social_icon

ಮಡಿಕೇರಿ-ಮಂಗಳೂರು ಹೆದ್ದಾರಿ ರಸ್ತೆ ಭೂಕುಸಿತ: ಶಾಶ್ವತ ಪರಿಹಾರಕ್ಕೆ 2018ರಿಂದ ಇನ್ನೂ ಸಿಕ್ಕಿಲ್ಲ ಅನುಮೋದನೆ!

ಮಡಿಕೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ 275ರ ಶಾಶ್ವತ ಪರಿಹಾರ ಕಾಮಗಾರಿಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಯನ್ನು(DPR) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರಕ್ಕೆ ರವಾನಿಸಿ ಸುಮಾರು ಒಂದು ವರ್ಷ ಕಳೆದರೂ, ಭೂಕುಸಿತ ಪೀಡಿತ ಮಡಿಕೇರಿ-ಮಂಗಳೂರು ಹೆದ್ದಾರಿ ಕಾಮಗಾರಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ. 

Published: 29th May 2023 08:37 AM  |   Last Updated: 29th May 2023 02:36 PM   |  A+A-


The Mangaluru-Madikeri National Highway has been prone to landslides since the monsoons of 2018

2018ರ ಮಳೆಗಾಲದಿಂದ ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಭೂಕುಸಿತಕ್ಕೆ ಗುರಿಯಾಗಿದೆ

Posted By : Sumana Upadhyaya
Source : The New Indian Express

ಮಡಿಕೇರಿ: ಮಡಿಕೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ 275ರ ಶಾಶ್ವತ ಪರಿಹಾರ ಕಾಮಗಾರಿಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಯನ್ನು(DPR) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರಕ್ಕೆ ರವಾನಿಸಿ ಸುಮಾರು ಒಂದು ವರ್ಷ ಕಳೆದರೂ, ಭೂಕುಸಿತ ಪೀಡಿತ ಮಡಿಕೇರಿ-ಮಂಗಳೂರು ಹೆದ್ದಾರಿ ಕಾಮಗಾರಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ. 

2018ರ ಮಳೆಗಾಲದಿಂದ ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಭೂಕುಸಿತಕ್ಕೆ ತುತ್ತಾಗುತ್ತಿದ್ದು, ಪ್ರತಿ ಮಳೆಗಾಲದಲ್ಲಿ ಹೆದ್ದಾರಿ ಬಂದ್ ಆಗುವ ಭೀತಿ ಎದುರಾಗಿದೆ.

ಪ್ರತಿ ಮಳೆಗಾಲದಲ್ಲಿ, ಹೆದ್ದಾರಿಯಲ್ಲಿ ಮರಳಿನ ಚೀಲಗಳನ್ನು ಸುತ್ತಿಡಲಾಗುತ್ತಿದೆ. ಮಳೆ ಕಡಿಮೆಯಾದ ನಂತರ ತಾತ್ಕಾಲಿಕ ಪರಿಹಾರ ಕಾರ್ಯಗಳು ರೂಪುಗೊಳ್ಳುತ್ತವೆ.

2018 ರಲ್ಲಿ ಭೂಕುಸಿತವನ್ನು ವರದಿ ಮಾಡಿದ ಹೆದ್ದಾರಿಯಲ್ಲಿರುವ ಪ್ರದೇಶಗಳಲ್ಲಿ ಇನ್ನೂ ಪರಿಹಾರ ಕಾಮಗಾರಿ ನಡೆದಿಲ್ಲ. ಪ್ರವಾಸಿಗರ ಪ್ರಯಾಣ ಮಾರ್ಗವಾಗಿರುವ ಇದು ಅಪಾಯದಲ್ಲಿದೆ. 

ಕಳೆದ ಐದು ವರ್ಷಗಳಲ್ಲಿ, ಮಳೆ ಹಾನಿ ನಿಧಿಯಡಿ ಹಲವಾರು ತಾತ್ಕಾಲಿಕ ಪರಿಹಾರ ಕಾಮಗಾರಿಗಳ ಹೊರತಾಗಿ, ರಸ್ತೆಯ 1,700 ಮೀಟರ್‌ಗಳ ದುರ್ಬಲ ಪ್ರದೇಶಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಲು, ಒಳಚರಂಡಿ ವ್ಯವಸ್ಥೆಗೆ ಮತ್ತು ಸುಧಾರಿತ ಅಳವಡಿಕೆಗಾಗಿ ಹೆದ್ದಾರಿಯನ್ನು 48 ಕೋಟಿ ರೂಪಾಯಿಯಲ್ಲಿ ನಿರ್ಮಿಸಲು ಅನುಮೋದನೆ ಸಿಕ್ಕಿದೆ. 

ಇದನ್ನೂ ಓದಿ: ಮಡಿಕೇರಿ: ಡಿಸಿ ಕಚೇರಿ ಹಿಂಭಾಗದಲ್ಲಿ ಅಪೂರ್ಣ ತಡೆಗೋಡೆ; ಕಾಮಗಾರಿಯಲ್ಲಿ ವಿಳಂಬ

ಒಂದು ತಡೆಗೋಡೆ ನಿರ್ಮಾಣವಾಗುತ್ತಿದ್ದರೆ, ಇನ್ನುಳಿದ ಕಾಮಗಾರಿ ಪೂರ್ಣಗೊಂಡಿದ್ದರೂ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಹೆದ್ದಾರಿಯುದ್ದಕ್ಕೂ ಇರುವ ಚರಂಡಿಯಲ್ಲಿ ಹೂಳು ತುಂಬಿ ಕಳೆ ಬೆಳೆದು ಮಳೆಗಾಲದಲ್ಲಿ ನಿಷ್ಪ್ರಯೋಜಕವಾಗಬಹುದು. ಇದಲ್ಲದೆ, 1700 ಮೀಟರ್‌ಗಳ ಹೊರತಾಗಿ, ಶಾಶ್ವತ ಪರಿಹಾರಕ್ಕಾಗಿ ಕಾಯುತ್ತಿರುವ ಹೆದ್ದಾರಿಯಲ್ಲಿ ಹಲವಾರು ದುರ್ಬಲ ಪ್ರದೇಶಗಳಿವೆ.

98 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಡಿಪಿಆರ್ ಅನುಮೋದನೆಗಾಗಿ ಕಾಯುತ್ತಿದೆ. ಇದು ಹೆದ್ದಾರಿಯಲ್ಲಿನ ಭೂಕುಸಿತ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡಬಹುದು. ಪ್ರತಿ ಮುಂಗಾರು ಮಳೆಯಂತೆ ಈ ಬಾರಿಯೂ ಭೂಕುಸಿತದ ಅವಶೇಷಗಳನ್ನು ತೆರವುಗೊಳಿಸಲು ಹೆದ್ದಾರಿಯಲ್ಲಿನ ದುರ್ಬಲ ಸ್ಥಳಗಳಲ್ಲಿ ಕಾರ್ಮಿಕರನ್ನು ನಿಯೋಜಿಸಲಾಗುವುದು ಎಂದು ಹೆದ್ದಾರಿಯ ಕಾಮಗಾರಿಯ ಉಸ್ತುವಾರಿ ಹೊತ್ತಿರುವ ಗುತ್ತಿಗೆದಾರ ಜಗದೀಶ್ ರೈ ಹೇಳುತ್ತಾರೆ.


Stay up to date on all the latest ರಾಜ್ಯ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp