ಬೆಂಗಳೂರು: ಎನ್‌ಇಪಿ ಬದಲಿಗೆ ಕರ್ನಾಟಕದಲ್ಲಿ ಪ್ರಗತಿಪರ ಶಿಕ್ಷಣ ನೀತಿಗೆ ಸಚಿವರು, ತಜ್ಞರ ಸಲಹೆ!

2020 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವಿರುದ್ಧ ಕರ್ನಾಟಕದ ಶಿಕ್ಷಣ ಸಚಿವರು ಮತ್ತು ತಜ್ಞರು  ವಿರೋಧ ವ್ಯಕ್ತ ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ತಜ್ಞರ ಸಭೆ
ಬೆಂಗಳೂರಿನಲ್ಲಿ ನಡೆದ ತಜ್ಞರ ಸಭೆ

ಬೆಂಗಳೂರು: 2020 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವಿರುದ್ಧ ಕರ್ನಾಟಕದ ಶಿಕ್ಷಣ ಸಚಿವರು ಮತ್ತು ತಜ್ಞರು  ವಿರೋಧ ವ್ಯಕ್ತ ಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಈ ನೀತಿಯು ಸಮಾನತೆ ಮತ್ತು ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆ ತಂದಿದೆ. ಎನ್‌ಇಪಿ ಕೇವಲ ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯ ನಕಲು ಎಂದು ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಪ್ರತಿಪಾದಿಸಿದ್ದಾರೆ.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ, ಕರ್ನಾಟಕ (ಎಐಎಸ್‌ಇಸಿ) ಶುಕ್ರವಾರ ಇಲ್ಲಿ ಆಯೋಜಿಸಿದ್ದ ಶಿಕ್ಷಣ ಸಮಾವೇಶದಲ್ಲಿ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಕರ್ನಾಟಕವು ಶಿಕ್ಷಣಕ್ಕಾಗಿ ಜನಪರ ನೀತಿಯನ್ನು ಜಾರಿಗೆ ತರಲಿದೆ. ಸರಕಾರವು ಹಕ್ಕು ಮತ್ತು ನ್ಯಾಯಯುತ ಶಿಕ್ಷಣ ನೀತಿಯನ್ನು ರೂಪಿಸಲು ಶ್ರಮಿಸುತ್ತದೆ. ರಾಜ್ಯದ ಪ್ರಗತಿಪರ ಶಿಕ್ಷಣ ತಜ್ಞರಿಂದ ಶಿಫಾರಸುಗಳು ಮತ್ತು ಮಾರ್ಗದರ್ಶನವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಈ  ನೀತಿಯನ್ನು ಯಾವುದೇ ಪೂರ್ವಸಿದ್ಧತೆ ಇಲ್ಲದೆ ಜಾರಿಗೆ ತಂದಿದೆ. ಇದು ಅಂಡರ್ಲೈನ್ಡ್ ಅಜೆಂಡಾ ಹೊಂದಿದೆ ಎಂದು ಸುಧಾಕರ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯಗಳಿಂದ ಬಂದ ಶೇ. 33 ರಷ್ಟು ಅಲ್ಪಸಂಖ್ಯಾತ ಸಮುದಾಯದ ಮಕ್ಕಳನ್ನು ಪರಿಗಣಿಸಿಲ್ಲ ಎಂದು ಅವರು ಹೇಳಿದರು.

ಅಂಗನವಾಡಿಗಳನ್ನು ಪ್ರಿ-ಸ್ಕೂಲ್‌ಗಳಾಗಿ ಪರಿವರ್ತಿಸುವ ಮತ್ತು ದಾಖಲಾತಿ ಸುಧಾರಿಸುವ  ಹಾಗೂ ರಾಜ್ಯದ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಸುಧಾರಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

2020ರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವಾಗ ಬಿಜೆಪಿ ಸರ್ಕಾರವು ಎಲ್ಲಾ ತತ್ವಗಳು ಮತ್ತು ನೀತಿಗಳನ್ನು ಉಲ್ಲಂಘಿಸಿದೆ. ಯಾವುದೇ , ತಜ್ಞರ ಶಿಫಾರಸುಗಳು ಅಥವಾ ನೀತಿಯ ಪ್ರಜಾಸತ್ತಾತ್ಮಕ ಸಂಸತ್ತಿನ ಜಾರಿಯಾಗಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಹೇಳಿದ್ದಾರೆ.

ವಿದ್ಯಾರ್ಥಿಗಳಲ್ಲಿ ಉತ್ತಮ ಸ್ವಭಾವ ಮತ್ತು ಸದೃಢ ವ್ಯಕ್ತಿತ್ವವನ್ನು ರೂಪಿಸಲು ಸಹಾಯ ಮಾಡುವ ಪ್ರಗತಿಪರ ಮತ್ತು ವೈಜ್ಞಾನಿಕ ಶಿಕ್ಷಣ ನೀತಿಯನ್ನು ರೂಪಿಸುವ ಅಗತ್ಯವನ್ನು  ಒತ್ತಿ ಹೇಳಿದ್ದಾರೆ.

ಎನ್‌ಇಪಿಯನ್ನು ತರಾತುರಿಯಲ್ಲಿ ಜಾರಿಗೊಳಿಸಲಾಗಿದೆ ಮತ್ತು ಕೆಲವರ ಸವಲತ್ತುಗಳಿಗಾಗಿ ರೂಪಿಸಲಾಗಿದೆ ಎಂದು  ಯುಜಿಸಿ ಮಾಜಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್‌ನಂತಹ ಹಲವಾರು ಶಿಕ್ಷಣ ತಜ್ಞರುಅಭಿಪ್ರಾಯಪಟ್ಟಿದ್ದಾರೆ. ಸಮಾನತೆ, ಭ್ರಾತೃತ್ವ ಮತ್ತು ಸಮಾಜವಾದಿ ಮೌಲ್ಯಗಳನ್ನು ಆಧರಿಸಿದ ರಾಜ್ಯ ಶಿಕ್ಷಣ ನೀತಿಗೆ ಅವರು ಕರೆ ನೀಡಿದರು.

ಎಎಸ್‌ಐಇಸಿ ಉಪಾಧ್ಯಕ್ಷ ರಾಜಶೇಖರ್ ವಿ ಎನ್ ಮಾತನಾಡಿ, ಪಠ್ಯಪುಸ್ತಕಗಳು ರಾಜಕೀಯ ಸಾಧನಗಳಾಗಬಾರದು ಮತ್ತು ಅವೈಜ್ಞಾನಿಕ ದೃಷ್ಟಿಕೋನಗಳಿಂದ ಮುಕ್ತವಾದ ನೈಜ ಜ್ಞಾನವನ್ನು ಹರಡುವ ಮಾಧ್ಯಮವಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅರ್ಹ ಶಿಕ್ಷಕರ ನೇಮಕಾತಿಯನ್ನು ಕೈಗೊಳ್ಳಬೇಕು ಮತ್ತು ಅತಿಥಿ ಶಿಕ್ಷಕರ ಸೇವೆಗಳನ್ನು ಕ್ರಮಬದ್ಧಗೊಳಿಸುವುದರಿಂದ ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಬಹುದು ಎಂದು ಮತ್ತೊಬ್ಬ ತಜ್ಞರು  ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com