ದೇವನಹಳ್ಳಿ: ವ್ಹೀಲಿಂಗ್ ಹುಚ್ಚಾಟ; ಟ್ರಕ್‌ಗೆ ಸ್ಕೂಟರ್ ಡಿಕ್ಕಿ; ಇಬ್ಬರು ಯುವಕರು ಸಾವು

ಬೆಳಗ್ಗೆ 9.30ರ ಸುಮಾರಿಗೆ ಪಾಷಾ ಮತ್ತು ಮನೋಜ್‌ ದೇವನಹಳ್ಳಿಯಿಂದ ‘ಎಚ್‌’ ಕ್ರಾಸ್‌ ಕಡೆಗೆ ಹೋಗುತ್ತಿದ್ದರು. ವೇಗವಾಗಿ ವ್ಹೀಲಿ ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರು ಹೊರವಲಯದ ದೇವನಹಳ್ಳಿ ತಾಲೂಕಿನ ವಿಜಯಪುರ ಬೈಪಾಸ್ ರಸ್ತೆ ಬಳಿ ಶುಕ್ರವಾರ ಬೆಳಗ್ಗೆ ಸ್ಕೂಟರ್‌ನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿದ್ದ ಇಬ್ಬರು ಯುವಕರು ಲಾರಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

ಮೃತರನ್ನು ಸ್ಕೂಟರ್ ಚಲಾಯಿಸುತ್ತಿದ್ದ ಅಬ್ರೇಜ್ ಪಾಷಾ (18) ಮತ್ತು ಪಿಲಿಯನ್ ರೈಡರ್ ಮನೋಜ್ (16) ಎಂದು ಗುರುತಿಸಲಾಗಿದೆ. ಇಬ್ಬರೂ ವಿಜಯಪುರ ಪಟ್ಟಣದ ನಿವಾಸಿಗಳು. ಮನೋಜ್ 8ನೇ ತರಗತಿ ವಿದ್ಯಾರ್ಥಿ. ತನ್ನ ಅಧ್ಯಯನವನ್ನು ನಿಲ್ಲಿಸಿದ ಪಾಷಾ ನಿರುದ್ಯೋಗಿಯಾಗಿದ್ದನು.

ಬೆಳಗ್ಗೆ 9.30ರ ಸುಮಾರಿಗೆ ಪಾಷಾ ಮತ್ತು ಮನೋಜ್‌ ದೇವನಹಳ್ಳಿಯಿಂದ ‘ಎಚ್‌’ ಕ್ರಾಸ್‌ ಕಡೆಗೆ ಹೋಗುತ್ತಿದ್ದರು. ವೇಗವಾಗಿ ವ್ಹೀಲಿ ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಷಾ ತನ್ನ ಸ್ಕೂಟರ್ ಮೇಲೆ ನಿಯಂತ್ರಣ ಕಳೆದುಕೊಂಡು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪಾಷಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಗಂಭೀರ ಗಾಯಗೊಂಡಿದ್ದ ಮನೋಜ್‌ನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪಾಷಾ ಬಳಿ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ವಿಜಯಪುರ ಪೊಲೀಸರು ಸ್ಕೂಟರ್ ಅನ್ನು ವಶಪಡಿಸಿಕೊಂಡು ಅದರ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Representational image
ಬೆಂಗಳೂರು: ರಿಂಗ್ ರೋಡ್ ನಲ್ಲಿ ಬೈಕ್ ವ್ಹೀಲಿಂಗ್; 14 ಮಂದಿ ಬಂಧನ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com