ಕುಶಾಲನಗರ: EPT ಯಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ

ಆನೆ ನಿಗ್ರಹ ಟ್ರೆಂಚ್ ನಲ್ಲಿ ಸಿಲುಕಿದ್ದ ಕಾಡಾನೆಯನ್ನು ಅರಣ್ಯ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕುಶಾಲನಗರದ ಗುಡ್ಡೆಹೊಸೂರಿನ ಚಿಕ್ಕಬೆಟ್ಟಗೇರಿಯಲ್ಲಿ ವರದಿಯಾಗಿದೆ.
wild elephant stuck in the EPT
EPT ಯಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆTNIE
Updated on

ಕೊಡಗು: ಆನೆ ನಿಗ್ರಹ ಟ್ರೆಂಚ್ ನಲ್ಲಿ ಸಿಲುಕಿದ್ದ ಕಾಡಾನೆಯನ್ನು ಅರಣ್ಯ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕುಶಾಲನಗರದ ಗುಡ್ಡೆಹೊಸೂರಿನ ಚಿಕ್ಕಬೆಟ್ಟಗೇರಿಯಲ್ಲಿ ವರದಿಯಾಗಿದೆ. ಬುಧವಾರ ಬೆಳಿಗ್ಗೆ ಅಶೋಕ್ ಎಂಬುವವರ ಮನೆ ಬಳಿ ಕಾಡಾನೆ ಕಾಣಿಸಿಕೊಂಡು ಮನೆ ಬಳಿ ಸುತ್ತಾಡುತ್ತಿತ್ತು. ನೀರಿನ ಟ್ಯಾಂಕ್ ಬಳಿ ಬಂದ ಆನೆ ನೀರಿಗಾಗಿ ಹುಡುಕುತ್ತಿತ್ತು ಎಂದು ಅಶೋಕ್ ಹೇಳಿದ್ದಾರೆ.

ಆನೆಗೆ ನೀರು ಸಿಗದಿದ್ದಾಗ ಬೋರ್‌ವೆಲ್‌ ಅಳವಡಿಸಿದ್ದ ಎಸ್ಟೇಟ್‌ನೊಳಗೆ ಹೋಗಿದ್ದರೂ ನೀರು ಸಿಗಲಿಲ್ಲ ಎನ್ನಲಾಗಿದೆ. ಇದರ ಬೆನ್ನಲ್ಲೇ ಆನೆ ಅರಣ್ಯದಂಚಿಗೆ ಮರಳಿದೆ. ಇಲ್ಲಿ ಆನೆ ನಿಗ್ರಹ ಟ್ರೆಂಚ್ ನಲ್ಲಿ ನೀರು ಕಂಡು ಕುಡಿಯಲು ಹೋಗಿ ಸಿಲುಕಿಕೊಂಡಿದೆ.

wild elephant stuck in the EPT
Elephant Attack: ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುತ್ತಿದ್ದ ಭಕ್ತರ ಮೇಲೆ ಕಾಡಾನೆ ದಾಳಿ, ಮಹಿಳೆ ಸಾವು

ಬೆಳಿಗ್ಗೆ 8 ಗಂಟೆ ವೇಳೆಗೆ ಕಾಫಿ ಬೆಳೆಗಾರ ಗಣೇಶ್ ಎಂಬುವವರು ಎಸ್ಟೇಟ್ ಗೆ ತೆರಳುತ್ತಿದ್ದಾಗ ಆನೆಗಳ ಹಿಂಡಿನ ಕೂಗನ್ನು ಕೇಳಿಸಿಕೊಂಡಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಗೆ ಸುದ್ದಿ ತಲುಪಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ 3 ಗಂಟೆಗಳ ಕಾರ್ಯಾಚರಣೆ ಬಳಿಕ ಆನೆಯನ್ನು ರಕ್ಷಣೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com