social_icon

ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ದಾರಿತಪ್ಪಿಸುವ ಜಾಹೀರಾತುಗಳನ್ನು ತೆಗೆದುಹಾಕಿ: ಸಿಎಫ್‌ಟಿಎಫ್‌ಕೆ

ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 'ವಿಮಲ್ ಎಲೈಚಿ' ಜಾಹೀರಾತನ್ನು ಹಾಕುವುದನ್ನು ಆಕ್ಷೇಪಿಸಿ, ಸಾರ್ವಜನಿಕ ಆರೋಗ್ಯ ವಕೀಲರು ಮತ್ತು ಆರೋಗ್ಯ ಸೇವಾ ಸಂಘಗಳ ಒಕ್ಕೂಟವಾದ ತಂಬಾಕು ಮುಕ್ತ ಕರ್ನಾಟಕ (ಸಿಎಫ್‌ಟಿಎಫ್‌ಕೆ) ಒಕ್ಕೂಟವು ಬಸ್ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಕಳುಹಿಸಿದೆ. 

Published: 03rd May 2023 02:22 PM  |   Last Updated: 03rd May 2023 03:12 PM   |  A+A-


Vimal Elaichi advertisement displayed on a BMTC bus in Bengaluru | Express

ಬಿಎಂಟಿಸಿ ಬಸ್ ಮೇಲಿರುವ ವಿಮಲ್ ಎಲೈಚಿ ಜಾಹೀರಾತು

Posted By : Ramyashree GN
Source : Express News Service

ಬೆಂಗಳೂರು: ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 'ವಿಮಲ್ ಎಲೈಚಿ' ಜಾಹೀರಾತನ್ನು ಹಾಕುವುದನ್ನು ಆಕ್ಷೇಪಿಸಿ, ಸಾರ್ವಜನಿಕ ಆರೋಗ್ಯ ವಕೀಲರು ಮತ್ತು ಆರೋಗ್ಯ ಸೇವಾ ಸಂಘಗಳ ಒಕ್ಕೂಟವಾದ ತಂಬಾಕು ಮುಕ್ತ ಕರ್ನಾಟಕ (ಸಿಎಫ್‌ಟಿಎಫ್‌ಕೆ) ಒಕ್ಕೂಟವು ಬಸ್ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಕಳುಹಿಸಿದೆ. ಬದಲಿ (surrogate ads) ಜಾಹೀರಾತುಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಭಾರತದಲ್ಲಿ ತಂಬಾಕು ಮತ್ತು ಆಲ್ಕೋಹಾಲ್ ಉತ್ಪನ್ನಗಳ ನೇರ ಜಾಹೀರಾತು ಮಾಡುವುದನ್ನು ನಿಷೇಧಿಸಿರುವುದರಿಂದ, ತಯಾರಕರು ಬದಲಿ (ಬಾಡಿಗೆ) ಉತ್ಪನ್ನಗಳಂತಹ ಜಾಹೀರಾತುಗಳ ಸೃಜನಶೀಲ ವಿಧಾನಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ತಂಬಾಕು ಉತ್ಪನ್ನಗಳಾದ ಕಮಲಾ ಪಸಂದ್, ವಿಮಲ್ ಪಾನ್ ಮಸಾಲಾ, ರಜನಿಗಂಧ ಮತ್ತು ಇಂಪೀರಿಯಲ್ ಬ್ಲೂ ಮತ್ತು ಸ್ಟೆರ್ಲಿಂಗ್ ರಿಸರ್ವ್‌‌ನಂತಹ ಆಲ್ಕೋಹಾಲ್ ಪಾನೀಯಗಳನ್ನು ಮಾರಾಟ ಮಾಡುವ ಕಂಪನಿಗಳಿಗೆ ಅಂತಹ ಜಾಹೀರಾತುಗಳ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ನೋಟಿಸ್ ನೀಡಿದೆ ಎಂದು ಸಿಎಫ್‌ಟಿಎಫ್‌ಕೆ ಸಂಚಾಲಕ ಎಸ್.ಜೆ. ಚಂದರ್ ಹೇಳಿದ್ದಾರೆ.

'ಎಲೈಚಿ' (ಏಲಕ್ಕಿ) ನೆಪದಲ್ಲಿ ವಿಮಲ್ ಜಗಿಯುವ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಈ ಜಾಹೀರಾತು ನೀಡಲಾಗಿದೆ. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ನೇರ ಮತ್ತು ಪರೋಕ್ಷ ಜಾಹೀರಾತು ನೀಡುವುದನ್ನು ನಿಷೇಧಿಸಲಾಗಿದೆ' ಎಂದು ಅವರು ವಿವರಿಸಿದರು.

ಇದನ್ನೂ ಓದಿ: ಸ್ಟಾಪ್ ಟೊಬ್ಯಾಕೊ ಆ್ಯಪ್‌'ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ: ಈ ವರೆಗೆ 50 ದೂರುಗಳು ದಾಖಲು!

ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಲಕ್ಷಾಂತರ ಜನರು ಬಳಸುತ್ತಾರೆ ಮತ್ತು ರಸ್ತೆಯಲ್ಲಿರುವ ಅನೇಕರು, ವಿಶೇಷವಾಗಿ ಮಕ್ಕಳು ಮತ್ತು ಯುವಕರು ಈ ಜಾಹೀರಾತುಗಳಿಗೆ ಒಡ್ಡಿಕೊಳ್ಳುತ್ತಾರೆ ಮತ್ತು ಈ ಉತ್ಪನ್ನಗಳು ಆರೋಗ್ಯದ ಮೇಲೆ ಬೀರುವ ಘೋರ ಪರಿಣಾಮವನ್ನು ಪರಿಗಣಿಸಿ, ಬಸ್ ನಿಗಮಗಳು ಜಾಹೀರಾತುಗಳಿಂದ ದೂರವಿರಬೇಕು. ಪಾನ್ ಮಸಾಲಾ ಕಂಪನಿಗಳೊಂದಿಗಿನ ಅವರ ಒಪ್ಪಂದವನ್ನು ರದ್ದುಗೊಳಿಸಬೇಕು ಎಂದು ಚಂದರ್ ಹೇಳಿದರು.

ಬಿಎಂಟಿಸಿ ಎಂಡಿ ಸತ್ಯವತಿ ಮತ್ತು ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ ಈ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿಲ್ಲ. 

ರಾಜ್ಯ ಆರೋಗ್ಯ ಆಯುಕ್ತ ಡಿ ರಂದೀಪ್ ಟಿಎನ್ಐಇ ಜೊತೆಗೆ ಮಾತನಾಡಿ, 'ಆರೋಗ್ಯ ಇಲಾಖೆಯು ಇತ್ತೀಚೆಗೆ ಸ್ಟಾಪ್ ಟೊಬ್ಯಾಕೊ ಅಪ್ಲಿಕೇಶನ್ (Stop Tobacco app) ಅನ್ನು ಬಿಡುಗಡೆ ಮಾಡಿದೆ. ಆ ಮೂಲಕ ಜನರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಬಗ್ಗೆ ದೂರು ನೀಡಬಹುದು ಮತ್ತು ನಾವು ಅನೇಕ ಗ್ರಾಮಗಳನ್ನು ತಂಬಾಕು ಮುಕ್ತಗೊಳಿಸಿದ್ದೇವೆ. ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಎರಡಕ್ಕೂ ಬಾಡಿಗೆ ಜಾಹೀರಾತನ್ನು ತೆಗೆದುಹಾಕಲು ನಾವು ವಿನಂತಿಸುತ್ತೇವೆ' ಎಂದರು.


Stay up to date on all the latest ರಾಜ್ಯ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • Ravi Shankar

    Do it first
    4 months ago reply
flipboard facebook twitter whatsapp