ಅಮಿತ್ ಶಾ ರೋಡ್ ಶೋ
ಅಮಿತ್ ಶಾ ರೋಡ್ ಶೋ

ಹಾಸನ: ಸಕಲೇಶಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ! ಸಿಮೆಂಟ್ ಮಂಜು ಪರ ಪ್ರಚಾರ

ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಸನ ಜಿಲ್ಲೆ ಸಕಲೇಶಪುರದಲ್ಲಿಂದು ಅಬ್ಬರದ ಪ್ರಚಾರ ನಡೆಸಿದರು.
Published on

ಸಕಲೇಶಪುರ: ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಸನ ಜಿಲ್ಲೆ ಸಕಲೇಶಪುರದಲ್ಲಿಂದು ಅಬ್ಬರದ ಪ್ರಚಾರ ನಡೆಸಿದರು. ತೆರೆದ ವಾಹನದಲ್ಲಿ ಜನರ ಹರ್ಷೋದ್ಘಾರ ಮಧ್ಯೆ ರೋಡ್ ಶೋ ನಡೆಸಿದ ಅಮಿತ್ ಶಾ, ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಪರ ಪ್ರಚಾರ ನಡೆಸಿದರು. ಪ್ರೀತಂ ಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಎನ್ ಐ ಜೊತೆಗೆ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ಜಾತಿವಾದಿ ಸ್ವಭಾವವನ್ನು ಹೊಂದಿದೆ, ಬಿಜೆಪಿ ತನ್ನೊಂದಿಗೆ ಎಲ್ಲಾ ವರ್ಗಗಳನ್ನು ತೆಗೆದುಕೊಳ್ಳುತ್ತಿದೆ. ಕರ್ನಾಟಕದಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಇದೇ ವೇಳೆ ರಾಹುಲ್ ಅವರ ಬಿಜೆಪಿ ಸರ್ಕಾರದ  40% ಕಮೀಷನ್ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಅಮಿತ್, ರಾಹುಲ್ ಖಚಿತವಾದ ಸಾಕ್ಷ್ಯ ಹೊಂದಿದ್ದರೆ ನ್ಯಾಯಾಲಯಕ್ಕೆ ಹೋಗಬೇಕು. ಯಾವುದೇ ತನಿಖೆಯೂ ಇಲ್ಲ ಅಥವಾ ಯಾವುದೇ ಪ್ರಕರಣವೂ ಇಲ್ಲ. ಇಂತಹ ಆಧಾರ ರಹಿತ ಆರೋಪಗಳನ್ನು ಜನ ಹೇಗೆ ನಂಬುತ್ತಾರೆ? ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ದೇಶಾದ್ಯಂತ ಅತ್ಯಂತ ಭ್ರಷ್ಟವಾಗಿದೆ. 40% ಕಮಿಷನ್ ತೆಗೆದುಕೊಳ್ಳುತ್ತಾರೆ. ಅದೇ ಹಣವನ್ನು ಹಿಂದಿನ ಸರ್ಕಾರದ ಶಾಸಕರ ಖರೀದಿಗೆ ಬಳಸಲಾಗುತ್ತಿತ್ತು. ಗೋವಾ, ಮಧ್ಯ ಪ್ರದೇಶ, ಕರ್ನಾಟಕ, ಈಶಾನ್ಯ ಶಾಸಕರನ್ನು ಖರೀದಿಸಲು ಬಳಸಿದ ಹಣದ ಮೂಲದ ಬಗ್ಗೆ ಪ್ರಧಾನಿ ತಿಳಿಸುವರೇ. ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com