ಶಾಸಕರು, ಸಂಸದರು, ಎಂಎಲ್‌ಸಿಗಳಿಗೆ ಟೋಲ್ ಗೇಟ್‌ಗಳಲ್ಲಿ ಪ್ರತ್ಯೇಕ ಲೇನ್‌ ಪರ ಸ್ಪೀಕರ್ ಯುಟಿ ಖಾದರ್ ಬ್ಯಾಟಿಂಗ್

ಟೋಲ್ ಗೇಟ್‌ಗಳಲ್ಲಿ ಎಲ್ಲಾ ಶಾಸಕರು, ಸಂಸದರು, ಎಂಎಲ್‌ಸಿಗಳು ಮತ್ತು ಮಾಜಿ ಸಚಿವರಿಗೆ ಪ್ರತ್ಯೇಕ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಎನ್‌ಎಚ್‌ಎಐ ಜೊತೆಗೆ ಸಭೆ ನಡೆಸುವಂತೆ ಕರ್ನಾಟಕ ಸ್ಪೀಕರ್ ಯುಟಿ ಖಾದರ್ ಗುರುವಾರ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕೇಳಿದರು.
ಯುಟಿ ಖಾದರ್
ಯುಟಿ ಖಾದರ್
Updated on

ಬೆಂಗಳೂರು: ಟೋಲ್ ಗೇಟ್‌ಗಳಲ್ಲಿ ಎಲ್ಲಾ ಶಾಸಕರು, ಸಂಸದರು, ಎಂಎಲ್‌ಸಿಗಳು ಮತ್ತು ಮಾಜಿ ಸಚಿವರಿಗೆ ಪ್ರತ್ಯೇಕ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಯೊಂದಿಗೆ ಸಭೆ ನಡೆಸುವಂತೆ ಕರ್ನಾಟಕ ಸ್ಪೀಕರ್ ಯುಟಿ ಖಾದರ್ ಗುರುವಾರ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕೇಳಿದರು.

ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಈ ವಿಷಯವನ್ನು ಪ್ರಸ್ತಾಪಿಸಿದರು. ವಿವಿಐಪಿಗಳಿಗೆ ಪ್ರತ್ಯೇಕ ಮಾರ್ಗ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು.

ಮೈಸೂರು-ಬೆಂಗಳೂರು 6 ಪಥದ ಕಾರಿಡಾರ್‌ನಲ್ಲಿ ಟೋಲ್ ಸಿಬ್ಬಂದಿಯೊಬ್ಬರಿಂದ ಕಿರುಕುಳಕ್ಕೊಳಗಾದ ಶಾಸಕರ ಬಗ್ಗೆ ಶಾಸಕರೊಬ್ಬರು ಮಾತನಾಡಿದಾಗ ಈ ವಿಚಾರ ಬೆಳಕಿಗೆ ಬಂದಿತು ಎಂದು ಸ್ಪೀಕರ್ ಯುಟಿ ಖಾದರ್ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, 'ಒಬ್ಬ ಶಾಸಕರಿಗೆ ಟೋಲ್ ಸಿಬ್ಬಂದಿ ಕಿರುಕುಳ ನೀಡಿದ್ದು, ಟೋಲ್ ಸಿಬ್ಬಂದಿಯ ಬೇಜವಾಬ್ದಾರಿ ವರ್ತನೆಯಿಂದ ಈ ವಿಚಾರ ಪ್ರಸ್ತಾಪವಾಯಿತು' ಎಂದರು.

ಮೈಸೂರು-ಬೆಂಗಳೂರು ಟೋಲ್ ಹೊರತುಪಡಿಸಿ ರಾಜ್ಯದ ಇತರ ಟೋಲ್‌ಗಳಲ್ಲಿ ಪ್ರತ್ಯೇಕ ಲೇನ್ ಹೊಂದುವ ಸೌಲಭ್ಯ ಈಗಾಗಲೇ ಇದೆ. 'ತುರ್ತು ಮತ್ತು ಜನಪ್ರತಿನಿಧಿಗಳಿಗೆ ಪ್ರತ್ಯೇಕ ಲೇನ್ ಈಗಾಗಲೇ ಪ್ರತಿ ಟೋಲ್‌ನಲ್ಲಿದೆ. ಆದರೆ, ಇದು ಮೈಸೂರು-ಬೆಂಗಳೂರು ಟೋಲ್‌ನಲ್ಲಿ ಇಲ್ಲ' ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com