ಆರು ಮಕ್ಕಳನ್ನು ಸಾಕಿ ಬೆಳೆಸಿದ ದಂಪತಿಗೆ ಕೊಡವ ಸಮಾಜದಿಂದ ಸನ್ಮಾನ!

ಮಡಿಕೇರಿಯಲ್ಲಿ ಆರು ಮಕ್ಕಳನ್ನು ಸಾಕಿ ಬೆಳೆಸಿದ ದಂಪತಿಗೆ ಸನ್ಮಾನಿಸಲಾಯಿತು. ಮಡಿಕೇರಿ ಕೊಡವ ಸಮಾಜದ ವತಿಯಿಂದ ಸನ್ಮಾನ ಸಮಾರಂಭ ನಡೆಯಿತು.
ಬೆಳ್ಳಿಯಪ್ಪ ಮತ್ತು ಬೋಜಮ್ಮ ದಂಪತಿಗೆ ಸನ್ಮಾನ
ಬೆಳ್ಳಿಯಪ್ಪ ಮತ್ತು ಬೋಜಮ್ಮ ದಂಪತಿಗೆ ಸನ್ಮಾನTNIE
Updated on

ಮಡಿಕೇರಿ: ಮಡಿಕೇರಿಯಲ್ಲಿ ಆರು ಮಕ್ಕಳನ್ನು ಸಾಕಿ ಬೆಳೆಸಿದ ದಂಪತಿಗೆ ಸನ್ಮಾನಿಸಲಾಯಿತು. ಮಡಿಕೇರಿ ಕೊಡವ ಸಮಾಜದ ವತಿಯಿಂದ ಸನ್ಮಾನ ಸಮಾರಂಭ ನಡೆಯಿತು.

ಕೊಡವ ಸಮುದಾಯವು ಆಧುನೀಕರಣದ ತೀವ್ರತೆಗೆ ಸಿಲುಕಿ ನಲುಗುತ್ತಿರುವ ಒಂದು ಸಣ್ಣ ಬುಡಕಟ್ಟು ಸಮುದಾಯವಾಗಿದೆ. ಕಳೆದ ಹಲವಾರು ವರ್ಷಗಳಿಂದ ಸಮುದಾಯದ ಜನಸಂಖ್ಯೆಯು ವಿವಿಧ ಕಾರಣಗಳಿಂದ ಕಡಿಮೆಯಾಗಿದೆ. ಆಧುನೀಕರಣ ಮತ್ತು ವಿಭಕ್ತ ಕುಟುಂಬವು ಅದರ ಜನಸಂಖ್ಯೆಯ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತದೆ.

ಇಂತಹ ಸನ್ನಿವೇಶದಲ್ಲಿ ಬುಡಕಟ್ಟು ಸಮುದಾಯದ ಜನಸಂಖ್ಯೆಯ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಡಿಕೇರಿ ಕೊಡವ ಸಮಾಜವು ಮರಗೋಡು ಗ್ರಾಮದ ತಾಟಪಂಡ ಬೆಳ್ಳಿಯಪ್ಪ ಮತ್ತು ಬೋಜಮ್ಮ ಅಕಾ ಶೀಲಾ ದಂಪತಿಯನ್ನು ಇದೇ ಮೊದಲ ಬಾರಿಗೆ ಸನ್ಮಾನಿಸಲಾಯಿತು. ಐದು ಗಂಡು ಮತ್ತು ಒಬ್ಬ ಮಗಳು ಸೇರಿ ಆರು ಮಕ್ಕಳನ್ನು ಬೆಳೆಸಿದ್ದಕ್ಕಾಗಿ ದಂಪತಿಗಳನ್ನು ಗೌರವಿಸಲಾಯಿತು. ಅಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲು ದಂಪತಿಗೆ 25,000 ರೂಪಾಯಿ ನಗದು ಬಹುಮಾನ ವಿತರಿಸಲಾಯಿತು.

ಬೆಳ್ಳಿಯಪ್ಪ ಮತ್ತು ಬೋಜಮ್ಮ ದಂಪತಿಗೆ ಸನ್ಮಾನ
ಮಡಿಕೇರಿ: ಕೊಡವ ಸಾಂಪ್ರದಾಯದಂತೆ ಯುವಕನ ಸಲಿಂಗ ವಿವಾಹ, ತೀವ್ರ ವಿರೋಧ!

ಇಂತಹ ಕಾರ್ಯಕ್ರಮದ ಮೂಲಕ ಸಮುದಾಯದ ಜನಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಒತ್ತು ನೀಡಲಾಗುತ್ತಿದೆ ಎಂದು ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ ಹೇಳಿದರು. ಇದೇ ವೇಳೆ ಸಮಾಜದ ಮತ್ತೊಬ್ಬ ಸದಸ್ಯ ಎಂ ಸುನೀಲ್ ಮಂದಪ್ಪ ಶೀಲಾ ದಂಪತಿಗೆ 5000 ರೂಪಾಯಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com