ಭೂ ಸ್ವಾಧೀನ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸುತ್ತಮುತ್ತ ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಸುತ್ತಲಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಬುಧವಾರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶನ ನೀಡಲಾಗಿದೆ.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ-66 ರ ವಿಸ್ತರಣೆಗಾಗಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪುರಾತನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಸುತ್ತಲಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಬುಧವಾರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶನ ನೀಡಲಾಗಿದೆ.

ಅಕ್ಟೋಬರ್ 10, 2023 ರ ಅಧಿಸೂಚನೆಯ ಮೂಲಕ ದೇವಾಲಯದ ಭೂಮಿ ಸ್ವಾಧೀನದ ಪರಿಣಾಮದ ಬಗ್ಗೆ ಆತಂಕ ವ್ಯಕ್ತಪಡಿಸಿ ಕೊಲ್ಲೂರಿನ ಭಕ್ತ ಗುರುಪ್ರಸಾದ್ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವೆಂಕಟೇಶ್ ಪಿ ದಳವಾಯಿ, 1,200 ವರ್ಷಕ್ಕೂ ಹಳೆಯದು ನಂಬಲಾದ ದೇವಸ್ಥಾನದ ಹಿಂಭಾಗದ ಗೋಡೆಗೆ ಸಮಾನಾಂತರವಾಗಿರುವ ರಸ್ತೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಿಸಲು ರಸ್ತೆ ಮತ್ತು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿದೆ. ರಾಷ್ಟ್ರೀಯ ಹೆದ್ದಾರಿ ಕಾಯ್ದೆ, 1956 ರ ಸೆಕ್ಷನ್ 3 ಸಿ ಪ್ರಕಾರ, ಸ್ವಾಧೀನದ ವಿರುದ್ಧ ನಿವಾಸಿಗಳು ಅಕ್ಟೋಬರ್ 26, 2023 ರಂದು ಸಲ್ಲಿಸಿದ ಆಕ್ಷೇಪಣೆಗಳನ್ನು ಇನ್ನೂ ಪರಿಗಣಿಸಲಾಗಿಲ್ಲ. ಆಕ್ಷೇಪಣೆಗಳನ್ನು ಆಲಿಸಿ, ನಿರ್ಧರಿಸಿ ಮತ್ತು ತಿಳಿಸದ ಹೊರತು, ಅಧಿಕಾರಿಗಳು ಭೂಮಿಯನ್ನು ಪ್ರವೇಶಿಸುವ ಮತ್ತು ಕೆಲಸ ಪ್ರಾರಂಭಿಸುವ ಅಧಿಕಾರವನ್ನು ಚಲಾಯಿಸಲು ಅನುಮತಿಸಲಾಗುವುದಿಲ್ಲ ಎಂದು ವಾದಿಸಿದರು.

ಹೈಕೋರ್ಟ್
ಕೊಲ್ಲೂರು ಮೂಕಾಂಬಿಕೆಗೆ ಅಕ್ಟೋಬರ್ ತಿಂಗಳಲ್ಲಿ ಬಂದ ಹರಕೆ ಮೊತ್ತ 1 ಕೋಟಿಗೂ ಅಧಿಕ!

ಅರ್ಜಿದಾರರ ಪ್ರಕಾರ, ಹೆದ್ದಾರಿ ಅಗಲೀಕರಣವು ದೇವಾಲಯದ ಬಳಿ ಭಾರೀ ವಾಹನಗಳ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ದೇವಾಲಯದ ದೇವರ ಪವಿತ್ರತೆಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ. ಈ ವಾಹನಗಳಿಂದ ಉಂಟಾಗುವ ಕಂಪನಗಳು ಮತ್ತು ಶಬ್ದವು ಪೂಜೆ ಮತ್ತು ಧ್ಯಾನಕ್ಕೆ ಅಗತ್ಯವಾದ ಶಾಂತಿಯುತ ವಾತಾವರಣಕ್ಕೆ ಅಡ್ಡಿಯಾಗುತ್ತವೆ. ಇದಲ್ಲದೆ, ಸಂಭವನೀಯ ದೇವಾಲಯ ಹಾನಿ ಅಥವಾ ಕುಸಿತಕ್ಕೆ ಕಾರಣವಾಗಬಹುದು. ಒಂದು ವೇಳೆ ರಸ್ತೆ ವಿಭಜನೆಗೆ ಅನುಮತಿ ನೀಡಿದರೆ ಆಗಬಹುದಾದ ನಷ್ಟವನ್ನು ಅಂದಾಜಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ದೇವಾಲಯದ ಸುತ್ತಲಿನ ಭೂಸ್ವಾಧೀನವು ರಥೋತ್ಸವ ಮತ್ತು ಇತರ ಉತ್ಸವಗಳ ಆಯೋಜನೆಗೂ ತೊಂದರೆಯಾಗಲಿದೆ. ರಥಗಳನ್ನು ಜೋಡಿಸಲು, ಮಳಿಗೆಗಳನ್ನು ಸ್ಥಾಪಿಸಲು ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲು ವಿಶಾಲವಾದ ಮೈದಾನದ ಅಗತ್ಯವಿದೆ. ಹೆದ್ದಾರಿಗಾಗಿ ಭೂಸ್ವಾಧೀನಪಡಿಸಿಕೊಳ್ಳುವುದರೊಂದಿಗೆ, ಈ ಚಟುವಟಿಕೆಗಳಿಗೆ ಸ್ಥಳಾವಕಾಶವು ಕ್ಷೀಣಿಸುತ್ತದೆ. ಜನದಟ್ಟಣೆಗೆ ಕಾರಣವಾಗುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-66 ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದುಹೋಗುವ ಮುಂಬೈನಿಂದ ಕನ್ಯಾಕುಮಾರಿಗೆ ಸಂಪರ್ಕ ಕಲ್ಪಿಸುವ 1,640 ಕಿಮೀ ಉದ್ದದ ಕಾರ್ಯನಿರತ ಹೆದ್ದಾರಿಯಾಗಿದ್ದು, ದಿನಕ್ಕೆ ಸುಮಾರು 15,000 ಟ್ರಕ್‌ಗಳು ಮತ್ತು ಇತರ ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com