ಮುರುಘಾ ಶ್ರೀಗಳ ಬಂಧನದಲ್ಲಿ ವಿಳಂಬವಾಗಿಲ್ಲ, ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಮುರುಘಾ ಮಠದ ಶ್ರೀಗಳ ಬಂಧನವಾಗಿದೆ, ತನಿಖೆಯಲ್ಲಿ ವಿಳಂಬವಾಗಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ಮುರುಘಾ ಸ್ವಾಮೀಜಿ
ಮುರುಘಾ ಸ್ವಾಮೀಜಿ

ಶಿವಮೊಗ್ಗ: ಮುರುಘಾ ಮಠದ ಶ್ರೀಗಳ ಬಂಧನವಾಗಿದೆ, ತನಿಖೆಯಲ್ಲಿ ವಿಳಂಬವಾಗಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.

ಇಂದು ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಕಾನೂನು ರೀತಿಯಲ್ಲಿ ಕೇಸಿನ ತನಿಖೆ ನಡೆಯುತ್ತದೆ. ಮಠ ಮತ್ತು ಚಿತ್ರದುರ್ಗದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದರು.

ಪೋಕ್ಸೋ ಕಾಯ್ದೆ ಪ್ರಕಾರ ಯಾರೆಲ್ಲರನ್ನು ಬಂಧಿಸಬೇಕೋ, ಯಾವ ರೀತಿ ತನಿಖೆಯಾಗಬೇಕೋ ಅದೆಲ್ಲವೂ ಕೂಡ ಕಾನೂನುಬದ್ಧವಾಗಿ ನಡೆಯುತ್ತದೆ. ಚಿತ್ರದುರ್ಗ ಡಿವೈಎಸ್ಪಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆಸಲಿದ್ದಾರೆ, ಯಾರ ಹಸ್ತಕ್ಷೇಪವಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com