ಕೇಂದ್ರ ಬಜೆಟ್ ನಲ್ಲಿ ಬೆಂಗಳೂರು-ಹೈದರಾಬಾದ್ ಕಾರಿಡಾರ್ ಘೋಷಣೆ: ಪ್ರೋತ್ಸಾಹಕ ಮಾದರಿಗಳ ನಿರೀಕ್ಷೆಯಲ್ಲಿ ಕರ್ನಾಟಕ

ಕರ್ನಾಟಕವು ಕಾರಿಡಾರ್‌ನ ಭಾಗವಾಗಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಲು ಚಿಂತಿಸುತ್ತಿದೆ. ಹೂಡಿಕೆಗಳು ಮತ್ತು ವ್ಯವಹಾರಗಳನ್ನು ಸೆಳೆಯಲು ಉತ್ಸುಕವಾಗಿರುವ ಸ್ಪರ್ಧಾತ್ಮಕ ನೆರೆಯ ರಾಜ್ಯವನ್ನು ಸ್ಪರ್ಧಾತ್ಮಕವಾಗಿ ಎದುರಿಸಲು ಅದರ ಪ್ರೋತ್ಸಾಹಕ ಮಾದರಿಗಳನ್ನು ವರ್ಧಿಸುತ್ತದೆ.
ಬೆಂಗಳೂರಿನ ಎಪಿಎಂಸಿ ಯಾರ್ಡ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಲ್ಲಿ ಕೇಂದ್ರ ಬಜೆಟ್ ಮಂಡನೆಯನ್ನು ವೀಕ್ಷಿಸುತ್ತಿರುವುದು
ಬೆಂಗಳೂರಿನ ಎಪಿಎಂಸಿ ಯಾರ್ಡ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಲ್ಲಿ ಕೇಂದ್ರ ಬಜೆಟ್ ಮಂಡನೆಯನ್ನು ವೀಕ್ಷಿಸುತ್ತಿರುವುದು
Updated on

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2024-25ನೇ ಸಾಲಿನ ಬಜೆಟ್ ನಲ್ಲಿ ಬೆಂಗಳೂರು-ಹೈದರಾಬಾದ್ ಕೈಗಾರಿಕಾ ಕಾರಿಡಾರ್ ನ್ನು ರಚಿಸುವುದಾಗಿ ಘೋಷಿಸಿದ್ದು, ಕರ್ನಾಟಕ ಸರ್ಕಾರವು ತನ್ನ ಅಸ್ತಿತ್ವದಲ್ಲಿರುವ ಕೈಗಾರಿಕಾ ನೀತಿಗಳನ್ನು ಮರುಪರಿಶೀಲಿಸಬೇಕಾಗಿದೆ.

ಕರ್ನಾಟಕವು ಕಾರಿಡಾರ್‌ನ ಭಾಗವಾಗಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಲು ಚಿಂತಿಸುತ್ತಿದೆ. ಹೂಡಿಕೆಗಳು ಮತ್ತು ವ್ಯವಹಾರಗಳನ್ನು ಸೆಳೆಯಲು ಉತ್ಸುಕವಾಗಿರುವ ಸ್ಪರ್ಧಾತ್ಮಕ ನೆರೆಯ ರಾಜ್ಯವನ್ನು ಸ್ಪರ್ಧಾತ್ಮಕವಾಗಿ ಎದುರಿಸಲು ಅದರ ಪ್ರೋತ್ಸಾಹಕ ಮಾದರಿಗಳನ್ನು ವರ್ಧಿಸುತ್ತದೆ.

ಕಾರಿಡಾರ್ ಓರ್ವಕಲ್ ನೋಡ್‌ನ ಅಭಿವೃದ್ಧಿ: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-40ರಲ್ಲಿರುವ ಓರ್ವಕಲ್ ನ್ನು ಮೆಗಾ ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಉತ್ಪಾದನಾ ವಲಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮದ ಪ್ರಕಾರ, ಬೆಂಗಳೂರು-ಚೆನ್ನೈ ಮತ್ತು ವಿಶಾಖಪಟ್ಟಣಂ-ಚೆನ್ನೈ ಸೇರಿದಂತೆ ದಕ್ಷಿಣ ಭಾರತದ ಇತರ ನಗರಗಳು ಮತ್ತು ಆರ್ಥಿಕ ಕಾರಿಡಾರ್‌ಗಳಿಗೆ ಇದು ಅವಿಭಾಜ್ಯ ಕೊಂಡಿಯಾಗಿದೆ.

ಇದರ ಅಡಿಯಲ್ಲಿ, ರಸ್ತೆಗಳು, ರೈಲು, ಹೆದ್ದಾರಿಗಳು ಮತ್ತು ಪಟ್ಟಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಬಹು-ವಲಯ ಕೈಗಾರಿಕಾ ಟೌನ್‌ಶಿಪ್‌ಗಳನ್ನು ರಚಿಸಲಾಗುವುದು. ಈ ಕಾರಿಡಾರ್ ನ್ನು ಬಲಪಡಿಸುವುದರಿಂದ ನಗರ ಉದ್ಯೋಗ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಕೈಗಾರಿಕಾ ವಲಯವನ್ನು ಬಲಪಡಿಸುವ ಕುರಿತು ಮಾತನಾಡಿದ್ದಾರೆ.

ಬೆಂಗಳೂರಿನ ಎಪಿಎಂಸಿ ಯಾರ್ಡ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಲ್ಲಿ ಕೇಂದ್ರ ಬಜೆಟ್ ಮಂಡನೆಯನ್ನು ವೀಕ್ಷಿಸುತ್ತಿರುವುದು
Union Budget 2024: 3 ಕ್ಯಾನ್ಸರ್ ಔಷಧಿಗಳ ಕಸ್ಟಮ್ಸ್ ಸುಂಕ ಇಳಿಕೆ; ವೈದ್ಯಕೀಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?

ರಾಜ್ಯ ಸರ್ಕಾರವು ಉತ್ತಮ ನೀತಿಗಳನ್ನು ತರಬೇಕು. ಅದಕ್ಕೆ ಅನುಗುಣವಾಗಿ ತನ್ನ ಯೋಜನೆಗಳನ್ನು ರೂಪಿಸಬೇಕು ಎಂದು ಹೇಳುತ್ತಾರೆ. ಈ ಹಿಂದೆ ಕರ್ನಾಟಕವು ಕೈಗಾರಿಕಾ ಕ್ಲಸ್ಟರ್‌ಗಳನ್ನು ರಚಿಸುವುದಾಗಿ ಘೋಷಿಸಿತ್ತು, ಆದರೆ ಬೆಳಗಾವಿಯಲ್ಲಿ ಟಾಯ್ ಕ್ಲಸ್ಟರ್ ಮಾತ್ರ ಸ್ವಲ್ಪ ಪ್ರಗತಿ ಸಾಧಿಸಿದೆ. ಕರ್ನಾಟಕದ ಗಡಿಭಾಗದ ಹಿಂದೂಪುರದಲ್ಲಿ ಮೊಬಿಲಿಟಿ ಹಬ್ ಅಭಿವೃದ್ಧಿಗೆ ದೊಡ್ಡ ಹೊಡೆತ ಬಿದ್ದಿದೆ. ಕರ್ನಾಟಕವು ಈಗ ತನ್ನ ನೀತಿಗಳನ್ನು ಪರಿಷ್ಕರಿಸಬೇಕು ಮತ್ತು ಈ ಕಾರಿಡಾರ್‌ನಲ್ಲಿ ಗರಿಷ್ಠ ಹೂಡಿಕೆಯನ್ನು ಸೆಳೆಯಲು ಅದರ ಪ್ರೋತ್ಸಾಹಕ ಯೋಜನೆಗಳನ್ನು ಹೊಂದಿಸಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com