NABARD ಅನುದಾನ ಕಡಿತದಿಂದ ರೈತರಿಗೆ ಅನ್ಯಾಯವಾಗಿದೆ: ಸಿದ್ದರಾಮಯ್ಯ

ಸರ್ಕಾರವು 2024-25ರಲ್ಲಿ 35 ಲಕ್ಷ ರೈತರಿಗೆ 25,000 ಕೋಟಿ ರೂಪಾಯಿಗಳ ಅಲ್ಪಾವಧಿ ಕೃಷಿ ಸಾಲವನ್ನು ವಿತರಿಸುವ ಗುರಿಯನ್ನು ಹೊಂದಿದೆ ಎಂದರು.
Chief Minister Siddaramaiah calls on Union Finance Minister Nirmala Sitharaman to discuss the issue of NABARD funding to Karnataka being cut, as state ministers Byrathi Suresh and N Chaluvarayaswamy look on, in New Delhi on Thursday
ಸಚಿವರಾದ ಭೈರತಿ ಸುರೇಶ್ ಮತ್ತು ಎನ್ ಚಲುವರಾಯಸ್ವಾಮಿ ಅವರೊಂದಿಗೆ ದೆಹಲಿಯಲ್ಲಿ ಕರ್ನಾಟಕಕ್ಕೆ ನಬಾರ್ಡ್ ಅನುದಾನ ಕಡಿತಗೊಳಿಸಿರುವ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದರು.
Updated on

ಬೆಂಗಳೂರು: ರೈತರ ಹಿತದೃಷ್ಟಿಯಿಂದ 2024-25ನೇ ಸಾಲಿಗೆ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಹೆಚ್ಚಿಸಲು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ಮತ್ತು ಆರ್‌ಬಿಐಗೆ ನಿರ್ದೇಶನ ನೀಡುವಂತೆ ಮತ್ತು ಕರ್ನಾಟಕದಲ್ಲಿ ಸಾಮಾನ್ಯ ಆಹಾರ ಧಾನ್ಯ ಉತ್ಪಾದನೆಯನ್ನು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು.

ಕರ್ನಾಟಕಕ್ಕೆ ಮಂಜೂರಾತಿ ಸಾಲದ ಮಿತಿಯನ್ನು ತೀವ್ರವಾಗಿ ಕಡಿತಗೊಳಿಸುವುದರಿಂದ ಅಲ್ಪಾವಧಿಯ ಕೃಷಿ ಸಾಲಗಳ ವಿತರಣೆಗೆ ತೀವ್ರ ಅಡ್ಡಿಯಾಗಲಿದೆ ಎಂದು ಸಿಎಂ ನಿನ್ನೆ ಗುರುವಾರ ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ಸರ್ಕಾರವು 2024-25ರಲ್ಲಿ 35 ಲಕ್ಷ ರೈತರಿಗೆ 25,000 ಕೋಟಿ ರೂಪಾಯಿಗಳ ಅಲ್ಪಾವಧಿ ಕೃಷಿ ಸಾಲವನ್ನು ವಿತರಿಸುವ ಗುರಿಯನ್ನು ಹೊಂದಿದೆ ಎಂದರು.

2023-24ರಲ್ಲಿ ಅಲ್ಪಾವಧಿಯ ಸಹಕಾರಿ ಸಾಲ ರಚನೆಯ ಮೂಲಕ ರಾಜ್ಯದಲ್ಲಿ 22,902 ಕೋಟಿ ರೂಪಾಯಿಗಳ ಅಲ್ಪಾವಧಿ ಕೃಷಿ ಸಾಲವನ್ನು ವಿತರಿಸಲಾಗಿದೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ಅಲ್ಪಾವಧಿಯ ಸಹಕಾರ ಸಾಲ ರಚನೆಯ ಪರವಾಗಿ 2024-25 ಕ್ಕೆ 9,162 ಕೋಟಿ ರೂಪಾಯಿಗಳ ಕಾಲೋಚಿತ ಕೃಷಿ ಕಾರ್ಯಾಚರಣೆಗಳು(SAO) ಮಿತಿಯನ್ನು ಮಂಜೂರು ಮಾಡಲು ನಬಾರ್ಡ್‌ಗೆ ಪ್ರಸ್ತಾವನೆಯನ್ನು ಕೋರಿ ಕಳುಹಿಸಿದೆ ಎಂದು ಸಿಎಂ ಹೇಳಿದರು.

Chief Minister Siddaramaiah calls on Union Finance Minister Nirmala Sitharaman to discuss the issue of NABARD funding to Karnataka being cut, as state ministers Byrathi Suresh and N Chaluvarayaswamy look on, in New Delhi on Thursday
Watch | ರಾಗಿ ತನ್ನಿರಿ, ಭಿಕ್ಷಕೆ ರಾಗಿ ತನ್ನಿರಿ... ಕೀರ್ತನೆ ಹಾಡಿದ ನಿರ್ಮಲಾ ಸೀತಾರಾಮನ್

2023-24 ಕ್ಕೆ, ನಬಾರ್ಡ್ ಎಸ್ ಎಒ ರಿಯಾಯಿತಿ ಮಿತಿಯನ್ನು 5,600 ಕೋಟಿ ರೂಪಾಯಿಗೆ, 2024-25ಕ್ಕೆ 9,162 ಕೋಟಿ ರೂಪಾಯಿಗಳ ಅನ್ವಯಿಕ ಮಿತಿಗೆ ವಿರುದ್ಧವಾಗಿ, ನಬಾರ್ಡ್ ಎಸ್ ಎಒ ರಿಯಾಯಿತಿಯ ಕೃಷಿ ಸಾಲದ ಮಿತಿಯನ್ನು 2,340 ಕೋಟಿ ರೂಪಾಯಿಗಳನ್ನು ಮಾತ್ರ ಮಂಜೂರು ಮಾಡಿದೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 58ರಷ್ಟು ಕಡಿಮೆಯಾಗಿದೆ. ಸಾಮಾನ್ಯ ಸಾಲದ ಅಡಿಯಲ್ಲಿ ಆರ್‌ಬಿಐ ಕಡಿಮೆ ಹಣ ಹಂಚಿಕೆ ಮಾಡಿರುವುದು ಈ ವರ್ಷ ಮಿತಿಯನ್ನು ಕಡಿಮೆ ಮಾಡಲು ಕಾರಣ ಎಂದು ನಬಾರ್ಡ್ ನಮಗೆ ತಿಳಿಸಿದೆ ಎಂದು ಸಿಎಂ ಹೇಳಿದರು.

ಕರ್ನಾಟಕದಲ್ಲಿ ಉತ್ತಮ ಮುಂಗಾರು ಮಳೆಯಾಗಿದ್ದು, ರೈತರು ತಮ್ಮ ಕೃಷಿ ಸಹಕಾರಕ್ಕಾಗಿ ಎಸ್‌ಎಒ ಸಾಲಗಳ ವಿತರಣೆಯನ್ನು ಹೆಚ್ಚಿಸಲು ಒತ್ತಾಯಿಸುತ್ತಿದ್ದಾರೆ ಎಂದರು. ನಿನ್ನೆ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅನುದಾನ ಕಡಿತ ಮಾಡಿರುವುದು ರೈತರಿಗೆ ಮಾಡಿದ ಅನ್ಯಾಯ. ನಬಾರ್ಡ್ ರಾಜ್ಯಕ್ಕೆ ಶೇಕಡಾ 4.5 ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಕಳೆದ ಐದು ವರ್ಷಗಳಲ್ಲಿ, ಇದು ಯಾವಾಗಲೂ 5,000 ಕೋಟಿ ರೂಪಾಯಿಗಿಂತ ಹೆಚ್ಚಿತ್ತು, ಆದರೆ ಈ ವರ್ಷ, ಇದು ಕಳೆದ ವರ್ಷದ ನಿಧಿಗಿಂತ ಶೇಕಡಾ 58ರಷ್ಟು ಕಡಿಮೆಯಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com