social_icon

ವಿಶ್ವ ಪರಿಸರ ದಿನಕ್ಕೆ 1 ನಿಮಿಷದಲ್ಲಿ 1 ಸಾವಿರ ಸಸಿಗಳನ್ನು ನೆಟ್ಟು ದಾಖಲೆ

ನಿನ್ನೆ ಸೋಮವಾರ ಜೂನ್ 5 ವಿಶ್ವ ಪರಿಸರ ದಿನ 60 ಸೆಕೆಂಡುಗಳಲ್ಲಿ ಒಟ್ಟು 1,000 ಹಣ್ಣಿನ ಗಿಡಗಳನ್ನು ಬೆಂಗಳೂರು ನಗರದಲ್ಲಿ ನೆಟ್ಟು ದಾಖಲೆ ನಿರ್ಮಿಸಲಾಗಿದೆ.

Published: 06th June 2023 02:13 PM  |   Last Updated: 06th June 2023 06:27 PM   |  A+A-


Tremendous coordination on display as people plant 1,000 fruit tree saplings in 60 seconds | Express

60 ಸೆಕೆಂಡ್ ಗಳಲ್ಲಿ ಗಿಡ ನೆಟ್ಟು ದಾಖಲೆ ನಿರ್ಮಾಣ

Posted By : Sumana Upadhyaya
Source : The New Indian Express

ಬೆಂಗಳೂರು: ನಿನ್ನೆ ಸೋಮವಾರ ಜೂನ್ 5 ವಿಶ್ವ ಪರಿಸರ ದಿನ 60 ಸೆಕೆಂಡುಗಳಲ್ಲಿ ಒಟ್ಟು 1,000 ಹಣ್ಣಿನ ಗಿಡಗಳನ್ನು ಬೆಂಗಳೂರು ನಗರದಲ್ಲಿ ನೆಟ್ಟು ದಾಖಲೆ ನಿರ್ಮಿಸಲಾಗಿದೆ. 

ಬೆಂಗಳೂರಿನ ಜಯನಗರ ಅಗ್ನಿಶಾಮಕ ಠಾಣೆಯಿಂದ (ಡೈರಿ ವೃತ್ತದ ಬಳಿ) ಹಂತ-II ರ ಅಂಡರ್ ಗ್ರೌಂಡ್ ಕಾರಿಡಾರ್‌ನ ವೆಲ್ಲಾರಾ ಜಂಕ್ಷನ್‌ವರೆಗೆ BMRCL ಗಾಗಿ ಅಫ್ಕಾನ್ಸ್ (AFCONS) ಕೆಲಸ ನಿರ್ವಹಿಸುತ್ತಿದ್ದು, ಇತರ ಸಂಸ್ಥೆಗಳ ಬೆಂಬಲದೊಂದಿಗೆ ಬೆಳಿಗ್ಗೆ 10 ರಿಂದ 10.01 ರವರೆಗೆ ಗಿಡ ನೆಡುವ ಕೆಲಸವನ್ನು ಮಾಡಿದೆ.

ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ರಾಷ್ಟ್ರೀಯ ಮಿಲಿಟರಿ ಶಾಲಾ ಆವರಣದ ಹೊರವಲಯದಲ್ಲಿ ಮತ್ತು ಸೇನಾ ಪೊಲೀಸ್ ಕೇಂದ್ರ ಮತ್ತು ಶಾಲೆಯ ಒಳಗೆ ಮರಗಳನ್ನು ನೆಡಲಾಗಿದೆ.

“ಇದಕ್ಕೆ ಎರಡು ದಿನಗಳ ತಯಾರಿ ನಡೆಸಲಾಗಿತ್ತು. ಎಲ್ಲ ಸಸಿಗಳಿಗೆ ಹೊಂಡ ತೋಡಿ ಸಿದ್ಧವಾಗಿ ಇಡಬೇಕಿತ್ತು. ಪ್ರತಿ ನಿಯೋಜಿತ ಒಂದು ಸಸಿಯೊಂದಿಗೆ ಒಟ್ಟು ಸಾವಿರ ಜನರು ಗಿಡ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡರು ಎಂದು ಹೇಳಿದರು. ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆಯಲು ಎಎಫ್‌ಕಾನ್ಸ್ ಸುಮಾರು 3 ಲಕ್ಷ ರೂಪಾಯಿ ವಿನಿಯೋಗಿಸಿತ್ತು. 

ಇದನ್ನೂ ಓದಿ: ಮಾಲಿನ್ಯ ನಿಯಂತ್ರಣ ಮಂಡಳಿ-ಅರಣ್ಯ ಇಲಾಖೆಗಳು ಕೈಗಾರಿಕೆಗಳನ್ನು ಹೊಣೆಗಾರರನ್ನಾಗಿಸಬೇಕು: ಡಿಸಿಎಂ ಡಿಕೆ.ಶಿವಕುಮಾರ್

ಹಲಸು (200), ತಬೆಬುಯಾ ರೋಸಿಯಾ (100), ಬಾದಾಮ್ ಮರ (150), ಜಾಮೂನ್ (200), ಮಾವು (150) ಮತ್ತು ಅಂಜೂರ, ಜಕರಂಡಾ, ಸಿಮರೂಬಾ, ಪೊಂಗಮಿಯಾ ತಲಾ 50 ಗಿಡಗಳನ್ನು ನೆಟ್ಟಿದ್ದೇವೆ ಎಂದು ಸಂಸ್ಥೆಯ ಪ್ರತಿನಿಧಿ ತಿಳಿಸಿದರು. ನಿಂಬೆ, ದಾಳಿಂಬೆ, ಆಮ್ಲಾ ಮತ್ತು ಪೇರಳದ ಗಿಡವನ್ನು ಸಹ ನೆಡಲಾಯಿತು. ನಿರ್ಮಾಣ ಕಾರ್ಯ ಮುಗಿಯುವವರೆಗೆ AFCONS ಅವುಗಳನ್ನು ನಿರ್ವಹಿಸುತ್ತದೆ. ನಂತರ, ಶಾಲೆಗಳು ಅವುಗಳನ್ನು ನೋಡಿಕೊಳ್ಳುತ್ತವೆ ಎಂದು ಇನ್ನೊಬ್ಬ ಮೆಟ್ರೋ ಅಧಿಕಾರಿ ತಿಳಿಸಿದ್ದಾರೆ.

ಯೋಜನೆಗಳು ಮತ್ತು ಯೋಜನಾ ವಿಭಾಗದ ನಿರ್ದೇಶಕ ಡಿ ರಾಧಾಕೃಷ್ಣ ರೆಡ್ಡಿ, ಕಾರ್ಯನಿರ್ವಾಹಕ ನಿರ್ದೇಶಕ (ಸಿವಿಲ್), ಮೇಜರ್ ವಿಕಾಸ್ ಸರೋಹ, ಆರ್‌ಎಂಎಸ್‌ನ ಅಧಿಕೃತ ಪ್ರಾಂಶುಪಾಲರು ಮತ್ತು ಆಡಳಿತಾಧಿಕಾರಿ ಎಸ್ ಹೆಗರಡ್ಡಿ ಸೇರಿದಂತೆ ಬಿಎಂಆರ್‌ಸಿಎಲ್ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.


Stay up to date on all the latest ರಾಜ್ಯ news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp