ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಸಿಬಿಐ ನೊಟೀಸ್: ಫೆ.22ರೊಳಗೆ ವಿಚಾರಣೆಗೆ ಹಾಜರಾಗಲು ಸೂಚನೆ

ರಾಜ್ಯ ಚುನಾವಣೆ ಹೊಸ್ತಿಲಿನಲ್ಲಿ, ಬಿರುಸಿನ ಚುನಾವಣಾ ಚಟುವಟಿಕೆಗಳು, ರಾಜಕೀಯ ಒತ್ತಡದ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಸಿಬಿಐ ನೊಟೀಸ್ ಕಳುಹಿಸಿದೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್
Updated on

ಬೆಂಗಳೂರು: ರಾಜ್ಯ ಚುನಾವಣೆ ಹೊಸ್ತಿಲಿನಲ್ಲಿ, ಬಿರುಸಿನ ಚುನಾವಣಾ ಚಟುವಟಿಕೆಗಳು, ರಾಜಕೀಯ ಒತ್ತಡದ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಸಿಬಿಐ ನೊಟೀಸ್ ಕಳುಹಿಸಿದೆ.

ಫೆಬ್ರವರಿ 22ರೊಳಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನಲ್ಲಿ ಡಿ ಕೆ ಶಿವಕುಮಾರ್ ಗೆ ಸೂಚಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ನನ್ನ ಮಗಳ ಶಿಕ್ಷಣ ಸಂಸ್ಥೆಗೆ ನೊಟೀಸ್ ಬಂದಿದೆ. ಮಗಳ ಶಾಲೆಯ ಫೀಸು ಎಷ್ಟಿದೆ, ಪರೀಕ್ಷೆ ಫಲಿತಾಂಶ ವಿವರ ಕೇಳಿ ಸಿಬಿಐನವರು ನೊಟೀಸ್ ಕಳುಹಿಸಿದ್ದಾರೆ. ನಾನು ಏನು ಉತ್ತರ ಕೊಡಲಿ,ಎಲ್ಲವನ್ನೂ ಅವರಿಗೆ ಬಿಟ್ಟುಬಿಟ್ಟಿದ್ದೀನಿ ಎಂದರು. 

ಈ ನೊಟೀಸ್ ವಿರೋಧ ಪಕ್ಷಗಳ ಕುತಂತ್ರವಾಗಿದೆ, ಕೆಲ ಸಮಯಗಳ ಹಿಂದಷ್ಟೇ ಇಡಿ ನೊಟೀಸ್ ಬಂದು ಉತ್ತರ ಕೊಟ್ಟು ಬಂದಿದ್ದೆ. ಈಗ ಮತ್ತೆ ಹೋಗ್ಬೇಕು, ರಾಜಕೀಯ ಒತ್ತಡ ಮಧ್ಯೆ ನಾನು ಏನು ಮಾಡಲಿ ಹೇಳಿ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com