ಬಂಡೀಪುರ ರಾತ್ರಿ ಸಂಚಾರ ನಿಷೇಧ ಸಮಸ್ಯೆ: ಸುರಂಗ ಮಾರ್ಗದ ಪರಿಹಾರಕ್ಕೆ DPR

ರಸ್ತೆ ಸಾರಿಗೆ ಸಚಿವಾಲಯವು ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ -212 (ಈಗ ರಾಷ್ಟ್ರೀಯ ಹೆದ್ದಾರಿ-766) ನಲ್ಲಿ ವಯನಾಡ್‌ನಿಂದ ಮೈಸೂರಿಗೆ ಅಡೆತಡೆಯಿಲ್ಲದ, 24 ಗಂಟೆಗಳ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಬಿಟಿಆರ್ ಮೂಲಕ ಹಾದುಹೋಗುವ ಸುರಂಗ ಮಾರ್ಗವನ್ನು ನಿರ್ಮಿಸಲು ವಿವರವಾದ ಯೋಜನಾ ವರದಿಯನ್ನು (DPR) ಕೇಳಿದೆ.
ಬಂಡೀಪುರ ರಾತ್ರಿ ಸಂಚಾರ ನಿಷೇಧ ಸಮಸ್ಯೆ: ಸುರಂಗ ಮಾರ್ಗದ ಪರಿಹಾರಕ್ಕೆ DPR
Updated on

ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (BTR) ಮೂಲಕ ಹಾದು ಹೋಗುವ 24.7 ಕಿ.ಮೀ ವ್ಯಾಪ್ತಿಯಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತೆ ಮರುಕಳಿಸಿದೆ.

ರಸ್ತೆ ಸಾರಿಗೆ ಸಚಿವಾಲಯವು ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ -212 (ಈಗ ರಾಷ್ಟ್ರೀಯ ಹೆದ್ದಾರಿ-766) ನಲ್ಲಿ ವಯನಾಡ್‌ನಿಂದ ಮೈಸೂರಿಗೆ ಅಡೆತಡೆಯಿಲ್ಲದ, 24 ಗಂಟೆಗಳ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಬಿಟಿಆರ್ ಮೂಲಕ ಹಾದುಹೋಗುವ ಸುರಂಗ ಮಾರ್ಗವನ್ನು ನಿರ್ಮಿಸಲು ವಿವರವಾದ ಯೋಜನಾ ವರದಿಯನ್ನು (DPR) ಕೇಳಿದೆ.

ಬಂಡೀಪುರ ರಾತ್ರಿ ಸಂಚಾರ ನಿಷೇಧ ಸಮಸ್ಯೆ: ಸುರಂಗ ಮಾರ್ಗದ ಪರಿಹಾರಕ್ಕೆ DPR
ನಾಗರಹೊಳೆ-ಬಂಡೀಪುರ ಅತಿಥಿಗಳಿಗೆ ಸಫಾರಿ ವಾಹನ ಹಂಚಿಕೆಯಲ್ಲಿ ಅನುಸರಿಸುವ ವಿಧಾನದ ಬಗ್ಗೆ ವಿವರಣೆ ನೀಡಿ: JLR ಗೆ ಹೈಕೋರ್ಟ್‌ ಸೂಚನೆ

ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕೇರಳದ ಸಂಸದ ಜಾನ್ ಬ್ರಿಟಾಸ್ ಅವರನ್ನು ಭೇಟಿಯಾದ ನಂತರ ಈ ನಿರ್ದೇಶನಗಳನ್ನು ನೀಡಲಾಗಿದೆ. ಇದು ಪರಿಸರಕ್ಕಿಂತ ಅಭಿವೃದ್ಧಿಗೆ ಆದ್ಯತೆ ನೀಡುವ ಬಗ್ಗೆ ಸಂರಕ್ಷಣಾವಾದಿಗಳು ಮತ್ತು ಇತರರಲ್ಲಿ ಚರ್ಚೆಯನ್ನು ಪ್ರಾರಂಭಿಸಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮೂಲಗಳು ತಾವು ಕಾಮಗಾರಿಯ ಬಗ್ಗೆ ಕೇಳಿದ್ದೇವೆ, ಆದರೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸುವ ಕೆಲಸವನ್ನು ಪ್ರಾರಂಭಿಸಲು ಅಧಿಕೃತ ಸೂಚನೆಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.

ಸುರಂಗ ರಸ್ತೆ ನಿರ್ಮಾಣದ ಪ್ರಸ್ತಾವನೆ ಹೊಸದಲ್ಲ. ಪರಿಸರ ಮತ್ತು ಆರ್ಥಿಕ ಕಾರಣಗಳಿಂದಾಗಿ ಎಲಿವೇಟೆಡ್ ರಸ್ತೆ ನಿರ್ಮಿಸುವ ಆಲೋಚನೆಯನ್ನು ಕೈಬಿಟ್ಟ ನಂತರ ಎರಡು ವರ್ಷಗಳ ಹಿಂದೆ ಚರ್ಚಿಸಲಾಯಿತು. ಕೇರಳ ಸರ್ಕಾರದಿಂದ ನಿಯಮಿತವಾಗಿ ಎತ್ತುವುದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು. ಸಂಚಾರ ದಟ್ಟಣೆ ಪ್ರಮಾಣ ಹೆಚ್ಚಾಗಿದೆ, ಆದರೆ ಈಗಾಗಲೇ ಉತ್ತಮವಾಗಿ ಅಭಿವೃದ್ಧಿ ಹೊಂದಿದ ಪರ್ಯಾಯ ಮಾರ್ಗವಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

2019 ರಲ್ಲಿ, ಸುಪ್ರೀಂ ಕೋರ್ಟ್ 24.7 ಕಿಮೀ ವ್ಯಾಪ್ತಿಯಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿತು. ರಾಷ್ಟ್ರೀಯ ಹೆದ್ದಾರಿ-212ನ್ನು ಮುಚ್ಚಿದಾಗ ರಾಜ್ಯ ಹೆದ್ದಾರಿ-90 ಎಂದು ಕರೆಯಲ್ಪಡುವ ರಾಷ್ಟ್ರೀಯ ಹೆದ್ದಾರಿ-275 ಮೂಲಕ ಮೈಸೂರಿನಿಂದ ವಯನಾಡ್‌ಗೆ ತಲುಪಲು ಪರ್ಯಾಯ ಮಾರ್ಗವನ್ನು ಬಳಸಲು ಕರ್ನಾಟಕ ಸರ್ಕಾರ ಮತ್ತು ತಜ್ಞರ ಸಲಹೆಯನ್ನು ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. ಈ ಮಾರ್ಗವು ರಾಷ್ಟ್ರೀಯ ಹೆದ್ದಾರಿ-212 ಗಿಂತ 35 ಕಿಮೀ ಉದ್ದವಾಗಿದೆ, 59.7 ಕಿಮೀ ಅಳತೆಯಾಗಿದೆ. ಹುಣಸೂರು, ಗೋಣಿಕೊಪ್ಪ, ಕುಟ್ಟ, ಸುಲ್ತಾನ್ ಬತ್ತೇರಿ ಮತ್ತು ಮೂಲೆಹೊಳೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-275 ಸುಧಾರಣೆಗೆ ರಾಜ್ಯ ಸರ್ಕಾರ 75 ಕೋಟಿ ರೂಪಾಯಿ ಖರ್ಚು ಮಾಡಿದೆ.

ತಜ್ಞರು ಮತ್ತು ಸಂರಕ್ಷಣಾ ತಜ್ಞರು ಸುರಂಗ ರಸ್ತೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಕೂಡ ಪ್ರಕರಣವನ್ನು ಪರಿಶೀಲಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com