ಸಿಆರ್ ಪಿಎಫ್ ನೇಮಕಾತಿ: ಕನ್ನಡದಲ್ಲೂ ಪರೀಕ್ಷೆ ಬರೆಯಲು ಕೇಂದ್ರದ ಆದೇಶ, ಇದು ನಮ್ಮ ಹಕ್ಕು ಎಂದ ಜೆಡಿಎಸ್!

ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಹುದ್ದೆಗಳ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ದೇಶದ ಪ್ರಮುಖ ಬರೆಯುವಂತೆ ಕೇಂದ್ರ ಗೃಹ  ಸಚಿವಾಲಯ ಆದೇಶ ನೀಡಿದೆ. ಈ ಹಿಂದೆ ಈ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಷ್ಟೇ ಬರೆಯಬೇಕೆಂಬ ಸರ್ಕಾರದ ಆದೇಶಕ್ಕೆ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಸಿಆರ್ ಪಿಎಫ್ ಸಾಂದರ್ಭಿಕ ಚಿತ್ರ
ಸಿಆರ್ ಪಿಎಫ್ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಹುದ್ದೆಗಳ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ದೇಶದ ಪ್ರಮುಖ ಬರೆಯುವಂತೆ ಕೇಂದ್ರ ಗೃಹ  ಸಚಿವಾಲಯ ಆದೇಶ ನೀಡಿದೆ. ಈ ಹಿಂದೆ ಈ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಷ್ಟೇ ಬರೆಯಬೇಕೆಂಬ ಸರ್ಕಾರದ ಆದೇಶಕ್ಕೆ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಕನ್ನಡಿಗರ ಪರವಾದ ಒತ್ತಾಯಕ್ಕೆ ಮಣಿದು ಕೇಂದ್ರ ಗೃಹ ಸಚಿವಾಲಯ ಈ ಆದೇಶ ಹೊರಡಿಸಿದೆ. ಕನ್ನಡ ಸೇರಿದಂತೆ ದೇಶದ ಹಲವು ಭಾಷೆಗಳಿಗೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿದ್ದು, ವಿಶ್ವದಾದ್ಯಂತ ಕೋಟ್ಯಂತರ ಜನರು ಮಾತನಾಡುತ್ತಾರೆ. ಬಿಜೆಪಿಯ ಈ ಆದೇಶ ಅಮಿತ್ ಶಾ ಹೇಳಿದಂತೆ ಐತಿಹಾಸಿಕವಾಗಿ ಬಿಟ್ಟುಕೊಟ್ಟ ಔದಾರ್ಯವಲ್ಲ. ಇದು ನಮ್ಮ ಕನ್ನಡಿಗರ ಹಕ್ಕು ಎಂದಿದೆ.

ನಮ್ಮ ಭಾಷೆಯಲ್ಲಿ ಪರೀಕ್ಷೆ ಬರೆಯುವುದೂ ನಮ್ಮ ಹಕ್ಕು. ಅದನ್ನು ಈವರೆಗೆ ನಮಗೆ ನಿರಾಕರಿಸಲಾಗಿತ್ತು. ಈ ತಪ್ಪನ್ನು ತೀವ್ರ ಪ್ರತಿಭಟನೆಯ ಕಾರಣಕ್ಕೆ ಸರಿಪಡಿಸಲಾಗಿದೆ. ಇದರ ಕ್ರೆಡಿಟ್ ಕನ್ನಡಿಗರು ಮತ್ತು ಭಾಷಾಪ್ರೇಮಿಗಳಿಗೆ ಹೋಗಬೇಕೆ ಹೊರತು, ರಾಜ್ಯ ಬಿಜೆಪಿಯಂತಹ ಹಿಂದಿ ಪ್ರೇಮಿಗಳಿಗೆ ಅಲ್ಲ ಎಂದು ಟೀಕಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com