ಅಧಿಸೂಚಿತ ಕಾಯಿಲೆ ಪಟ್ಟಿಗೆ ಹಾವು ಕಡಿತ: ಇದರಿಂದಾಗುವ ಅನುಕೂಲಗಳು ಇವು...

ಕರ್ನಾಟಕ ಸರ್ಕಾರ ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಹಾವು ಕಡಿತವನ್ನು ರಾಜ್ಯದಲ್ಲಿ ಅಧಿಸೂಚಿತ ಕಾಯಿಲೆ ಎಂದು ಘೋಷಿಸಿದೆ.
ಹಾವು ಕಡಿತ (ಸಾಂಕೇತಿಕ ಚಿತ್ರ)
ಹಾವು ಕಡಿತ (ಸಾಂಕೇತಿಕ ಚಿತ್ರ)PTI
Updated on

ಬೆಂಗಳೂರು: ಕರ್ನಾಟಕ ಸರ್ಕಾರ ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಹಾವು ಕಡಿತವನ್ನು ರಾಜ್ಯದಲ್ಲಿ ಅಧಿಸೂಚಿತ ಕಾಯಿಲೆ ಎಂದು ಘೋಷಿಸಿದೆ. ಸರ್ಕಾರದ ಈ ಕ್ರಮದಿಂದ ಆರೋಗ್ಯ ಇಲಾಖೆಗೆ ರಾಜ್ಯದಲ್ಲಿ ವರದಿಯಾಗುತ್ತಿರುವ ಹಾವು ಕಡಿತ ಪ್ರಕರಣಗಳ ನಿರ್ದಿಷ್ಟ ಸಂಖ್ಯೆಯನ್ನು ಪಡೆಯುವುದಕ್ಕೆ ಅನುಕೂಲವಾಗಲಿದೆ. ಈಗಿನಿಂದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಹಾವು ಕಚ್ಚಿದ್ದಕ್ಕೆ ಚಿಕಿತ್ಸೆ ನೀಡಿದ ಪ್ರತಿಯೊಂದು ಪ್ರಕರಣವನ್ನೂ ದಾಖಲಿಸಬೇಕಾಗುತ್ತದೆ.

ಈ ರೀತಿ ಮಾಡುವುದರಿಂದ ಹಾವು ಕಚ್ಚಿದ್ದಕ್ಕೆ ಚಿಕಿತ್ಸೆ ನೀಡಲು ಅಗತ್ಯವಿರುವ ವಿಷ ನಿರೋಧಕ ಚುಚ್ಚುಮದ್ದುಗಳ ನಿರ್ದಿಷ್ಟ ಸಂಖ್ಯೆ ಲೆಕ್ಕಕ್ಕೆ ಸಿಗಲಿದ್ದು ಅತಿ ಹೆಚ್ಚು ಗಮನ ಹರಿಸಬೇಕಿರುವ ಜಿಲ್ಲೆಗಳು ಯಾವುವು ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

ಹಾವು ಕಡಿತ (ಸಾಂಕೇತಿಕ ಚಿತ್ರ)
ಹಾವು ಕಡಿತ ಅಧಿಸೂಚಿತ ಕಾಯಿಲೆ ಪಟ್ಟಿಗೆ ಸೇರಿಸಿದ ರಾಜ್ಯ ಸರ್ಕಾರ

ಅತಿ ಹೆಚ್ಚು ಹಾವು ಕಡಿತ ಪ್ರಕರಣಗಳು ವರದಿಯಾಗುವ ಪಟ್ಟಿಯಲ್ಲಿ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ಸೌಲಭ್ಯಗಳಲ್ಲಿ ಹಾವು ಕಡಿತವನ್ನು ರಾಜ್ಯದಲ್ಲಿ ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ. ಕಳೆದ ವರ್ಷ ರಾಜ್ಯದಲ್ಲಿ ಸುಮಾರು 6,500 ಪ್ರಕರಣಗಳು ದಾಖಲಾಗಿದ್ದವು. ಆದಾಗ್ಯೂ, ಸುಮಾರು 50% ಪ್ರಕರಣಗಳು ವರದಿಯಾಗುವುದಿಲ್ಲ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ರಾಜ್ಯ ಸರ್ಕಾರದ ದಾಖಲೆಗಳ ಪ್ರಕಾರ, ಅಕ್ಟೋಬರ್ 2023 ರಿಂದ ಫೆಬ್ರವರಿ 2024 ರವರೆಗೆ, ರಾಜ್ಯದಲ್ಲಿ 2,620 ಹಾವು ಕಡಿತ ಪ್ರಕರಣಗಳು ವರದಿಯಾಗಿದೆ ಮತ್ತು ಎಂಟು ಸಾವುಗಳು ವರದಿಯಾಗಿವೆ. ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 12,922 ವಿಷ ನಿರೋಧಕ ವೈಲ್‌ಗಳಿವೆ. ಸ್ಪೆಕ್ಟಕಲ್ಡ್ ಕೋಬ್ರಾ, ರಸೆಲ್ಸ್ ವೈಪರ್, ಸಾ-ಸ್ಕೇಲ್ಡ್ ವೈಪರ್‌ಗಳು ಮತ್ತು ಸಾಮಾನ್ಯ ಕ್ರೇಟ್ ಸೇರಿದಂತೆ ಎಲ್ಲಾ ಹಾವಿನ ಕಡಿತಗಳಿಗೆ ಲಭ್ಯವಿರುವ ವಿಷ ನಿರೋಧಕಗಳನ್ನು ಬಳಸಬಹುದಾಗಿದೆ.

ಹಾವು ಕಡಿತ (ಸಾಂಕೇತಿಕ ಚಿತ್ರ)
ತುಮಕೂರು: ಹಾವು ಕಚ್ಚಿದ್ದು ಅರಿವಿಗೆ ಬಾರದೆ ವೈದ್ಯ ವಿದ್ಯಾರ್ಥಿ ಸಾವು; ಘಟಿಕೋತ್ಸವದ ಬಳಿಕ ಹೃದಯ ವಿದ್ರಾವಕ ಘಟನೆ!

ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಶನಲ್/ಇಂಡಿಯಾ, ವನ್ಯಜೀವಿ ಸಂರಕ್ಷಣಾ ನಿರ್ದೇಶಕ ಸುಮಂತ್ ಬಿಂದುಮಾಧವ್, “ಕರ್ನಾಟಕ ಸರ್ಕಾರದ ಕ್ರಮವು ಹಾವು ಕಡಿತದ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ನಿರ್ವಹಣೆಯ ಕುರಿತು ನೀತಿ ನಿರ್ಧಾರಗಳನ್ನು ಉತ್ತಮವಾಗಿ ತಿಳಿಸಲು ರಾಜ್ಯ ಮಟ್ಟದಲ್ಲಿ ಕಣ್ಗಾವಲು ಹೆಚ್ಚಿಸಿದೆ. ಇಂತಹ ನಿರ್ಧಾರಗಳು ಇತರ ರಾಜ್ಯಗಳನ್ನು ಅನುಸರಿಸಲು ಪ್ರೇರೇಪಿಸುತ್ತದೆ.

ಎಚ್‌ಎಸ್‌ಐ/ಇಂಡಿಯಾ ಮತ್ತು ದಿ ಲಿಯಾನಾ ಟ್ರಸ್ಟ್ ಸುಮಾರು ಒಂದು ವರ್ಷದಿಂದ ರಾಜ್ಯ ಅರಣ್ಯ ಮತ್ತು ಆರೋಗ್ಯ ಇಲಾಖೆಗಳೊಂದಿಗೆ ಕೆಲಸ ಮಾಡುತ್ತಿವೆ. ಹಾವು ಕಡಿತ ಪ್ರಕರಣಗಳು ಹೆಚ್ಚಾದಾಗ ಟ್ರೆಂಡ್ ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ. ಇದು ತಡೆಗಟ್ಟುವಿಕೆಗೆ ಉತ್ತಮ ಯೋಜನೆಗೆ ಸಹಾಯ ಮಾಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com