ರಾಜ್ಯದಲ್ಲಿ 59,772 ಶಿಕ್ಷಕ ಹುದ್ದೆಗಳು ಭರ್ತಿಯಾಗದೆ ಖಾಲಿ; ನೇಮಕಾತಿಗೆ ಆಸಕ್ತಿ ತೋರದ ಸರ್ಕಾರ!

ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ಮತ್ತು ಉನ್ನತ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ 35 ವಿದ್ಯಾರ್ಥಿಗಳಿಗೆ ಒಬ್ಬರನ್ನು ಕಡ್ಡಾಯಗೊಳಿಸುತ್ತದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಈ ಪೈಕಿ ಪ್ರಾಥಮಿಕ ಶಾಲೆಗಳಲ್ಲಿ 50,067 ಹಾಗೂ ಪ್ರೌಢಶಾಲೆಗಳಲ್ಲಿ 9,705 ಹುದ್ದೆಗಳು ಖಾಲಿ ಇವೆ. ಅಲ್ಲದೆ, 6,158 ಶಾಲೆಗಳು ಕೇವಲ ಒಬ್ಬ ಶಿಕ್ಷಕರೊಂದಿಗೆ ನಿರ್ವಹಣೆ ಮಾಡುತ್ತಿವೆ.

ವ್ಯಾಪಕ ಶಿಕ್ಷಕರ ಕೊರತೆ ಮತ್ತು ಅಸಮರ್ಪಕ ಸೌಲಭ್ಯಗಳಿಂದಾಗಿ ಶಿಕ್ಷಕರನ್ನೂ ಆಕರ್ಷಿಸಲು ವಿಫಲವಾಗಿರುವ ಸರ್ಕಾರವು ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಎಲ್ಲಾ ಹಂತಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ನಾಶಪಡಿಸುತ್ತಿದೆ ಎಂದು ಶಿಕ್ಷಣ ತಜ್ಞರು ವಾದಿಸುತ್ತಾರೆ. ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಐದು ವರ್ಷಗಳಲ್ಲಿ 10,000 ಕೋಟಿ ರೂ.ಗಳನ್ನು ಮೀಸಲಿಟ್ಟಿರುವ ಕೇರಳದ ಮಾದರಿಯನ್ನು ಕರ್ನಾಟಕ ಅನುಸರಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಶಿಕ್ಷಕರ ಕೊರತೆಯು ಶಿಕ್ಷಣದ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸುತ್ತಾರೆ, ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ಮತ್ತು ಉನ್ನತ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ 35 ವಿದ್ಯಾರ್ಥಿಗಳಿಗೆ ಒಬ್ಬರನ್ನು ಕಡ್ಡಾಯಗೊಳಿಸುತ್ತದೆ.

50,067 ಪ್ರಾಥಮಿಕ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, 2028-29ರ ವೇಳೆಗೆ 34,807 ಶಿಕ್ಷಕರು ನಿವೃತ್ತರಾಗುತ್ತಾರೆ, ಹೀಗಿರುವಾಗ ನಾವು ನಾವು ಗುಣಮಟ್ಟದ ಶಿಕ್ಷಣವನ್ನು ಹೇಗೆ ಕಾಪಾಡಿಕೊಳ್ಳಬಹುದು? ಎಂದು ಶಿಕ್ಷಣತಜ್ಞ ನಿರಂಜನಾರಾಧ್ಯ ವಿ.ಪಿ. ಪ್ರಶ್ನಿಸಿದದಾರೆ. ಸರ್ಕಾರ ತಕ್ಷಣದ ಕ್ರಮ ಕೈಗೊಳ್ಳದಿದ್ದರೆ, 80,000- ಶಿಕ್ಷಕರ ಹುದ್ದೆಗಳು ಖಾಲಿ ಇರಲಿವೆ, ಆಗ ಶಿಕ್ಷಣ ಇಲಾಖೆ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ, ಇದರಿಂದ ರಾಜ್ಯಾದ್ಯಂತ ಶಾಲೆಗಳು ಮತ್ತಷ್ಟು ದುರ್ಬಲಗೊಳ್ಳುತ್ತವೆ ಎಂದು ಅವರು ಒತ್ತಿ ಹೇಳಿದರು. ಕೊರತೆಯನ್ನು ನೀಗಿಸಲು ಇಲಾಖೆಯು 45,000 ಅತಿಥಿ ಶಿಕ್ಷಕರನ್ನು ಆಶ್ರಯಿಸಿದೆ, ಅವರಲ್ಲಿ ಸುಮಾರು 35,000 ಪ್ರಾಥಮಿಕ ಹಂತದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಅತಿಥಿ ಶಿಕ್ಷಕರ ಮೇಲೆ ಸರ್ಕಾರ ಅವಲಂಬಿತವಾಗಿದೆ ಎಂದು ಪ್ರಾಧ್ಯಾಪಕ ನಿರಂಜನಾರಾಧ್ಯ ಟೀಕಿಸಿದ್ದಾರೆ. ಶಿಕ್ಷಕರ ಕೊರತೆಯ ಬಗ್ಗೆ ತಿಳಿದಿದ್ದರೂ ನೇಮಕಾತಿ ಮಾಡುತ್ತಿಲ್ಲ. ಇದು ಉದ್ದೇಶಪೂರ್ವಕ ನಡೆ. ಶಾಲೆಗಳನ್ನು ನಡೆಸುತ್ತಿರುವಾಗ ಅತಿಥಿ ಶಿಕ್ಷಕರಿಗೆ ಕೇವಲ 10,000 ರೂ. ವೇತನ ನೀಡುತ್ತಿದೆ. ಅವರು 45,000 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬಹುದಾದರೆ, ಕಾಯಂ ಶಿಕ್ಷಕರನ್ನು ಏಕೆ ನೇಮಿಸಬಾರದು? ಎಂದು ಪ್ರಶ್ನಿಸಿದರು.

Representational image
ಶಿಕಾರಿಪುರ ಸರ್ಕಾರಿ ಶಾಲೆಗಳು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮೇಲ್ದರ್ಜೇಗೆ: ಮಧು ಬಂಗಾರಪ್ಪ

ಕೇರಳದಂತೆ ಸರ್ಕಾರಕ್ಕೆ 10,000 ಕೋಟಿ ರೂ.ಗಳನ್ನು ಮೀಸಲಿಡಲು ಸಾಧ್ಯವಾಗದಿದ್ದರೆ, ಅವರು ಕನಿಷ್ಠ ಮೂರು ವರ್ಷಗಳಲ್ಲಿ ಮೊತ್ತವನ್ನು ವಿಸ್ತರಿಸಬೇಕು ಎಂದು ಅವರು ವಾದಿಸಿದರು. "ಆದರೆ ಶಾರ್ಟ್‌ಕಟ್‌ಗಳು ಎಂದಿಗೂ ಪರಿಹಾರವಲ್ಲ ಎಂದು ಅವರು ಹೇಳಿದರು, ಬಿಕ್ಕಟ್ಟನ್ನು ಪರಿಹರಿಸಲು ದೀರ್ಘಾವಧಿಯ ವಿಧಾನದ ಅಗತ್ಯವಿದೆ ಎಂದು ಒತ್ತಿ ಹೇಳಿದರು. 46,757 ಶಾಲೆಗಳಲ್ಲಿ ಕೇವಲ 42.92 ಲಕ್ಷ ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಗಳು ದಾಖಲಾತಿಯಲ್ಲಿ ಕುಸಿತವನ್ನು ಎದುರಿಸುತ್ತಿವೆ ಎಂದು ಮಾಹಿತಿ ತೋರಿಸುತ್ತದೆ. ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯಲು ಆಂಗ್ಲ-ಮಾಧ್ಯಮ ವಿಭಾಗಗಳನ್ನು ಪರಿಚಯಿಸಲಾಗಿದ್ದರೂ, ದಾಖಲಾತಿ ಸಂಖ್ಯೆಯಲ್ಲಿ ಗಣನೀಯವಾಗಿ ಸುಧಾರಣೆಯಾಗಿಲ್ಲ. ಸರ್ಕಾರದ ಕ್ರಮಗಳು ಸರ್ಕಾರಿ ಶಾಲೆಗಳ ಪ್ರತಿಷ್ಠೆಗೆ ಧಕ್ಕೆ ತರುತ್ತಿವೆ ಎಂದು ತಜ್ಞರು ವಿಷಾದಿಸುತ್ತಾರೆ. 2022 ರಲ್ಲಿ 15,000 ಪದವೀಧರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು, 13,352 ಅಭ್ಯರ್ಥಿಗಳು ಅರ್ಹರೆಂದು ಪರಿಗಣಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇತ್ತೀಚೆಗೆ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com