ಆರ್ ಎಸ್ ಎಸ್ ನಿಷೇಧಿಸಬೇಕೆಂದು ಕೇಳುವುದೇ ದುರ್ದೈವ, ಸಿದ್ದರಾಮಯ್ಯರ ಈ ಮಟ್ಟಕ್ಕೆ ಇಳಿಯಬಾರದಾಗಿತ್ತು: ಸಿಎಂ ಬೊಮ್ಮಾಯಿ
ಆರ್ಎಸ್ಎಸ್ ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ದೊಡ್ಡ ದುರ್ದೈವ, ಅವರ ಹೇಳಿಕೆಗೆ ಆಧಾರಗಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Published: 30th September 2022 12:54 PM | Last Updated: 30th September 2022 02:18 PM | A+A A-

ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಆರ್ಎಸ್ಎಸ್ ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ದೊಡ್ಡ ದುರ್ದೈವ, ಅವರ ಹೇಳಿಕೆಗೆ ಆಧಾರಗಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿಯಾಗಿ, ವಿಪಕ್ಷ ನಾಯಕರಾಗಿ ಈ ಮಟ್ಟಕ್ಕೆ ಇಳಿಯಬಾರದಿತ್ತು. ಪಿಎಫ್ಐ ಏಕೆ ನಿಷೇಧಿಸಿದರು ಎಂದು ಕೇಳಲು ಅವರಲ್ಲಿ ಆಧಾರಗಳಿಲ್ಲ. ಹಿಂದೆ ಅವರೇ ಪಿಎಫ್ಐ ಮೇಲಿದ್ದ ಪ್ರಕರಣಗಳನ್ನು ಇವರೇ ಹಿಂಪಡೆದಿದ್ದರು. ಅದನ್ನು ಮರೆಮಾಚಲು ಆರ್ಎಸ್ಎಸ್ ನಿಷೇಧಿಸಿ ಎಂದು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ದೇಶಪ್ರೇಮಿಗಳು ಹಾಗೂ ಬಡವರಿಗೆ ನೆರವಾಗುತ್ತಿರುವ ಸಂಘಟನೆ ಆರ್ಎಸ್ಎಸ್. ದೇಶವು ಸಮಸ್ಯೆಗಳಿಗೆ ಸಿಲುಕಿದಾಗ ಆರ್ಎಸ್ಎಸ್ ಹಲವು ರೀತಿಯಲ್ಲಿ ನೆರವಿಗೆ ಬಂದಿದೆ. ದೇಶದಲ್ಲಿ ದೇಶಪ್ರೇಮ ಜಾಗೃತಿ ಮಾಡುತ್ತಿರುವ ಸಂಘಟನೆಯನ್ನು, ದೀನದಲಿತರು, ಬಡಮಕ್ಕಳಿಗೆ, ಅನಾಥರಿಗೆ, ದೇಶದಲ್ಲಿ ಪ್ರಕೃತಿ ವಿಕೋಪವಾಗುವಾಗ ನಿಲ್ಲುವ ಸಂಘಟನೆಯನ್ನು ನಿಷೇಧಿಸಬೇಕು ಎನ್ನುವುದು ದುರ್ದೈವ ಎಂದರು.
ನಂತರ ಮುಖ್ಯಮಂತ್ರಿಗಳು ಕೃಷ್ಣಾ ನದಿಗೆ ಕಟ್ಟಿರುವ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
#TNIE #Hubballi Chief Minister @BSBommai on PFI Vs RSS ban, lashes at CLP leader @siddaramaiah. @XpressBengaluru @Cloudnirad @ramupatil_TNIE @Amitsen_TNIE @Arunkumar_TNIE @BJP4India @BJP4Karnataka @INCKarnataka @HubliCityeGroup @hublimandi pic.twitter.com/nZoJepNF7e
— Pramodkumar Vaidya (@pramodvaidya06) September 30, 2022
The @CMofKarnataka @BSBommai offered bagina to Krishna River at Almatti Dam. Minister @GovindKarjol @CCPatilBJP & MLAs accompanied CM. @XpressBengaluru @KannadaPrabha @ramupatil_TNIE @naushadbijapur @AshwiniMS_TNIE @BasanagoudaBJP @NiraniMurugesh pic.twitter.com/T26Fzo4yRQ
— Mahesh M Goudar। ಮಹೇಶ್ ಮ ಗೌಡರ (@MahiPEN_TNIE) September 30, 2022