ಮಡಿಕೇರಿ: ಕಾವೇರಿ ನದಿ ಸಂರಕ್ಷಣೆಗಾಗಿ ನಿವಾಸಿಗಳು, ಸಂಘಟನೆಗಳ ಒತ್ತಾಯ

ಕೊಡಗಿನ ಕಾವೇರಿ ನದಿ ಸಂರಕ್ಷಣೆಗೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಕಾವೇರಿ ನೀರಿನ ಶುದ್ಧತೆಯು ಅದರ ಉಗಮ ಜಿಲ್ಲೆಯಲ್ಲಿ 'ಸಿ' ಗ್ರೇಡ್ ಮುಟ್ಟಿದೆ.
ಇತ್ತೀಚಿಗೆ ಕಾವೇರಿ ನದಿ ಸ್ವಚ್ಛತೆಯಲ್ಲಿ ಪಾಲ್ಗೊಂಡ ಸ್ವಯಂ ಸೇವಕರು
ಇತ್ತೀಚಿಗೆ ಕಾವೇರಿ ನದಿ ಸ್ವಚ್ಛತೆಯಲ್ಲಿ ಪಾಲ್ಗೊಂಡ ಸ್ವಯಂ ಸೇವಕರುExpress
Updated on

ಮಡಿಕೇರಿ: ಕೊಡಗಿನ ಕಾವೇರಿ ನದಿ ಸಂರಕ್ಷಣೆಗೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಕಾವೇರಿ ನೀರಿನ ಶುದ್ಧತೆಯು ಅದರ ಉಗಮ ಜಿಲ್ಲೆಯಲ್ಲಿ 'ಸಿ' ಗ್ರೇಡ್ ಮುಟ್ಟಿದೆ. ಮಾನದಂಡದ ಪ್ರಕಾರ, 'ಎ' ಗ್ರೇಡ್ ಹೊಂದಿರುವ ನದಿ ನೀರು ಉತ್ತಮ ಎಂದು ಪ್ರಮಾಣೀಕರಿಸಲಾಗುತ್ತದೆ. ಅಲ್ಲದೇ ಅದನ್ನು ಶುದ್ಧಿಕರಿಸದೇ ಕುಡಿಯಬಹುದಾಗಿದೆ.

ಆದರೆ, ಕಾವೇರಿ ನದಿ ತಳದಲ್ಲಿ 'ಸಿ' ದರ್ಜೆ ಗುಣಮಟ್ಟದ ನೀರನ್ನು ಸಾಂಪ್ರದಾಯಿಕ ಸಂಸ್ಕರಣೆಯ ನಂತರವೇ ನೀರನ್ನು ಬಳಸಬಹುದು. ಕುಶಾಲನಗರದ ಕಾವೇರಿ ನದಿ ನೀರಿಗೆ 'ಸಿ' ದರ್ಜೆ ನೀಡಲಾಗಿದೆ. ಇದು ತ್ಯಾಜ್ಯ ನೀರು ಎಂದು ಸಾಬೀತುಪಡಿಸುತ್ತದೆ. ವಾಣಿಜ್ಯ ಕಟ್ಟಡಗಳು ಮತ್ತು ಇತರ ವ್ಯವಸ್ಥೆಗಳಿಂದ ನದಿಗೆ ಹರಿಯುತ್ತದೆ. ಪ್ರವಾಸೋದ್ಯಮದ ಅವೈಜ್ಞಾನಿಕ ಬೆಳವಣಿಗೆಯು ತ್ಯಾಜ್ಯ ಮತ್ತು ಕಸವನ್ನು ಕಾವೇರಿ ನದಿಗೆ ಹರಿಯುವಂತೆ ಮಾಡಿದೆ.ನದಿಯನ್ನು ಸಂರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಭೀಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ’ ಎಂದು ಕಾವೇರಿ ಸ್ವಚ್ಛತಾ ಆಂದೋಲನದ ಸಂಚಾಲಕ ಚಂದ್ರಮೋಹನ್ ಅಭಿಪ್ರಾಯಪಟ್ಟರು.

ಇತ್ತೀಚಿಗೆ ಕಾವೇರಿ ನದಿ ಸ್ವಚ್ಛತೆಯಲ್ಲಿ ಪಾಲ್ಗೊಂಡ ಸ್ವಯಂ ಸೇವಕರು
ಕೊಡಗು: ನದಿ ದಡ ಸಂರಕ್ಷಣೆ ಹೆಸರಿನಲ್ಲಿ ಮರಗಳಿಗೆ ಕೊಡಲಿ, ಸ್ಥಳೀಯ ನಿವಾಸಿಗಳ ವಿರೋಧ

ಆದರೆ, ಕಾವೇರಿ ನದಿ ತಳದಲ್ಲಿ 'ಸಿ' ದರ್ಜೆ ಗುಣಮಟ್ಟದ ನೀರನ್ನು ಸಾಂಪ್ರದಾಯಿಕ ಸಂಸ್ಕರಣೆಯ ನಂತರವೇ ನೀರನ್ನು ಬಳಸಬಹುದು. ಕುಶಾಲನಗರದ ಕಾವೇರಿ ನದಿ ನೀರಿಗೆ 'ಸಿ' ದರ್ಜೆ ನೀಡಲಾಗಿದೆ. ಇದು ತ್ಯಾಜ್ಯ ನೀರು ಎಂದು ಸಾಬೀತುಪಡಿಸುತ್ತದೆ. ವಾಣಿಜ್ಯ ಕಟ್ಟಡಗಳು ಮತ್ತು ಇತರ ವ್ಯವಸ್ಥೆಗಳಿಂದ ನದಿಗೆ ಹರಿಯುತ್ತದೆ. ಪ್ರವಾಸೋದ್ಯಮದ ಅವೈಜ್ಞಾನಿಕ ಬೆಳವಣಿಗೆಯು ತ್ಯಾಜ್ಯ ಮತ್ತು ಕಸವನ್ನು ಕಾವೇರಿ ನದಿಗೆ ಹರಿಯುವಂತೆ ಮಾಡಿದೆ.ನದಿಯನ್ನು ಸಂರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಭೀಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ’ ಎಂದು ಕಾವೇರಿ ಸ್ವಚ್ಛತಾ ಆಂದೋಲನದ ಸಂಚಾಲಕ ಚಂದ್ರಮೋಹನ್ ಅಭಿಪ್ರಾಯಪಟ್ಟರು.

ಕುಶಾಲನಗರ, ವಿರಾಜಪೇಟೆ ಮತ್ತು ಮಡಿಕೇರಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳು ಮತ್ತು ಒಂದು ಪುರಸಭೆಯಲ್ಲಿ ಕಾವೇರಿ ನದಿಯನ್ನು ಸಂರಕ್ಷಿಸಲು ಮತ್ತು ನದಿ ಮಾಲಿನ್ಯವನ್ನು ತಡೆಗಟ್ಟಲು ಅಧಿಕಾರಿಗಳು ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಚಂದ್ರಮೋಹನ್ ವಿವರಿಸಿದರು. ಮನವಿ ಪತ್ರ ಸ್ವೀಕರಿಸಿದ ಡಿಸಿ ವೆಂಕಟ್ ರಾಜಾ, ಈ ಬಗ್ಗೆ ರಾಜ್ಯಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com