ಕರ್ನಾಟಕ ಅಂಚೆ ಇಲಾಖೆಯಿಂದ ಮಹಿಳೆಯರಿಗೆ ಉತ್ತಮ ಬಡ್ಡಿ ಸಿಗುವ ಯೋಜನೆ ಜಾರಿ? ವಿವರ ಇಲ್ಲಿದೆ...

ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕರ್ನಾಟಕ ಅಂಚೆ ಇಲಾಖೆಯು ಸೋಮವಾರ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) 2023 ಎಂಬ ಹೊಸ ಯೋಜನೆಯನ್ನು ಹೊರತಂದಿದೆ.
ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ
ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ

ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕರ್ನಾಟಕ ಅಂಚೆ ಇಲಾಖೆಯು ಸೋಮವಾರ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) 2023 ಎಂಬ ಹೊಸ ಯೋಜನೆಯನ್ನು ಹೊರತಂದಿದೆ.

ಇದರ ಪ್ರಮುಖ ವೈಶಿಷ್ಟ್ಯಗಳೆಂದರೆ ಎರಡು ವರ್ಷಗಳ ಅವಧಿಯಲ್ಲಿ  ಶೇಕಡಾ 7.5ರಷ್ಟು ಸ್ಥಿರ ಬಡ್ಡಿ, ಎರಡು ವರ್ಷಗಳ ಅವಧಿಯಲ್ಲಿ ಗರಿಷ್ಠ ಸೀಲಿಂಗ್ ಮಿತಿ 2 ಲಕ್ಷ ರೂಪಾಯಿ ಮತ್ತು ಒಂದು ವರ್ಷದ ನಂತರ ಭಾಗಶಃ ಹಿಂಪಡೆಯುವಿಕೆ ಸಾಧ್ಯವಾಗುತ್ತದೆ. 

ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ಇದು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಆರ್ಥಿಕ ಸೇರ್ಪಡೆಯನ್ನು ತರುವ ರಾಷ್ಟ್ರವ್ಯಾಪಿ ಉಪಕ್ರಮದ ಭಾಗವಾಗಿದೆ ಎಂದು ಹೇಳಿದರು. “ನಾವು ನೀಡುವ ಶೇಕಡಾ 7.5 ಬಡ್ಡಿಯು ಬ್ಯಾಂಕ್‌ಗಳಿಗಿಂತ ಹೆಚ್ಚು ಮತ್ತು ಯೋಜನೆಯು ಜಾರಿಯಲ್ಲಿರುವ ಎರಡು ವರ್ಷಗಳ ಅವಧಿಯಲ್ಲಿ ಸ್ಥಿರವಾಗಿರುತ್ತದೆ. ನಿಮ್ಮ ಹಣ ಯಾವಾಗಲೂ ಅಂಚೆ ಇಲಾಖೆಯಲ್ಲಿ ಸುರಕ್ಷಿತವಾಗಿರುವುದು ದೊಡ್ಡ ಪ್ಲಸ್ ಪಾಯಿಂಟ್.

ಈ ಯೋಜನೆಯು ಎರಡು ವರ್ಷಗಳ ಅವಧಿಗೆ ಮಾರ್ಚ್ 31, 2025 ರಂದು ಕೊನೆಗೊಳ್ಳುತ್ತದೆ. “ಪ್ರತಿ ತ್ರೈಮಾಸಿಕದಲ್ಲಿ ಪಾವತಿಗಳನ್ನು ಮಾಡಲಾಗುತ್ತದೆ. ಕೊನೆಯ ದಿನಾಂಕದಂದು ಯಾರಾದರೂ ಖಾತೆಯನ್ನು ತೆರೆದರೆ, ಖಾತೆದಾರರಿಗೆ ಎರಡು ವರ್ಷಗಳ ಅವಧಿಯು ಪೂರ್ಣಗೊಳ್ಳುವವರೆಗೆ ಅದರ ಪ್ರಯೋಜನಗಳು ಮುಂದುವರಿಯುತ್ತವೆ. ತ್ರೈಮಾಸಿಕ ಆಧಾರದ ಮೇಲೆ ಬಡ್ಡಿಯನ್ನು ಸೇರಿಸಿ ಖಾತೆಗೆ ಜಮಾ ಮಾಡಲಾಗುವುದು ಎಂದರು.

ಸುಧಾಕರ ಜಿ ದೇವಾಡಿಗ, ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ TNIE ಜೊತೆ ಮಾತನಾಡಿ, ನಾವು ರಾಜ್ಯದಾದ್ಯಂತ 9,613 ಅಂಚೆ ಕಚೇರಿಗಳನ್ನು ಹೊಂದಿದ್ದೇವೆ. ರಾಜ್ಯಾದ್ಯಂತ ಕನಿಷ್ಠ ಒಂದು ಲಕ್ಷ ಮಹಿಳೆಯರು ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಎಂಬ ನಿರೀಕ್ಷೆಯಿದೆ. ಈ ಯೋಜನೆಯನ್ನು ರಾಜ್ಯದ ಯಾವುದೇ ಅಂಚೆ ಕಚೇರಿಗಳಲ್ಲಿ ತೆರೆಯಬಹುದು ಎಂದು ಹೇಳಿದರು.

“ಒಬ್ಬ ಮಹಿಳೆ ಅಥವಾ ಹುಡುಗಿ (ಮಗು ಅಪ್ರಾಪ್ತರಾಗಿದ್ದರೆ ಪೋಷಕರಿಂದ) ಯೋಜನೆಯಡಿಯಲ್ಲಿ ಯಾವುದೇ ಖಾತೆಗಳನ್ನು ತೆರೆಯಬಹುದು ಆದರೆ ಸತತ ಖಾತೆಗಳ ನಡುವೆ ಮೂರು ತಿಂಗಳ ಅಂತರವಿರಬೇಕು. ಪ್ರತಿ ಖಾತೆಗೆ ಒಂದು ಬಾರಿ ಠೇವಣಿ ಮಾಡಲು ಮಾತ್ರ ಅನುಮತಿಸಲಾಗಿದೆ. ಕನಿಷ್ಠ 1,000 ರೂ ಮತ್ತು 100 ರ ಗುಣಕಗಳಲ್ಲಿ ಯಾವುದೇ ಮೊತ್ತವನ್ನು ಇಡಬಹುದು. ಅದರ ನಂತರ ಆ ಖಾತೆಯಲ್ಲಿ ಯಾವುದೇ ಠೇವಣಿಗಳನ್ನು ತೆಗೆದುಕೊಳ್ಳುವುದಿಲ್ಲ. ಈ ಯೋಜನೆಯಡಿಯಲ್ಲಿ ಖಾತೆದಾರರು ಹೊಂದಿರುವ ಎಲ್ಲಾ ಖಾತೆಗಳಲ್ಲಿ ಅನುಮತಿಸಲಾದ ಗರಿಷ್ಠ ಮೊತ್ತವು 2 ಲಕ್ಷ ರೂಪಾಯಿಗಳಾಗಿದೆ.

ಠೇವಣಿ ಮಾಡಿದ ಒಂದು ವರ್ಷದ ನಂತರ, ವ್ಯಕ್ತಿಗೆ ಶೇಕಡಾ 40 ಮೊತ್ತವನ್ನು ಹಿಂಪಡೆಯಲು ಅನುಮತಿ ನೀಡಲಾಗುತ್ತದೆ ಎಂದು ದೇವಾಡಿಗ ಹೇಳಿದರು.

ಮೆಚ್ಯೂರಿಟಿ ಅವಧಿಯ ಮೊದಲು ಖಾತೆಯನ್ನು ಮುಚ್ಚಲಾಗುವುದಿಲ್ಲ. ಖಾತೆದಾರರ ಸಾವು ಮತ್ತು ವ್ಯಕ್ತಿಗಳ ಮಾರಣಾಂತಿಕ ವೈದ್ಯಕೀಯ ಸಮಸ್ಯೆಗಳಂತಹ ಸಂದರ್ಭಗಳಲ್ಲಿ ಮಾತ್ರ ಹಿಂಪಡೆಯಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com