ಮಳೆ ಪ್ರವಾಹ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಗ್ರಾಮಕ್ಕೆ ಸಂಪರ್ಕ ಕಡಿತ; ರೋಗಿಗಳನ್ನು ತೆಪ್ಪದಲ್ಲಿ ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು!

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಒಳ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರ ಪರಿಸ್ಥಿತಿ ದಯನೀಯವಾಗಿದೆ.
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿವಾಸಿಗಳನ್ನು ತೆಪ್ಪದಲ್ಲಿ ಸಾಗಿಸುತ್ತಿರುವುದು
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿವಾಸಿಗಳನ್ನು ತೆಪ್ಪದಲ್ಲಿ ಸಾಗಿಸುತ್ತಿರುವುದು
Updated on

ಜೋಯಿಡಾ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಒಳ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರ ಪರಿಸ್ಥಿತಿ ದಯನೀಯವಾಗಿದೆ.

ಸಾಹಸ ಕ್ರೀಡೆಗೆ ಬಳಸುವ ತೆಪ್ಪದಲ್ಲಿ ತೀವ್ರ ಉಸಿರಾಟದ ತೊಂದರೆ ಕಂಡುಬಂದು ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿದ ಘಟನೆ ನಡೆದಿದೆ. ಕನೇರಿ ಜಲಾಶಯದ ಹಿನ್ನೀರಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ. ಕುಂದಾಲ್ ಗ್ರಾಮದ ಬಳಿ ಸೇತುವೆಯೊಂದು ಮುಳುಗಡೆಯಾಗಿದ್ದು, ಗ್ರಾಮಸ್ಥರಿಗೆ ರಸ್ತೆ ಸಂಪರ್ಕವಿಲ್ಲದಂತಾಗಿದೆ.

ತಹಶೀಲ್ದಾರ್ ಬಸವರಾಜ ಚಿನ್ನಳ್ಳಿ ಮತ್ತು ಕಂದಾಯ ನಿರೀಕ್ಷಕ ಗಣಪತಿ ಮೇತ್ರಿ ಇಬ್ಬರು ರೋಗಿಗಳ ರಕ್ಷಣೆಗೆ ಬಂದರು, ಗ್ರಾಮವು ಹೊರ ಪ್ರಪಂಚದಿಂದ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿದೆ. ವಿವಿಧ ಆಯ್ಕೆಗಳನ್ನು ಅನ್ವೇಷಿಸಿದ ನಂತರ ಹಾರ್ನ್‌ಬಿಲ್ ರೆಸಾರ್ಟ್‌ಗಳಿಂದ ತೆಪ್ಪಗಳನ್ನು ಬಳಸಬೇಕಾಯಿತು.

ನಂತರ ಸುರಕ್ಷಿತ ಸ್ಥಳದಲ್ಲಿ ಆಂಬ್ಯುಲೆನ್ಸ್ ನ್ನು ನಿಲ್ಲಿಸಲಾಯಿತು, ಅದರಲ್ಲಿ ರೋಗಿಗಳಾದ ರಾಜಾ ವೆಲಪ್ ಮತ್ತು ಗಣೇಶ್ ವೆಲಪ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರನ್ನು ಜೋಯಿಡಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಲ್ಲಿನ ನಿವಾಸಿ ಸುಭಾಷ್ ಗೌಡ ತಿಳಿಸಿದರು. 

ಜೋಯಿಡಾ ತಾಲ್ಲೂಕಿನ ಈ ಗ್ರಾಮ ಪಂಚಾಯಿತಿಯು ಸುಮಾರು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಹಲವಾರು ಗ್ರಾಮಗಳ ಸಮೂಹವಾಗಿದೆ. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಪೈಕಿ ಕುಂದಾಲ್, ಕುರವಳಿ, ನಾವರ, ಅಂಬಲಿ, ಕತೇಲಿ ಗುರುವಾರ ರಾತ್ರಿಯಿಂದಲೇ ಹೊರಜಗತ್ತಿನ ಸಂಪರ್ಕ ಕಡಿತಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com