ಹಂಪಿಯಲ್ಲಿ ಮೂರು ದಿನಗಳಿಂದ ನಡೆದ ಜಿ-20 ಶೆರ್ಪಾ ಸಭೆ ಮುಕ್ತಾಯ

ಭಾರತೀಯ ನಿಯೋಗದ ಮುಖ್ಯಸ್ಥ (ಶೆರ್ಪಾ ಮುಖ್ಯಸ್ಥ) ಅಮಿತಾಭ್ ಕಾಂತ್ ಅಧ್ಯಕ್ಷತೆಯಲ್ಲಿ ಪಾರಂಪರಿಕ ತಾಣ ಹಂಪಿಯಲ್ಲಿ ನಡೆದ ಜಿ20 ಶೆರ್ಪಾ ಮೂರನೇ ಸಭೆ ಭಾನುವಾರ ಮುಕ್ತಾಯಗೊಂಡಿತು.
ಹಂಪಿ
ಹಂಪಿ
Updated on

ಹಂಪಿ: ಭಾರತೀಯ ನಿಯೋಗದ ಮುಖ್ಯಸ್ಥ (ಶೆರ್ಪಾ ಮುಖ್ಯಸ್ಥ) ಅಮಿತಾಭ್ ಕಾಂತ್ ಅಧ್ಯಕ್ಷತೆಯಲ್ಲಿ ಪಾರಂಪರಿಕ ತಾಣ ಹಂಪಿಯಲ್ಲಿ ನಡೆದ ಜಿ20 ಶೆರ್ಪಾ ಮೂರನೇ ಸಭೆ ಭಾನುವಾರ ಮುಕ್ತಾಯಗೊಂಡಿತು. ಜಿ-20 ದೇಶಗಳ 120 ಕ್ಕೂ ಹೆಚ್ಚು ಪ್ರತಿನಿಧಿಗಳು, ಆಹ್ವಾನಿತ ದೇಶಗಳು ಮತ್ತು ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳು ಜಂಟಿಯಾಗಿ 'ಲೀಡರ್ಸ್ ಡಿಕ್ಲರೇಶನ್' ಕರಡು  ರಚನೆಗೆ ಭಾಗವಹಿಸಿದ್ದರು. 

'ಒಂದು ಜಗತ್ತು, ಒಂದು ಕುಟುಂಬ' ಪರಿಕಲ್ಪನೆಯಡಿ ಪರಿವರ್ತಕ, ಕ್ರಿಯಾ-ಆಧಾರಿತ ಉಪಕ್ರಮಗಳನ್ನು ಪೋಷಿಸುವ ಗುರಿಯೊಂದಿಗೆ ಸಭೆಯಲ್ಲಿ ಸಮಗ್ರವಾಗಿ ಚರ್ಚೆ ನಡೆಸಲಾಯಿತು. ಶೆರ್ಪಾಗಳು ಮತ್ತು ನಿಯೋಗಗಳ ಮುಖ್ಯಸ್ಥರು ನಾಯಕರ ಘೋಷಣೆಯ ಕರಡು ರಚನೆಯಲ್ಲಿ ಕಾರ್ಯ ನಿರ್ವಹಿಸಿದರು. ಇದು ನಿರ್ಣಾಯಕ ಜಾಗತಿಕ ಸಮಸ್ಯೆಗಳ ಮೇಲೆ ಪ್ರಗತಿಯನ್ನು ಹೆಚ್ಚಿಸಲು ಜಿ-20 ರಾಷ್ಟ್ರಗಳ ಸಾಮೂಹಿಕ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಮತ್ತು ಸಮರ್ಥನೀಯ ಅಭಿವೃದ್ಧಿಗೆ ಆದ್ಯತೆ ಮತ್ತು ಸವಾಲುಗಳನ್ನು ನಿಭಾಯಿಸಲು ಬದ್ಧವಾಗಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂತ್, ಕರಡು ಪಠ್ಯವು ಸುಸ್ಥಿರ ಅಭಿವೃದ್ಧಿ ಗುರಿಗಳು, ಹಸಿರು ಅಭಿವೃದ್ಧಿ, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಸುಧಾರಣೆಗಳು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಲಿಂಗ ಸಮಾನತೆ ಸೇರಿದಂತೆ ಆರು ಆದ್ಯತೆಗಳು ಮತ್ತು ವಿವಿಧ ಕಾರ್ಯ ಗುಂಪುಗಳ ಫಲಿತಾಂಶಗಳನ್ನು ಒಳಗೊಂಡಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com