ಸಕಲೇಶಪುರದ ಕಾಫಿ ಎಸ್ಟೇಟ್‌ನಿಂದ ಆರು ಮಂದಿ ಜೀತ ಕಾರ್ಮಿಕರ ರಕ್ಷಣೆ

ಇತ್ತೀಚೆಗೆ ಸಕಲೇಶಪುರ ತಾಲೂಕಿನ ಕಾಫಿ ಎಸ್ಟೇಟ್‌ನಿಂದ ಅಕ್ರಮ ಬಂಧನದಲ್ಲಿದ್ದ ಚಿಕ್ಕಮಗಳೂರು ಮೂಲದ ಆರು ಜನ ಜೀತ ಕಾರ್ಮಿಕರನ್ನು ಜಿಲ್ಲಾಡಳಿತ ರಕ್ಷಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಹಾಸನ: ಇತ್ತೀಚೆಗೆ ಸಕಲೇಶಪುರ ತಾಲೂಕಿನ ಕಾಫಿ ಎಸ್ಟೇಟ್‌ನಿಂದ ಅಕ್ರಮ ಬಂಧನದಲ್ಲಿದ್ದ ಚಿಕ್ಕಮಗಳೂರು ಮೂಲದ ಆರು ಜನ ಜೀತ ಕಾರ್ಮಿಕರನ್ನು ಜಿಲ್ಲಾಡಳಿತ ರಕ್ಷಿಸಿದೆ. ಈ ಕಾರ್ಮಿಕರನ್ನು ತರೀಕೆರೆ ತಾಲೂಕಿನ ನಂದಿಬಟ್ಟಲು ಕಾಲೋನಿಯ ಅಭಿರಾಜ್ (47 )ಪತ್ನಿ ಚಂದ್ರಮ್ಮ (45) ಚಿಕ್ಕಮಗಳೂರಿನ ಹುಣಸೆಹಳ್ಳಿ ಗ್ರಾಮದ ಅಜಯ್ (32) ಅವರ ಪತ್ನಿ ಸುಮಾ (27)ಮತ್ತು ಅವರ ಮಕ್ಕಳಾದ ರೋಹಿತ್ (6) ಮತ್ತು ಶಕ್ತಿವೇಲು (8)ಎಂದು ಗುರುತಿಸಲಾಗಿದೆ. 

ಈ ಕುಟುಂಬದ ಸದಸ್ಯರು ಹನಬಾಳ್ ಹೋಬಳಿಯ ಅಚ್ಚರಾಡಿ ಗ್ರಾಮದ ಸುನಂದಾ ಎಂಬುವರಿಗೆ ಸೇರಿದ ಕಾಫಿ ಎಸ್ಟೇಟ್‌ನಲ್ಲಿ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಅಭಿರಾಜ್ ಕುಟುಂಬ 90 ಸಾವಿರ ಮತ್ತು ಅಜಯ್ ಕುಟುಂಬ ಜೀವನೋಪಾಯಕ್ಕಾಗಿ ಸುನಂದಾ ಅವರಿಂದ 2.90 ಲಕ್ಷ ಸಾಲ ಪಡೆದಿದ್ದರು ಎಂದು ಇತ್ತೀಚೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಕಲೇಶಪುರ ಉಪ ವಿಭಾಗದ ಸಹಾಯಕ ಆಯುಕ್ತರು ನೀಡಿದ ವರದಿಯಲ್ಲಿ ಹೇಳಲಾಗಿದೆ. 

ಕಾಫಿ ಎಸ್ಟೇಟ್ ಮಾಲೀಕರು ಕೂಲಿ ನೀಡದೆ ಆಹಾರಕ್ಕಾಗಿ ಆಹಾರ ಧಾನ್ಯಗಳನ್ನು ಮಾತ್ರ ನೀಡುತ್ತಿದ್ದಾರೆ ಎಂದು ಅಭಿರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಾಲೀಕರು ಆಗಾಗ್ಗೆ ಅಸಭ್ಯ ಭಾಷೆಯಿಂದ ನಿಂದಿಸುತ್ತಾರೆ ಮತ್ತು ಶಕ್ತಿವೇಲು ಮತ್ತು ಅಜಯ್‌ ಶಿಕ್ಷಣಕ್ಕೆ ವಿರೋಧಿಸುವುದ ಜೊತೆಗೆ ಯಾವುದೇ ಸಂದರ್ಭದಲ್ಲೂ ರಜೆ ಕೊಡಲ್ಲ, ಅವರು ಸಹ  ಪ್ರತಿದಿನ ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. 

ಕಾಫಿ ಎಸ್ಟೇಟ್ ಮಾಲೀಕರು ಎರಡು ವರ್ಷಗಳಿಂದ ಸಾಲದ ಖಾತೆಗೆ ಸರಿಹೊಂದಿಸಲಾದ ವೇತನದ ಅಂಕಿಅಂಶಗಳನ್ನು ಎಂದಿಗೂ ನೀಡಿಲ್ಲಎಂದು ರಕ್ಷಿಸಲ್ಪಟ್ಟ ಜೀತ ಕಾರ್ಮಿಕರು ಹೇಳಿದರು. ಇವರಿಗೆ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಸಕಲೇಶಪುರ ಎಸಿ ಹಾಗೂ ಡಿವೈಎಸ್ಪಿ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಕಾಫಿ ಎಸ್ಟೇಟ್ ಮೇಲೆ ದಾಳಿ ನಡೆಸಿ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಪ್ರತಿ ಬಂಧಿತ ಕಾರ್ಮಿಕರಿಗೆ ಜಿಲ್ಲಾ ಪ್ರಾಧಿಕಾರದಿಂದ 30 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com