ಕಬ್ಬು ಅರೆಯಲು ಮೈಶುಗರ್‌ ಸಜ್ಜು, ಜೂ.23ರಂದು ಬಾಯ್ಲರ್ ಕಾರ್ಯಾಚರಣೆ ಆರಂಭ!

ಮೈಸೂರು ಸಕ್ಕರೆ ಕಾರ್ಖಾನೆ (ಮೈಶುಗರ್‌) 2024-25ನೇ ಸಾಲಿನ ಕಬ್ಬು ಅರೆಯುವಿಕೆಗೆ ಸಜ್ಜಾಗಿದೆ. ಜೂ.23ರಂದು ಬಾಯ್ಲರ್ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಮೈಸೂರು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಮೈಶುಗರ್‌
ಮೈಶುಗರ್‌
Updated on

ಮೈಸೂರು: ಮೈಸೂರು ಸಕ್ಕರೆ ಕಾರ್ಖಾನೆ (ಮೈಶುಗರ್‌) 2024-25ನೇ ಸಾಲಿನ ಕಬ್ಬು ಅರೆಯುವಿಕೆಗೆ ಸಜ್ಜಾಗಿದೆ. ಜೂ.23ರಂದು ಬಾಯ್ಲರ್ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಮೈಸೂರು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.

ಮೈಸೂರು ಅತಿಥಿ ಗೃಹದಲ್ಲಿ ರೈತ ಮುಖಂಡರು ಹಾಗೂ ಇತರೆ ಸಂಘಟನೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಟನ್‌ ಕಬ್ಬಿಗೆ 3,150 ರೂ.ಗೆ ರೈತರಿಗೆ ನೆಮ್ಮದಿ ಇಲ್ಲದ ಕಾರಣ ರೈತರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬೆಲೆ ನಿಗದಿ ಮಾಡಲಾಗುವುದು, ಮೈಸೂರು ಕಾರ್ಖಾನೆ ಆಡಳಿತ ಮಂಡಳಿ ರೈತರಿಂದ ಸಲಹೆ ಪಡೆದು ಕಾರ್ಖಾನೆ ಅಭಿವೃದ್ಧಿಗೆ ಒತ್ತು ನೀಡಲಿದೆ ಎಂದರು.

ಮೈಶುಗರ್‌
ಮೈಶುಗರ್ ಕಾರ್ಖಾನೆಯನ್ನು 2 ವರ್ಷ ಸರ್ಕಾರಿ ಸ್ವಾಮ್ಯದಲ್ಲಿ ನಡೆಸಲು ತೀರ್ಮಾನ: ಸಿಎಂ ನಿರ್ಧಾರಕ್ಕೆ ರೈತರ ಹರ್ಷ

ಜೇಷ್ಠತಾ ಪಟ್ಟಿ ಆಧರಿಸಿ ಕಬ್ಬು ಕಟಾವಿಗೆ ಅನುಮತಿ ನೀಡಲಾಗುವುದು ಎಂದ ಗಂಗಾಧರ್, ಜಮೀನುದಾರರು ಮತ್ತು ಗ್ಯಾಂಗ್‌ಮನ್‌ಗಳು ರೈತರಿಗೆ ಕಿರುಕುಳ ನೀಡದಂತೆ ನೋಡಿಕೊಳ್ಳಲಾಗುವುದು ಮತ್ತು ಕಬ್ಬು ಬೆಳೆಗಾರರಿಂದ ಯಾವುದೇ ದೂರುಗಳು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು, ಅನಧಿಕೃತವಾಗಿ ಕಬ್ಬು ಅರೆಯುತ್ತಿದ್ದರೆ ಬೆಲ್ಲ ಘಟಕಗಳನ್ನು ಮುಚ್ಚಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೂ. 249 ಕೋಟಿ ಸಾಲವಿದ್ದು, 2 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿರುವುದರಿಂದ ಆದ್ಯತೆಯ ಮೇಲೆ ಸಾಲದ ಹೊರೆ ಕಡಿಮೆಯಾಗುವಂತೆ ನೋಡಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com