ಜೆಡಿಎಸ್ ಮುಖಂಡ, ಶಾಸಕ ಹೆಚ್ ಡಿ ರೇವಣ್ಣ ಆಪ್ತನ ಬರ್ಬರ ಹತ್ಯೆ!

ಶಾಸಕ ಹೆಚ್ ಡಿ ರೇವಣ್ಣ ಅತ್ಯಾಪ್ತ, ಜೆಡಿಎಸ್ ಮುಖಂಡ, ಉದ್ಯಮಿ ಕೃಷ್ಣೇಗೌಡ ಎಂಬುವರನ್ನು ಹಾಡುಹಗಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಕೃಷ್ಣೇಗೌಡ-ಹೆಚ್ ಡಿ ರೇವಣ್ಣ
ಕೃಷ್ಣೇಗೌಡ-ಹೆಚ್ ಡಿ ರೇವಣ್ಣ
Updated on

ಹಾಸನ: ಗ್ರಾನೈಟ್ ವ್ಯಾಪಾರಿ, ಗುತ್ತಿಗೆದಾರ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ನಿಕಟವರ್ತಿ ಕೃಷ್ಣೇಗೌಡ(55) ಎಂಬುವರನ್ನು ದುಷ್ಕರ್ಮಿಗಳು ಇಂದು ಹಾಸನದ ಕೈಗಾರಿಕಾ ಅಭಿವೃದ್ಧಿ ಕೇಂದ್ರದ ಬಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. 

ಪ್ರತ್ಯಕ್ಷ ಮಾಹಿತಿಯ ಪ್ರಕಾರ, ಶ್ರೀರಾಮ ಮಾರ್ಬಲ್ ಅವರ ಮಾಲೀಕತ್ವದ ಮುಂಭಾಗದಲ್ಲಿ ಮಧ್ಯಾಹ್ನ 12.45 ರ ಸುಮಾರಿಗೆ ಘಟನೆ ಸಂಭವಿಸಿದೆ. ಘಟಕದ ಮುಂದೆ ಇನ್ನೋವಾ ಕಾರನ್ನು ನಿಲ್ಲಿಸಿ ಗ್ರಾನೈಟ್ ಘಟಕಕ್ಕೆ ಹೋಗುತ್ತಿದ್ದಾಗ ಐವರ ತಂಡ ಇನ್ನೋವಾ ಕಾರಿನಲ್ಲಿ ಬಂದು ಹಲ್ಲೆ ನಡೆಸಿದ್ದಾರೆ. 

ದುಷ್ಕರ್ಮಿಗಳು ಮೊದಲು ಕೃಷ್ಣೇಗೌಡರಿಗೆ ಹಿಂಬದಿಯಿಂದ ಬಂದು ಹಲ್ಲೆ ನಡೆಸಿದ್ದಾರೆ. ನೆಲಕ್ಕೆ ಬಿದ್ದ ನಂತರ ನಿರಂತರವಾಗಿ ಮಾರಕಾಸ್ತ್ರಗಳಿಂದ ಹಲವು ಬಾರಿ ದಾಳಿ ನಡೆಸಿದ್ದಾರೆ. ಐವರು ಸದಸ್ಯರ ತಂಡ ಬೆಳಗ್ಗೆಯಿಂದಲೇ ವಾಹನವೊಂದರಲ್ಲಿ ಕುಳಿತು ಕೃಷ್ಣೇಗೌಡರ ಚಲನವಲನಗಳನ್ನು ಗಮನಿಸಿದ್ದಾರೆ. ಬೆಳಿಗ್ಗೆಯಿಂದ ಅವರನ್ನು ಹಿಂಬಾಲಿಸಿದ್ದಾರೆ. ಸುಪಾರಿ ಕೊಲೆ ಮಾಡಿರುವ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ. 

ಹತ್ಯೆಗೀಡಾದ ಕೃಷ್ಣೇಗೌಡ ಹಾಸನ ನಗರದಲ್ಲಿ ಹಣಕಾಸಿನ ವಿಚಾರದಲ್ಲಿ ಬೇರೆ ಬೇರೆ ವ್ಯಕ್ತಿಗಳೊಂದಿಗೆ ಮನಸ್ತಾಪ ಹೊಂದಿದ್ದರು ಎನ್ನಲಾಗಿದೆ. ಹಲವು ಬಾರಿ ಜಗಳವಾಡಿದ್ದು, ಈ ಸಂಬಂಧ ನಗರ ಠಾಣೆಯಲ್ಲಿ ದೂರು ಮತ್ತು ಪ್ರತಿದೂರುಗಳು ದಾಖಲಾಗಿವೆ. 

ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ಸ್ನಿಫರ್ ಡಾಗ್ ಮತ್ತು ಬೆರಳಚ್ಚು ತಜ್ಞರನ್ನೊಳಗೊಂಡ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಹಾಸನದ ಎಚ್‌ಐಎಂಎಸ್ ಆಸ್ಪತ್ರೆಗೆ ಸ್ಥಳಾಂತರಿಸಿತು. ಕ್ರೂರ ಹತ್ಯೆಯಿಂದ ಎಚ್ಚೆತ್ತ ಪೊಲೀಸರು ಪೊಲೀಸ್ ಪಡೆಗಳನ್ನು ನಿಯೋಜಿಸಿ ಪೊಲೀಸ್ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com