ಅಂಕಿಅಂಶಗಳ ಪ್ರಕಾರ, ಶಿಕ್ಷಣ ಹಕ್ಕು (RTE) ಕಾಯಿದೆಯಡಿ ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸುವಲ್ಲಿ ರಾಜ್ಯವು ಶೇಕಡಾ 23.6ರಷ್ಟು ಕಡಿಮೆ ಅನುಸರಣೆ ದರವನ್ನು ಹೊಂದಿದೆ. ಸೌಲಭ್ಯಗಳ ಕೊರತೆಯಿಂದಾಗಿ ಕಳೆದ ದಶಕದಲ್ಲಿ ದಾಖಲಾತಿ ಕಡಿಮೆಯಾಗಿದೆ. ನಾವು ಯೋಜನೆಗೆ ವಿರುದ್ಧವಾಗಿಲ್ಲದಿದ್ದರೂ, ಇದು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ನೀರು, ವಿದ್ಯುತ್‌ನಂತಹ ಸೌಲಭ್ಯಗಳಿಲ್ಲ. ಶಿಕ್ಷಕರ ಕೊರತೆಯೂ ತೀವ್ರವಾಗಿದೆ. ದಾಖಲಾತಿಯಲ್ಲಿ ಸ್ವಲ್ಪ ಹೆಚ್ಚಳವಾಗಿರುವುದು ಸಾಧನೆ ಎಂದು ಸಂಭ್ರಮಿಸಲಾಗುತ್ತಿದೆ. ಆದರೆ ಕೋವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಅನೇಕ ಪೋಷಕರು ಅನಿವಾರ್ಯವಾಗಿ ಸರ್ಕಾರಿ ಶಾಲೆಗೆ ದಾಖಲಿಸುತ್ತಿದ್ದಾರೆ. ಶಾಲೆಗಳು ಮತ್ತು ಶಿಕ್ಷಣದ ಮಟ್ಟವನ್ನು ಸುಧಾರಿಸಲು ರಾಜ್ಯವು ಹೆಚ್ಚು ಸಮಗ್ರ ವಿಧಾನದ ಕಡೆಗೆ ಕೆಲಸ ಮಾಡಬೇಕು ಎನ್ನುತ್ತಾರೆ.

ಯಾವುದೇ ಸಲಹಾ ಸಂಸ್ಥೆಯನ್ನು ಸ್ಥಾಪಿಸದ ಕಾರಣ ರಾಜ್ಯವು ಕಾಯ್ದೆಯನ್ನು ಸರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎಂದು ಅವರು ಗಮನ ಸೆಳೆದರು. "ಶಾಲೆಗಳು ಕೆಲವನ್ನು ಪೂರೈಸುತ್ತವೆ, ಆದರೆ ಎಲ್ಲಾ ಮಾನದಂಡಗಳನ್ನು ಪೂರೈಸುವುದಿಲ್ಲ. ಸರ್ಕಾರವು ಮಕ್ಕಳ ದೈಹಿಕ ಆಟಕ್ಕೆ ಒತ್ತು ನೀಡುತ್ತದೆ ಎಂದು ಹೇಳುತ್ತದೆ, ಆದರೆ ಆಟದ ಮೈದಾನಗಳಿಲ್ಲದಿದ್ದಾಗ ಹೇಗೆ ಸಾಧ್ಯ, ಅನೇಕ ಕಡೆಗಳಲ್ಲಿ ಸರ್ಕಾರಿ ಶಾಲೆಯದ್ದು ಇದೇ ಕಥೆ, ಕೇವಲ ಆಟದ ಮೈದಾನ ಮಾತ್ರವಲ್ಲ ಅನೇಕ ಇತರ ಮೂಲಭೂತ ಸೌಲಭ್ಯಗಳ ಕೊರತೆಯಿದೆ.

ಜಿಲ್ಲೆಗಳ ಸರ್ಕಾರಿ ಶಾಲೆಗಳ ಸ್ಥಿತಿಗತಿ ಹೇಗಿದೆ?
ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪೂಚಬೆಟ್ಟುವಿನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆ ಸ್ಥಿತಿಯಲ್ಲಿದೆ. ಅಪಾಯದ ಸ್ಥಿತಿಯಲ್ಲಿರುವ ಅದನ್ನು ಕೆಡವಲು ಎಂಜಿನಿಯರ್‌ಗಳು ಆದೇಶ ನೀಡಿದ್ದಾರೆ. ಈ ನಡುವೆ ತಾತ್ಕಾಲಿಕ ವ್ಯವಸ್ಥೆಯಾಗಿ ಸಮೀಪದ ಕಟ್ಟಡ ಹಾಗೂ ಕಾರ್ಯಕ್ರಮ ಸಭಾಂಗಣದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಹೊಸ ಕಟ್ಟಡ ಶೀಘ್ರದಲ್ಲೇ ಸಿದ್ಧವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಶಿಕ್ಷಣ ಮತ್ತು ಕಂದಾಯ ಇಲಾಖೆಗಳ ವರದಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 188 ಶಾಲಾ ಕಟ್ಟಡಗಳು ಹಾಳಾಗಿದ್ದು, ದುರಸ್ತಿ ಮಾಡಬೇಕಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ವರ್ಷ ಜೂನ್‌ನಲ್ಲಿ ಈ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಹಾನಿಯಾಗಿದೆ. ಡಿಡಿಪಿಐ ಎನ್.ಕೆ.ಶಿವರಾಜ್, ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲು 1.50 ಕೋಟಿ ರೂಪಾಯಿ ಕೇಳಲಾಗಿತ್ತು, ಆದರೆ ಈವರೆಗೆ 75 ಲಕ್ಷ ಬಿಡುಗಡೆಯಾಗಿದೆ. ಉಳಿದವು ಮುಂದಿನ ಕೆಲವು ದಿನಗಳಲ್ಲಿ ತಲುಪುವ ನಿರೀಕ್ಷೆಯಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಸ್ಥಳೀಯ ಶಾಸಕರೂ ತಲಾ 30 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದಾರೆ. 

ಕಲ್ಯಾಣ ಕರ್ನಾಟಕ: ಕಲ್ಯಾಣ-ಕರ್ನಾಟಕದ 8,028 ಪ್ರಾಥಮಿಕ ಶಾಲೆಗಳ ಪೈಕಿ 1,234 ಶಾಲೆಗಳು ಮತ್ತು 4,663 ತರಗತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ ಎಂದು ಶಿಕ್ಷಣ ಇಲಾಖೆ ಅಂಕಿಅಂಶ ನೀಡಿದೆ. ಒಟ್ಟು 1,193 ಪ್ರೌಢಶಾಲೆಗಳ ಪೈಕಿ 237 ಶಾಲೆಗಳು ಮತ್ತು 762 ತರಗತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಕಲಬುರಗಿಯಲ್ಲಿ ಅತಿ ಹೆಚ್ಚು 187 ತರಗತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಬಳ್ಳಾರಿಯಲ್ಲಿ 168, ಕೊಪ್ಪಳದಲ್ಲಿ 118, ರಾಯಚೂರಿನಲ್ಲಿ 100, ಯಾದಗಿರಿಯಲ್ಲಿ 97 ಹಾಗೂ ಬೀದರ್ ಜಿಲ್ಲೆಯಲ್ಲಿ 92 ತರಗತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ.

ಸಾಮಾಜಿಕ ಕಾರ್ಯಕರ್ತ ನಾಗಲಿಂಗಯ್ಯ ಮಠಪತಿ, ಈ ಭಾಗದ ಹಲವು ಶಾಲೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಶೌಚಾಲಯಗಳ ಸ್ಥಿತಿಗತಿ ಕುರಿತು ಇಲಾಖೆ ನೀಡಿರುವ ಅಂಕಿಅಂಶಗಳು ನಂಬಲರ್ಹವಾಗಿಲ್ಲ ಎಂದರು.

ಶಿವಮೊಗ್ಗ
ಶಿವಮೊಗ್ಗದ ಶಾಲೆಗಳ ಸ್ಥಿತಿ ಇತರ ಜಿಲ್ಲೆಗಳಲ್ಲಿರುವಂತೆ ಆತಂಕಕಾರಿಯಾಗಿಲ್ಲದಿದ್ದರೂ, ಹಲವು ಸಮಸ್ಯೆಗಳಿವೆ. ಅವೆಲ್ಲವೂ ಇನ್ನೂ ನಿರ್ವಹಣೆಯ ಕೆಲಸ ಆಗಬೇಕಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಜಿಲ್ಲೆಯಲ್ಲಿ 2,001 ಸರ್ಕಾರಿ ಶಾಲೆಗಳಿದ್ದು, 11,842 ತರಗತಿ ಕೊಠಡಿಗಳಿವೆ. ಅವುಗಳಲ್ಲಿ ಸುಮಾರು 2,000 ತರಗತಿ ಕೊಠಡಿಗಳಿಗೆ ನಿರ್ವಹಣಾ ಕಾರ್ಯದ ಅಗತ್ಯವಿದೆ ಅದನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು.

ಕಟ್ಟಡಗಳ ಲೆಕ್ಕಪರಿಶೋಧನೆ ನಡೆಸಿ ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್‌ಗಳು ವರದಿ ಸಲ್ಲಿಸಿದ್ದು, ಅದರ ಆಧಾರದ ಮೇಲೆ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದರು. ಸರ್ಕಾರದ ಯೋಜನೆಯಡಿ 236 ತರಗತಿ ಕೊಠಡಿಗಳನ್ನು ಸಹ ನಿರ್ಮಿಸಲಾಗುವುದು. 135 ಶಾಲೆಗಳಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲು ಸರಕಾರ ಹಣ ಮಂಜೂರು ಮಾಡಿದೆ. 232 ಶಾಲೆಗಳಲ್ಲಿ ಹೆಚ್ಚುವರಿ ಶೌಚಾಲಯ ನಿರ್ಮಾಣಕ್ಕೆ ಎಂಜಿಎನ್‌ಆರ್‌ಇಜಿಎ ಯೋಜನೆಯಡಿ 5.20 ಲಕ್ಷ ಅನುದಾನ ಮಂಜೂರಾಗಿದೆ ಎಂದರು.

ಚಿತ್ರದುರ್ಗ
ಶಾಲೆ ಕಟ್ಟಡ ಯಾವಾಗ ಕುಸಿಯಬಹುದು ಎಂದು ಗೊತ್ತಿಲ್ಲ. ನಮಗೆ ಬೇರೆ ದಾರಿ ಇಲ್ಲದ ಕಾರಣ ಈ ಕೊಠಡಿಗಳಲ್ಲಿ ಹೃದಯವನ್ನು ಬಾಯಲ್ಲಿಟ್ಟುಕೊಂಡು ಕುಳಿತಿದ್ದೇವೆ ಎಂದು ಚಿತ್ರದುರ್ಗದ ಸರ್ಕಾರಿ ಜೂನಿಯರ್ ಕಾಲೇಜಿನ 8ನೇ ತರಗತಿ ವಿದ್ಯಾರ್ಥಿ ಕಾರ್ತಿಕ್ ಹೇಳುತ್ತಾನೆ.  ಚಿತ್ರದುರ್ಗ ನಗರದಲ್ಲಿ 76 ವರ್ಷಗಳಷ್ಟು ಹಳೆಯದಾದ ಕಟ್ಟಡ ದಯನೀಯ ಸ್ಥಿತಿಯಲ್ಲಿದೆ. ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳು ಸರ್ಕಾರಕ್ಕೆ ಕಳುಹಿಸಿದ ವರದಿಯಲ್ಲಿ ಶಾಲೆಯನ್ನು ದುರಸ್ತಿಗಾಗಿ ಗುರುತಿಸಿದೆ.

ದಾವಣಗೆರೆ
ಡಿಡಿಪಿಐ ಜಿ.ತಿಪ್ಪೇಸ್ವಾಮಿ, ಬಹಳಷ್ಟು ತರಗತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು ತರಗತಿ ನಡೆಸಲು ಯೋಗ್ಯವಾಗಿಲ್ಲ. ಜಿಲ್ಲೆಯಲ್ಲಿ 72 ತರಗತಿ ಕೊಠಡಿಗಳನ್ನು ಕೆಡವಲು ಗುರುತಿಸಿದ್ದು, ಸರಕಾರಕ್ಕೆ ವರದಿ ಕಳುಹಿಸಿದ್ದೇವೆ. ದುರಸ್ತಿಗಾಗಿ ಆರು ತಾಲೂಕುಗಳಿಗೆ ತಲಾ 30 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ ಎಂದರು.

ಚಿತ್ರದುರ್ಗದ ಸರ್ಕಾರಿ ಬಾಲಕರ ಪ್ರೌಢಶಾಲೆ ಮತ್ತು ಜೂನಿಯರ್ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಎನ್.ದೊಡ್ಡಪ್ಪ, ‘ಕಟ್ಟಡ ಯಾವಾಗ ಬೀಳುತ್ತದೆಯೋ ಗೊತ್ತಿಲ್ಲ. ನಮ್ಮ ಮಕ್ಕಳು ಭಯದಿಂದ ಕುಳಿತಿದ್ದಾರೆ, ಈ ಮಧ್ಯೆ ತರಗತಿಗಳನ್ನು ನಡೆಸುವುದು ಅನಿವಾರ್ಯವಾಗಿದೆ ಎಂದು ಪರಿಸ್ಥಿತಿಯನ್ನು ಹೇಳಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com