ಸಾವರ್ಕರ್ ವಿಚಾರಧಾರೆಗಳ ತಾಂಡವ ಹೆಚ್ಚಾಗಿದ್ದರಿಂದ ಮಹಾತ್ಮನ ತತ್ವಗಳು ರೋಗಗ್ರಸ್ತವಾಗಿವೆ: ತುಷಾರ್ ಗಾಂಧಿ

ಗಾಂಧಿಯ ಮೌಲ್ಯಗಳ ದುರ್ಬಲವಾಗುತ್ತಿರುವ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದರು, ಗಾಂಧಿಯವರ ಹತ್ಯೆಗೆ ಕಾರಣವಾದಂತಹ ವಿಭಜಕ ಶಕ್ತಿಗಳು ಮರುಕಳಿಸುತ್ತಿವೆ ಎಂದು ತಿಳಿಸಿದರು.
ತುಷಾರ್ ಗಾಂಧಿ
ತುಷಾರ್ ಗಾಂಧಿ
Updated on

ಬೆಂಗಳೂರು: ಇಂದಿನ ಯುಗವು ಗೋಡ್ಸೆಗೆ ಸೇರಿದ್ದು, ಗಾಂಧಿಗಲ್ಲ, ಸಮಾಜವು ಮಹಾತ್ಮ ಗಾಂಧಿ ತತ್ವಗಳಿಂದ ಬಹಳ ದೂರ ಸರಿದಿದೆ ಎಂದು ಗಾಂಧೀಜಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಹೇಳಿದ್ದಾರೆ.

ಗಾಂಧಿ ಸ್ಮಾರಕ ನಿಧಿಯ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಶನಿವಾರ ಗಾಂಧಿ ಭವನದಲ್ಲಿ ನಡೆದ “21 ನೇ ಶತಮಾನಕ್ಕೆ ಮಹಾತ್ಮ ಗಾಂಧಿ” ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ತುಷಾರ್ ,ಗಾಂಧಿಯ ಮೌಲ್ಯಗಳ ದುರ್ಬಲವಾಗುತ್ತಿರುವ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದರು, ಗಾಂಧಿಯವರ ಹತ್ಯೆಗೆ ಕಾರಣವಾದಂತಹ ವಿಭಜಕ ಶಕ್ತಿಗಳು ಮರುಕಳಿಸುತ್ತಿವೆ ಎಂದು ತಿಳಿಸಿದರು.

ನಿರುದ್ಯೋಗದಂತಹ ಆಧುನಿಕ ಸಮಸ್ಯೆಗಳನ್ನು ಗಾಂಧಿ ಹೇಗೆ ಪರಿಹರಿಸುತ್ತಿದ್ದರು ಎಂಬ ಬಗ್ಗೆ ವಿವರಿಸಿದ ಅವರು ಅಂತಹ ಆತ್ಮಾವಲೋಕನದ ಕೊರತೆಯಿದೆ ಎಂದು ವಿಷಾದಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿದೇಶಿ ಪ್ರವಾಸಗಳಲ್ಲಿ ಗಾಂಧಿಯವರ ಸಿದ್ಧಾಂತವನ್ನು ಮಾತ್ರ ಪ್ರಸ್ತಾಪಿಸುತ್ತಾರೆ, ಆದರೆ ಹಿಂಸಾಚಾರದಿಂದ ತುಂಬಿರುವ ಅಸ್ಸಾಂ ಸೇರಿದಂತೆ ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ಅವರು ಟೀಕಿಸಿದರು. ವಿದೇಶಗಳಲ್ಲಿ ಗಾಂಧಿ ಮತ್ತು ಅವರ ವಿಚಾರಧಾರೆ ಬಗ್ಗೆ ಮಾತನಾಡುವವರು ತಮ್ಮ ದೇಶದಲ್ಲಿ ಅವುಗಳ ಹತ್ಯೆ ಮಾಡುತ್ತಿದ್ದಾರೆ. ದೇಶದಲ್ಲಿ ಗೋಡ್ಸೆ, ಸಾವರ್ಕರ್ ವಿಚಾರಧಾರೆಗಳ ತಾಂಡವ ಹೆಚ್ಚಾಗಿದ್ದರಿಂದ ಮಹಾತ್ಮನ ವಿಚಾರಧಾರೆಗಳು ರೋಗಗ್ರಸ್ತವಾಗಿವೆ. ಗೋಡ್ಸೆ ಆಡಳಿತ ನಡೆಸುತ್ತಿರುವುದರಿಂದ ಗಾಂಧೀಜಿ ಸ್ಥಾಪಿಸಿದ ಸಂಸ್ಥೆಗಳು, ಅವರ ತತ್ವಗಳನ್ನು ಮುನ್ನಡೆಸುತ್ತಿರುವ ಸಂಸ್ಥೆಗಳನ್ನು ಕಸಿದುಕೊಳ್ಳಲಾಗುತ್ತಿದೆ ’ ಎಂದು ಹೇಳಿದರು.

ತುಷಾರ್ ಗಾಂಧಿ
ಮಹಾತ್ಮಾ ಗಾಂಧೀಜಿ ತಂಗುವಿಕೆ ಪ್ರಭಾವ: ಬೆಳಗಾವಿಯ ಹುಡ್ಲಿ ಗ್ರಾಮದಲ್ಲಿ ಈಗಲೂ ಗಾಂಧಿ ತತ್ವ ಪಾಲನೆ!

ದೇಶವು ಹಿಂಸಾಚಾರ, ಭ್ರಷ್ಟಾಚಾರ ಮತ್ತು ಅಸೂಯೆಯತ್ತ ಮರಳುತ್ತಿದೆ ಎಂದು ಎಚ್ಚರಿಸಿದ ತುಷಾರ್, 75 ವರ್ಷಗಳ ಹಿಂದೆ ಇದ್ದ ಸಮಸ್ಯೆಗಳು, ಈ ವಿಭಜನೆಗಳು ಮುಂದುವರಿದರೆ, ರಾಷ್ಟ್ರವು ವಿಭಜನೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು, ಏಕೆಂದರೆ ಗಾಂಧಿಯವರ ಒಗ್ಗೂಡಿಸುವ ಚಿಂತನೆಗಳು ಮರೆತುಹೋಗಿವೆ. ನಾಯಕರು ಜನರನ್ನು ಒಗ್ಗೂಡಿಸುವುದಕ್ಕಿಂತ ವಿಭಜನೆಯತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಸಂವಾದದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ಗಾಂಧಿ ಪ್ರತಿಪಾದಿಸುತ್ತಿದ್ದರೆ, ಅವರ ತತ್ವಗಳನ್ನು ಜೀವಂತವಾಗಿಟ್ಟುಕೊಂಡು ಸಂಘಟನೆಗಳು ಈಗ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ವಿಪರ್ಯಾಸ ಎಂದು ಅವರು ಖಂಡಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತಿ ಅಸಮಾನತೆಗಳನ್ನು ಎತ್ತಿ ಹಿಡಿದವರೇ ಮಹಾತ್ಮರ ಹತ್ಯೆಗೆ ಕಾರಣರಾಗಿದ್ದಾರೆ ಎಂದು ಪ್ರತಿಪಾದಿಸಿದರು. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮಾಜದಲ್ಲಿ ವಿಭಜನೆಗಳು ಹೆಚ್ಚುತ್ತಿರುವ ಅಸಮಾನತೆಗೆ ಕಾರಣವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com