ಕೊಪ್ಪಳದಲ್ಲಿ ಅಪರೂಪದ ಉರಿ ಉಯ್ಯಾಲೆ ಬಲಿದಾನದ ಸ್ಮಾರಕಗಳು ಪತ್ತೆ!

ಈ ಹಿಂದೆ ಮಂಡ್ಯ, ಗದಗ, ಧಾರವಾಡ, ಚಾಮರಾಜನಗರದಲ್ಲಿ ಕಂಡುಬಂದಿವೆ. ಉರಿ ಉಯ್ಯಾಲೆ ಎಂದರೆ ಬೆಂಕಿ(ಉರಿ)ಯ ಮೇಲೆ ತೂಗಾಡುವುದು ಎಂದರ್ಥ
Rare burning swing sacrificial monuments found
ಉರಿ ಉಯ್ಯಾಲೆ ಸ್ಮಾರಕಗಳು ಪತ್ತೆ
Updated on

ಕೊಪ್ಪಳ :ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಳಗಿ ಗ್ರಾಮದ ಕೆರೆಯೊಂದರ ಬಳಿ ಎರಡು ಉಯ್ಯಾಲೆ ಬಲಿದಾನದ ಸ್ಮಾರಕಗಳು ಪತ್ತೆಯಾಗಿವೆ. ಇದನ್ನು ಕನ್ನಡದಲ್ಲಿ "ಉರಿ ಉಯ್ಯಾಲೆ" ಎಂದು ಕರೆಯಲಾಗುತ್ತದೆ.

ಈ ಅಪರೂಪದ ಸ್ಮಾರಕಗಳು ಸುಮಾರು 1,000 ವರ್ಷಗಳ ಹಿಂದೆ ಜನರು ಮಾಡಿದ ತ್ಯಾಗವನ್ನು ವಿವರಿಸುತ್ತವೆ. ಇತಿಹಾಸಕಾರರ ಪ್ರಕಾರ ಇಂತಹ ಸ್ಮಾರಕಗಳು ಈ ಹಿಂದೆ ಮಂಡ್ಯ, ಗದಗ, ಧಾರವಾಡ, ಚಾಮರಾಜನಗರದಲ್ಲಿ ಕಂಡುಬಂದಿವೆ. ಉರಿ ಉಯ್ಯಾಲೆ ಎಂದರೆ ಬೆಂಕಿ(ಉರಿ)ಯ ಮೇಲೆ ತೂಗಾಡುವುದು ಎಂದರ್ಥ. ಆತ್ಮಬಲಿದಾನಗಳಲ್ಲಿ ಒಂದಾದ ಈ ಹರಕೆಯು ಬಹಳ ವಿರಳ ಮತ್ತು ವಿಶೇಷ. ಹಿಂದೆ, ಜನರು ತಮ್ಮ ಮಕ್ಕಳಿಲ್ಲದ ಆಡಳಿತಗಾರರಿಗೆ ಪುತ್ರರು ಅಥವಾ ಪುತ್ರಿಯರನ್ನು ಆಶೀರ್ವದಿಸಬೇಕೆಂದು ದೇವರಿಗೆ ಮೊರೆ ಹೋಗಿ ಉಯ್ಯಾಲೆಯ ಮೇಲೆ ಕುಳಿತು ಅಥವಾ ನಿಂತು ( ಅಗ್ನಿದೇವನಿಗೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ) ಬೆಂಕಿ ಹಚ್ಚಿಕೊಳ್ಳುತ್ತಿದ್ದರು.

ಸ್ಮಾರಕಗಳ ಮೇಲಿನ ಶಾಸನಗಳ ಪ್ರಕಾರ ಕೆಲವರು ಮೋಕ್ಷವನ್ನು ಪಡೆಯಲು ಈ ಆಚರಣೆಯನ್ನು ಮಾಡುತ್ತಿದ್ದರು. ಆದಾಗ್ಯೂ, ಇವುಗಳನ್ನು ತ್ಯಾಗದ ಸ್ಮಾರಕಗಳೆಂದು ಪರಿಗಣಿಸಲಾಗಿದೆ. ಈ ಆಚರಣೆಗಳನ್ನು ದೇವಿಯ ದೇವಾಲಯಗಳಲ್ಲಿ ನಡೆಸಲಾಗುತ್ತಿತ್ತು. ಇತಿಹಾಸಕಾರರ ಪ್ರಕಾರ, ಜನರು ಯುದ್ಧಗಳಲ್ಲಿ ತಮ್ಮ ರಾಜರ ವಿಜಯಕ್ಕಾಗಿ ಈ ಆಚರಣೆಗಳನ್ನು ಸಹ ಮಾಡಿದರು.

Rare burning swing sacrificial monuments found
ಹಾಸನ: ಶ್ರವಣಬೆಳಗೊಳದಲ್ಲಿ 10ನೇ ಶತಮಾನದ ಶಿಲಾ ಶಾಸನ ಪತ್ತೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com