ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ; 8 ಮಂದಿ ಕುಖ್ಯಾತ ಕ್ರಿಮಿನಲ್ ಗಳ ಬಂಧನ

ಬಂಧಿತರಿಂದ ರೂ. 41 ಲಕ್ಷ ನಗದು, ಚಿನ್ನದ ಸರ, ಮೂರು ನಾಲ್ಕು ಚಕ್ರ ವಾಹನಗಳು, ಹಲವು ಮೊಬೈಲ್ ಫೋನ್‌ಗಳು ಮತ್ತು ಇತರ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಎಸ್ ಪಿ ಕುಶಾಲ್ ಚೌಕ್ಸೆ ನೇತೃತ್ವದ ತಂಡ
ಚಿಕ್ಕಬಳ್ಳಾಪುರ ಎಸ್ ಪಿ ಕುಶಾಲ್ ಚೌಕ್ಸೆ ನೇತೃತ್ವದ ತಂಡ
Updated on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಪರಾಧದಲ್ಲಿ ಭಾಗಿಯಾಗಿರುವ ಎಂಟು ಮಂದಿ ಕುಖ್ಯಾತ ಕ್ರಿಮಿನಲ್ ಗಳನ್ನು ಬಂಧಿಸುವ ಮೂಲಕ ಸುಲಿಗೆಗಾಗಿ ಮಾಡಲಾದ ಎರಡು ಅಪಹರಣ ಪ್ರಕರಣಗಳನ್ನು ಭೇದಿಸಿದ್ದಾರೆ. ಅವರಲ್ಲಿ ಇಬ್ಬರು ಮಾಜಿ ಸಚಿವ ವರ್ತೂರು ಆರ್ ಪ್ರಕಾಶ್ ಪ್ರಕರಣ ಸೇರಿದಂತೆ ವಿವಿಧ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಬಂಧಿತರಿಂದ ರೂ. 41 ಲಕ್ಷ ನಗದು, ಚಿನ್ನದ ಸರ, ಮೂರು ನಾಲ್ಕು ಚಕ್ರ ವಾಹನಗಳು, ಹಲವು ಮೊಬೈಲ್ ಫೋನ್‌ಗಳು ಮತ್ತು ಇತರ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದಿ ನ್ಯೂ ಇಂಡಿಯನ್ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಜೂ.18 ರಂದು ವರದಿಯಾದ ಪ್ರಕರಣದಲ್ಲಿ ಫ್ಯಾಬ್ರಿಕೇಶನ್ ಉದ್ಯಮಿ ಸಮೀವುಲ್ಲಾ ಅವರನ್ನು ಅಪಹರಿಸಿ ಅವರ ಸ್ನೇಹಿತರಿಂದ 18 ಲಕ್ಷ ರೂಪಾಯಿ ಸುಲಿಗೆ ಮಾಡಿದ ನಂತರ ಬಿಡುಗಡೆ ಮಾಡಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಜುಲೈ 21 ರಂದು ರಿಯಲ್ ಎಸ್ಟೇಟ್ ಉದ್ಯಮಿ ನವೀನ್ ನನ್ನು ಅಪಹರಿಸಿ ಆತನ ಸ್ನೇಹಿತರಿಂದ 60 ಲಕ್ಷ ರೂಪಾಯಿ ಸುಲಿಗೆ ಮಾಡಿ ಬಿಡುಗಡೆ ಮಾಡಲಾಗಿತ್ತು ಎಂದು ತಿಳಿಸಿದರು.

ಈ ಅಪರಾಧ ಪ್ರಕರಣ ಭೇದಿಸಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಕಾಸಿಂ , ಉಪ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ರವಿಕುಮಾರಿ ಮತ್ತು ಸೈಬರ್ ಕ್ರೈಂ ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಸೂರ್ಯ ಪ್ರಕಾಶ್ ಮತ್ತು ಇನ್ಸ್ ಪೆಕ್ಟರ್ ಗಳಾದ ಪ್ರಶಾಂತ್ ವರ್ಣಿ, ಮಂಜುನಾಥ್, ನಯಾಜ್ ಅಹ್ಮದ್ ಮತ್ತಿತರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು ಎಂದು ಕುಶಾಲ್ ಹೇಳಿದರು.

ಚಿಕ್ಕಬಳ್ಳಾಪುರದ ಉದ್ಯಮಿ ಬರ್ಕತ್ ತನ್ನ ಎದುರಾಳಿಯಾಗಿದ್ದ ಸಂತ್ರಸ್ತ ಸಮೀವುಲ್ಲಾ ಅವರಿಗೆ ಪಾಠ ಕಲಿಸಲು ಯೋಜನೆ ರೂಪಿಸಿದ್ದು, ರೋಹಿತ್ ಮತ್ತು ಆತನ ಸಹಚರರೊಂದಿಗೆ ಸಂಪರ್ಕ ಸಾಧಿಸಿ 18 ಲಕ್ಷ ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.

ಚಿಕ್ಕಬಳ್ಳಾಪುರ ಎಸ್ ಪಿ ಕುಶಾಲ್ ಚೌಕ್ಸೆ ನೇತೃತ್ವದ ತಂಡ
ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳ ಮೇಲೆ ರೋಡ್ ರೋಲರ್ ಹತ್ತಿಸಿದ ಕೋಲಾರ ಪೊಲೀಸರು

ತಂಡ ವಿವಿಧೆಡೆ ಕಾರ್ಯಾಚರಣೆ ನಡೆಸಿ, ಎಂಟು ಮಂದಿ ಆರೋಪಿಗಳನ್ನು ಬಂಧಿಸಿದೆ. ತನಿಖೆಯ ಸಂದರ್ಭದಲ್ಲಿ ಪೊಲೀಸರು 41 ಲಕ್ಷ ನಗದು, ಒಂದು ಚಿನ್ನದ ಸರ, ಫಾರ್ಚೂನರ್ ಕಾರು ಸೇರಿದಂತೆ ಮೂರು ಕಾರುಗಳು, ಬಹು ಮೊಬೈಲ್‌ಗಳು ಮತ್ತು ಇತರ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಕುಶಾಲ್ ಚೌಕ್ಸೆ ಹೇಳಿದರು.

ಬರ್ಕತ್ ಎರಡು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಲೋಹಿತ್ ಮತ್ತು ಪ್ರವೀಣ್ ನೇಪಾಳಿ, ಮಾಜಿ ಸಚಿವ ವರ್ತೂರ್ ಆರ್ ಪ್ರಕಾಶ್, ಹೊಳೆ ನರಸೀಪುರದ ಅಶ್ವತ್ಥ್ ಅಪಹರಣ, ಆಟೊ ಚಾಲಕ ವಿಜಯ್ ಕುಮಾರ್ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅಪರಾಧಿಗಳನ್ನು ಬಂಧಿಸುವಲ್ಲಿ ತಂಡವು ಕೆಲಸ ಮಾಡಿದ್ದು, ಸೂಲಿ ಮಾಡಿದ ದೊಡ್ಡ ಮೊತ್ತವನ್ನು ಸೂಕ್ತವಾಗಿ ಬಹುಮಾನ ನೀಡಲಾಗುವುದು ಎಂದು ಕುಶಾಲ್ ಚೌಕ್ಸೆ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com