ಮಡಿಕೇರಿ ನಗರಕ್ಕೆ ದಿನ ಬಿಟ್ಟು ದಿನ ಕುಡಿಯುವ ನೀರು ಪೂರೈಕೆ

ಮಡಿಕೇರಿ ಜಿಲ್ಲೆಯು ಕಠಿಣ ಬೇಸಿಗೆ ಎದುರಿಸುತ್ತಿದ್ದು, ಮನೆಗಳಿಗೆ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.
ಕುಂಡಾಮೇಸ್ತ್ರಿ ಚೆಕ್ ಡ್ಯಾಂ
ಕುಂಡಾಮೇಸ್ತ್ರಿ ಚೆಕ್ ಡ್ಯಾಂ
Updated on

ಮಡಿಕೇರಿ: ನಗರ ಪ್ರದೇಶಗಳು ಬೆಳೆದಂತೆ, ಮಡಿಕೇರಿ ನಗರದಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ಹೆಚ್ಚಾಗುತ್ತಿದೆ. ಆದರೆ, ನೀರಿನ ಬವಣೆ ನೀಗಿಸಲು 23 ಕೋಟಿ ರೂ.ಗಳ ಯೋಜನೆ ಮಂಜೂರಾಗಿದ್ದು, ಸುಮಾರು ಮೂರು ವರ್ಷಗಳ ಹಿಂದೆ ನಗರದ ಹೊರವಲಯದ ಕುಂಡಾಮೇಸ್ತ್ರಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿದ್ದು, ಅಲ್ಲಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಅದೇನೇ ಇದ್ದರೂ, ಈ ವರ್ಷ ಜಿಲ್ಲೆಯು ಕಠಿಣ ಬೇಸಿಗೆ ಎದುರಿಸುತ್ತಿದ್ದು, ಮನೆಗಳಿಗೆ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.

40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಮಡಿಕೇರಿ ನಗರಕ್ಕೆ ದಿನಕ್ಕೆ 54 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಹೆಚ್ಚಿದ ಪ್ರವಾಸಿಗರ ಭೇಟಿಯ ನಂತರ ವಾರಾಂತ್ಯದಲ್ಲಿ ನೀರಿನ ಬಳಕೆ ಎರಡು ಪಟ್ಟು ಹೆಚ್ಚಾಗುತ್ತಿದೆ. ಕೂಟುಹೊಳೆ ನೀರು ಸರಬರಾಜು ಘಟಕದಿಂದ ಪ್ರತಿ ದಿನ ನೀರು ಸರಬರಾಜು ಮಾಡಲಾಗುತ್ತಿತ್ತು. ಈಗ ಅಲ್ಲಿಯೂ ನೀರು ಖಾಲಿಯಾಗಿದೆ. ಹೀಗಾಗಿ ಪುರಸಭೆಯು ಎಲ್ಲಾ 23 ವಾರ್ಡ್‌ಗಳಿಗೆ ದಿನ ಬಿಟ್ಟು ದಿನ ನೀರು ಸರಬರಾಜು ಮಾಡುವುದಾಗಿ ಘೋಷಿಸಿದೆ.

ಕೂಟುಹೊಳೆ ಘಟಕದಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದೆ. ಮಾರ್ಚ್ ತಿಂಗಳ ಆರಂಭದಲ್ಲಿ ಈ ಮೂಲವು ಒಣಗಲು ಪ್ರಾರಂಭಿಸಿತು ಮತ್ತು ನಾವು ಮಾರ್ಚ್ 3 ರಿಂದ ಕುಂಡಾಮೇಸ್ತ್ರಿಗೆ ಸರಬರಾಜು ಘಟಕವನ್ನು ಸ್ಥಳಾಂತರಿಸಿದ್ದೇವೆ ಎಂದು ಸಿಎಂಸಿ ಆಯುಕ್ತ ವಿಜಯಾ ಅವರು ತಿಳಿಸಿದ್ದಾರೆ.

ಕುಂಡಾಮೇಸ್ತ್ರಿ ಚೆಕ್ ಡ್ಯಾಂ
ಉಗಮ ಸ್ಥಾನದಲ್ಲೆ ಬರಿದಾದ ಕಾವೇರಿ; ಕೊಡಗಿನಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ!

ಸದ್ಯ ನಗರದಲ್ಲಿ ಎರಡು ದಿನಕ್ಕೊಮ್ಮೆ ನೀರು ಬರುತ್ತಿದ್ದು, ಕುಡಿಯುವ ಹಾಗೂ ಇತರೆ ಮೂಲಭೂತ ಅಗತ್ಯಗಳಿಗೆ ಮಾತ್ರ ನೀರು ಬಳಸಿಕೊಳ್ಳುವಂತೆ ಸಿಎಂಸಿ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ. ನಿವಾಸಿಗಳು ನೀರನ್ನು ವ್ಯರ್ಥ ಮಾಡುವುದು ಅಥವಾ ವಾಹನಗಳನ್ನು ತೊಳೆಯುವುದು ಅಥವಾ ಇತರ ಕಾರ್ಯಗಳಿಗೆ ನೀರು ಬಳಸುವುದು ಕಂಡುಬಂದರೆ ದಂಡ ವಿಧಿಸುವುದಾಗಿ ಕೌನ್ಸಿಲ್ ಎಚ್ಚರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com