ಹಿಂದಿ ಭಾಷೆ ಹೇರಿಕೆ ವಿರುದ್ಧ ಹೋರಾಟ: ವೇದಿಕೆಯಾದ ಕನ್ನಡ ಸಾಹಿತ್ಯ ಸಮ್ಮೇಳನ

ಸಾಹಿತ್ಯ ವೇದಿಕೆಯಲ್ಲಿ ಯುವ ಕಾರ್ಯಕರ್ತರು ಚರ್ಚೆಗಳಿಗೆ ಅಡ್ಡಿಪಡಿಸಿದರು, ಹಿಂದಿ ಭಾಷೆ ಪರವಾಗಿ ಕನ್ನಡವನ್ನು ವ್ಯವಸ್ಥಿತವಾಗಿ ಕಡೆಗಣಿಸುತ್ತಿದ್ದಾರೆ ಎಂದು ಅಧಿವೇಶನದಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.
Madhu Y N speaking during a session creativity: AI and chatgpt challenges organised as part of Kannada Sahitya sammelana in Mandya on Saturday
ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ AI ಮತ್ತು chatgpt ಸವಾಲುಗಳ ಕುರಿತ ಚರ್ಚೆಯಲ್ಲಿ ಮಾತನಾಡಿದ ಮಧು ವೈ ಎನ್
Updated on

ಮೈಸೂರು: ಮಂಡ್ಯದಲ್ಲಿ ನಡೆಯುತ್ತಿರುವ ಮೂರು ದಿನಗಳ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅದ್ಧೂರಿ ಆಚರಣೆ ಕರ್ನಾಟಕದಲ್ಲಿ ಹಿಂದಿ ಭಾಷೆ ಹೇರಿಕೆ ವಿರುದ್ಧ ಅನಿರೀಕ್ಷಿತ ಜನಾಂದೋಲನಕ್ಕೆ ಸಾಕ್ಷಿಯಾಯಿತು.

ಸಾಹಿತ್ಯ ವೇದಿಕೆಯಲ್ಲಿ ಯುವ ಕಾರ್ಯಕರ್ತರು ಚರ್ಚೆಗಳಿಗೆ ಅಡ್ಡಿಪಡಿಸಿದರು, ಹಿಂದಿ ಭಾಷೆ ಪರವಾಗಿ ಕನ್ನಡವನ್ನು ವ್ಯವಸ್ಥಿತವಾಗಿ ಕಡೆಗಣಿಸುತ್ತಿದ್ದಾರೆ ಎಂದು ಅಧಿವೇಶನದಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.

ಹಿಂದಿ ಭಾಷೆ ಹೇರಿಕೆ ವಿಷಯ ಸಮ್ಮೇಳನದ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಿತು. ಚರ್ಚೆಗಳು ಮತ್ತು ಸಾಹಿತ್ಯಿಕ ಅಧಿವೇಶನಗಳು ನಡೆಯುತ್ತಿರುವಾಗ, ರಾಧಾಕೃಷ್ಣ, ಅಭಿ ಗೌಡ, ಸರಸ್ವತಿ ಮತ್ತು ಇತರರ ನೇತೃತ್ವದ ಕಾರ್ಯಕರ್ತರ ಗುಂಪುಗಳು ಹಿಂದಿ ಹೇರಿಕೆಯನ್ನು ವಿರೋಧಿಸಲು ಕನ್ನಡಿಗರನ್ನು ಒತ್ತಾಯಿಸಿ ಘೋಷಣೆಗಳೊಂದಿಗೆ ಸಾಗಿದರು.

ಸಾರ್ವಜನಿಕ ಸಂಸ್ಥೆಗಳಾದ ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಮತ್ತು ವಿಮಾ ಕಚೇರಿಗಳಲ್ಲಿ ಕನ್ನಡದ ನಿರ್ಲಕ್ಷ್ಯದ ಬಗ್ಗೆ ಭಾವೋದ್ರಿಕ್ತ ಕಾರ್ಯಕರ್ತರು ಸಂವಾದದಲ್ಲಿ ಭಾಗವಹಿಸಿದರು. ಕನ್ನಡವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ. ನಮ್ಮ ಭಾಷಾ ಅಸ್ಮಿತೆಯನ್ನು ಮುಂದಿಟ್ಟುಕೊಂಡು ಹಿಂದಿ ಹೇರಿಕೆಯನ್ನು ತಡೆಯಲು ನಾವು ಈಗಲೇ ಕಾರ್ಯನಿರ್ವಹಿಸಬೇಕು ಎಂದು ಹೋರಾಟಗಾರ ರಾಧಾಕೃಷ್ಣ ಹೇಳಿದರು.

Madhu Y N speaking during a session creativity: AI and chatgpt challenges organised as part of Kannada Sahitya sammelana in Mandya on Saturday
ಕನ್ನಡ ಭಾಷೆ ಮಕ್ಕಳಿಗೆ ಬೋಧನಾ ಮಾಧ್ಯಮವಾಗಬೇಕು: ಗೊ ರು ಚನ್ನಬಸಪ್ಪ

ಹಿಂದಿ ಕಡ್ಡಾಯವಾಗಿರುವ ಶಾಲೆಗಳಲ್ಲಿ ತ್ರಿಭಾಷಾ ಸೂತ್ರದ ಪ್ರತಿಕೂಲ ಪರಿಣಾಮವನ್ನು ಅನೇಕ ಕಾರ್ಯಕರ್ತರು ಎತ್ತಿ ತೋರಿಸಿದರು. 2023-24ರಲ್ಲಿ 90,510 ವಿದ್ಯಾರ್ಥಿಗಳು ತಮ್ಮ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ, ಇದು ಅವರ ಶೈಕ್ಷಣಿಕ ವೃತ್ತಿಜೀವನಕ್ಕೆ ಹಿನ್ನಡೆಯಾಗಿದೆ ಎಂದು ಮತ್ತೊಬ್ಬರು ಹೇಳಿದರು.

ಹಿಂದಿಯನ್ನು ಒಂದು ಭಾಷೆಯಾಗಿ ವಿರೋಧಿಸುವುದು ಅಲ್ಲ. ಅದರ ಬಲವಂತದ ಹೇರಿಕೆಯನ್ನು ವಿರೋಧಿಸುವುದಾಗಿದೆ ಎಂದು ಮತ್ತೊಬ್ಬ ಯುವಕ ಹೇಳಿದರು.

ಬಲವಂತದ ಹಿಂದಿ ಹೇರಿಕೆಗೆ ನಮ್ಮ ವಿರೋಧವಿದೆ

ಹಿಂದಿಯನ್ನು ಒಂದು ಭಾಷೆಯಾಗಿ ವಿರೋಧಿಸುವುದು ಅಲ್ಲ. ಇದು ಬಲವಂತದ ಹೇರಿಕೆಯನ್ನು ವಿರೋಧಿಸುವುದಾಗಿದೆ ಎಂದು ಮತ್ತೊಬ್ಬ ಯುವಕರು ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿದವರಿಗೆ ಕರಪತ್ರಗಳನ್ನು ವಿತರಿಸಿದರು. ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.

ಕನ್ನಡವು ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ಆಡಳಿತಾತ್ಮಕವಾಗಿ ಮತ್ತು ಆರ್ಥಿಕವಾಗಿ ಕರ್ನಾಟಕದ ಪ್ರಬಲ ಭಾಷೆಯಾಗಿ ಉಳಿಯಬೇಕು. ರಾಜ್ಯದ ಎಲ್ಲಾ ಸೇವೆಗಳು ಮತ್ತು ಉದ್ಯೋಗಾವಕಾಶಗಳಿಗೆ ಕನ್ನಡವನ್ನು ಕಡ್ಡಾಯಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ನಮ್ಮ ಅಸ್ಮಿತೆಗೆ ಧಕ್ಕೆ ತರುವ ಕೇಂದ್ರ ನೀತಿಗಳ ವಿರುದ್ಧ ಹೋರಾಟ ಎಂದು ರಾಮಕೃಷ್ಣ ಎಂಬುವವರು ಹೇಳಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನವನ್ನು ನಿಲ್ಲಿಸಿದ ಕಾರ್ಯಕರ್ತರ ಗುಂಪು ಈ ವಿಷಯಗಳ ಬಗ್ಗೆ ನಿರ್ಣಯಗಳನ್ನು ಅಂಗೀಕರಿಸುವ ಅಗತ್ಯವಿದೆ ಎಂದು ಒತ್ತಾಯಿಸಿತು. ರಾಜ್ಯದ ಭಾಷಾ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ರಕ್ಷಿಸುವ ಉದ್ದೇಶದ ನಿರ್ಣಯಗಳಿಗೆ ಸಮ್ಮೇಳನದಲ್ಲಿ ಒತ್ತಾಯ ಕೇಳಿಬಂತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com