ಧಾರವಾಡ: ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ಸಿ ಮಹದೇವಪ್ಪ ಅವರು ತಮ್ಮ ಗನ್ಮ್ಯಾನ್ ಕೈಯಿಂದ ಶೂ ಹಾಕಿಸಿಕೊಂಡಿದ್ದಾರೆ ಎಂದು ಹೇಳಲಾದ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮೂಲಗಳ ಪ್ರಕಾರ, ಸಚಿವರು ಧಾರವಾಡದ ಡಿಸಿ ಕೌಂಪೌಂಡ್ ಬಳಿ ಇರುವ ಗೌರಿಶಂಕರ ಹಾಸ್ಟೆಲ್ಗೆ ಪರಿಶೀಲನೆಗೆಂದು ಬಂದಿದ್ದರು. ಈ ವೇಳೆ ಈ ಘಟನೆ ನಡೆದಿದೆ.
ಹಾಸ್ಟೆಲ್ನ ಅಡುಗೆ ಮನೆ ದ್ವಾರದಲ್ಲಿ ತಮ್ಮ ಶೂ ಕಳಚಿ ಒಳಗೆ ಹೋಗಿದ್ದ ಸಚಿವರು, ಹೊರಗೆ ಬರುತ್ತಿದ್ದಾಗ ಮಹದೇವಪ್ಪ ಅವರು ತಮ್ಮ ಬೆಂಗಾವಲು ಸಿಬ್ಬಂದಿಯಿಂದ ಶೂ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಪ್ರಕ್ರಿಯೆಯ ವೇಳೆ ಮಹದೇವಪ್ಪ ಸುತ್ತಮುತ್ತಲಿನವರೊಂದಿಗೆ ಸಂವಾದ ನಡೆಸುತ್ತಿದ್ದರೆ, ಸಿಬ್ಬಂದಿ ಸಚಿವರ ಕಾಲಿನ ಬಳಿ ಕುಳಿತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಹಾಸ್ಟೆಲ್ನಲ್ಲಿನ ಆಹಾರ ಪೂರೈಕೆ, ಸೌಕರ್ಯಗಳ ಕುರಿತು ವಿದ್ಯಾರ್ಥಿಗಳು ಮತ್ತು ನೌಕರರಿಂದ ಸಚಿವರು ಮಾಹಿತಿ ಪಡೆದರು.
Advertisement