ರಾಜ್ಯದಲ್ಲಿ ಮಾಲಿನ್ಯ ನಿಯಂತ್ರಿಸಿ, 2.4 ವರ್ಷಗಳ ಕಾಲ ಹೆಚ್ಚು ಬದುಕಿ: ವರದಿ

“ವಿಶ್ವ ಆರೋಗ್ಯ ಸಂಸ್ಥೆಯ PM 2.5 ಮಾರ್ಗಸೂಚಿಯ 5 μg/m³” ರ ಪ್ರಕಾರ, “ಕರ್ನಾಟಕ ರಾಜ್ಯವು ಸೂಕ್ಷ್ಮವಾದ ಕಣಗಳ ವಾಯು ಮಾಲಿನ್ಯವನ್ನು (PM 2.5) ನಿಯಂತ್ರಿಸಲು ಕಾರ್ಯ ನಿರ್ವಹಿಸಿದರೆ ಕರ್ನಾಟಕದಲ್ಲಿ ಜನರ ಜೀವಿತಾವಧಿ 2.4 ವರ್ಷಗಳಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ವಾಯು ಮಾಲಿನ್ಯ
ಬೆಂಗಳೂರಿನಲ್ಲಿ ವಾಯು ಮಾಲಿನ್ಯ

ಬೆಂಗಳೂರು: “ವಿಶ್ವ ಆರೋಗ್ಯ ಸಂಸ್ಥೆಯ PM 2.5 ಮಾರ್ಗಸೂಚಿಯ 5 μg/m³” ರ ಪ್ರಕಾರ, “ಕರ್ನಾಟಕ ರಾಜ್ಯವು ಸೂಕ್ಷ್ಮವಾದ ಕಣಗಳ ವಾಯು ಮಾಲಿನ್ಯವನ್ನು (PM 2.5) ನಿಯಂತ್ರಿಸಲು ಕಾರ್ಯ ನಿರ್ವಹಿಸಿದರೆ ಕರ್ನಾಟಕದಲ್ಲಿ ಜನರ ಜೀವಿತಾವಧಿ 2.4 ವರ್ಷಗಳಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್ ಮಂಗಳವಾರ ಬಿಡುಗಡೆ ಮಾಡಿದ ಲೈಫ್ ಇಂಡೆಕ್ಸ್ (ಎಕ್ಯೂಎಲ್‌ಐ) ವರದಿಯಲ್ಲಿ ಈ ಅಂಶ ಉಲ್ಲೇಖವಾಗಿದ್ದು, ಕರ್ನಾಟಕವು ಭಾರತದ ಹತ್ತು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ ಮತ್ತು ಪ್ರಸ್ತುತ ಅದರ ವಾರ್ಷಿಕ ಸರಾಸರಿ ಕಣಗಳ ಸಾಂದ್ರತೆಯು 29.5 μg/m³ ಆಗಿದೆ.

AQLI ವರದಿಯು ಭಾರತದ ಎಲ್ಲಾ 1.3 ಶತಕೋಟಿ ಜನರು ವಾರ್ಷಿಕ ಸರಾಸರಿ ಕಣಗಳ ಮಾಲಿನ್ಯದ ಮಟ್ಟವು WHO (ವಿಶ್ವ ಆರೋಗ್ಯ ಸಂಸ್ಥೆ) ಮಾರ್ಗಸೂಚಿಯನ್ನು ಮೀರಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಎತ್ತಿ ತೋರಿಸಿದೆ, ಆದರೆ 67.4 ರಷ್ಟು ಜನಸಂಖ್ಯೆಯು ದೇಶದ ಸ್ವಂತ ರಾಷ್ಟ್ರೀಯ ವಾಯು ಗುಣಮಟ್ಟದ ಮಾನದಂಡವಾದ 40 μg/m3 ಅನ್ನು ಮೀರಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದೆ.

ಬೆಂಗಳೂರು ಮೂಲದ ಎನ್‌ಜಿಒ ಗ್ರೀನ್‌ಪೀಸ್ ಇಂಡಿಯಾದ ಅವಿನಾಶ್ ಕುಮಾರ್ ಚಂಚಲ್ ಅವರು ಈ ಬಗ್ಗೆ ಮಾತನಾಡಿ, "ಈ ವರದಿಯು ಕರ್ನಾಟಕದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಬೇಕು ಮತ್ತು ರಾಜ್ಯದಲ್ಲಿ ಮಾಲಿನ್ಯವನ್ನು ಎದುರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕುೃ. ಮಾಲಿನ್ಯವನ್ನು ಕಡಿಮೆ ಮಾಡಲು ಕ್ರಿಯಾ ಯೋಜನೆಯನ್ನು ಹೊಂದಿಲ್ಲದ ಹಲವಾರು ನಗರಗಳು ರಾಜ್ಯದಲ್ಲಿವೆ ಎಂದು ಹೇಳಿದರು.

ಪಳೆಯುಳಿಕೆ ಇಂಧನಗಳ ಸುಡುವಿಕೆ, ತ್ಯಾಜ್ಯ ಸುಡುವಿಕೆಯಿಂದ ಹೊರಸೂಸುವಿಕೆ ಅಥವಾ ನಿರ್ಮಾಣ ಸ್ಥಳ ಅಥವಾ ರಸ್ತೆಯಲ್ಲಿ ಸಂಭವಿಸುವ ಮಾಲಿನ್ಯ ಸೇರಿದಂತೆ ಮಾಲಿನ್ಯಕ್ಕೆ ಎಲ್ಲಾ ವಲಯಗಳ ಕೊಡುಗೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಕಾಂಕ್ರೀಟ್ ಯೋಜನೆಯನ್ನು ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ಮುಂಬರುವ ವರ್ಷಗಳಲ್ಲಿ ರಾಜ್ಯವು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿಗೆ ಒಳಗಾಗುತ್ತದೆ. ಅಂತೆಯೇ ಬೆಂಗಳೂರಿನ ರಸ್ತೆ ಮೂಲಸೌಕರ್ಯಗಳ ಮೇಲೆ ಹೆಚ್ಚು ಗಮನಹರಿಸುವುದು ಕಾರು ಕೇಂದ್ರಿತವಾಗಿದೆ ಎಂದು ತಜ್ಞರು ಗಮನಿಸಿದ್ದಾರೆ. 

"ಫ್ಲೈಓವರ್‌ಗಳು ಮತ್ತು ಸುರಂಗ ರಸ್ತೆಗಳ ನಿರ್ಮಾಣವನ್ನು ಒಳಗೊಂಡಿರುವ ರಸ್ತೆ ಮೂಲಸೌಕರ್ಯವು ಸಾರ್ವಜನಿಕ ಸಾರಿಗೆಗಿಂತ ಹೆಚ್ಚು ನಾಲ್ಕು ಚಕ್ರದ ವಾಹನಗಳನ್ನು ಉತ್ತೇಜಿಸುತ್ತದೆ. ಇದನ್ನು ಉತ್ತೇಜಿಸುವ ಬದಲು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸಂಯೋಜಿಸಲು ಮತ್ತು ಮೋಟಾರುರಹಿತ ಸಾರಿಗೆಗೆ ಮೂಲಸೌಕರ್ಯಗಳನ್ನು ನಿರ್ಮಿಸಲು ಸರ್ಕಾರ ಗಮನಹರಿಸಬೇಕು. ಮಾಲಿನ್ಯವನ್ನು ನಿಗ್ರಹಿಸುವಲ್ಲಿ ಇದು ಪ್ರಮುಖ ಕೊಡುಗೆಯಾಗಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಕಣಗಳ ಮಾಲಿನ್ಯವು ಮಾನವನ ಆರೋಗ್ಯಕ್ಕೆ ದೊಡ್ಡ ಅಪಾಯವಾಗಿದೆ ಎಂದು ವರದಿಯು ಗಮನಿಸಿದ್ದು, ಮಾಲಿನ್ಯದಿಂದ ಸರಾಸರಿ ಭಾರತೀಯ ಜೀವನದ ಆಯಸ್ಸಿನಲ್ಲಿ 5.3 ವರ್ಷಗಳನ್ನು ಕಡಿತಗೊಳಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಹೃದಯರಕ್ತನಾಳದ ಕಾಯಿಲೆಗಳು ಸರಾಸರಿ ಭಾರತೀಯರ ಜೀವಿತಾವಧಿಯನ್ನು ಸುಮಾರು 4.5 ವರ್ಷಗಳಷ್ಟು ಕಡಿಮೆಗೊಳಿಸುತ್ತದೆ. ಇವುಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ದೊಡ್ಡ ಆರೋಗ್ಯ ಸಮಸ್ಯೆ ಎಂದು ಬಿಂಬಿಸುವ ಮಗು ಮತ್ತು ತಾಯಿಯ ಅಪೌಷ್ಟಿಕತೆಯು ಕೇವಲ 1.8 ವರ್ಷಗಳ ಆಯಸ್ಸನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com