ತುಮಕೂರು: ಜಯಮಂಗಲಿ ನದಿ ತೀರದಲ್ಲಿ ಹೊಸ ಪ್ರಭೇದದ ಜೇಡ ಪತ್ತೆ..!

ಹೊಸ ಜಾತಿಗೆ ತೆಂಕಣ (ದಕ್ಷಿಣ ಏಷ್ಯಾ) ಎಂತಲೂ ಮತ್ತು ಪ್ರಭೇದ ಜಯಮಂಗಲಿ ( ಜಯಮಂಗಲಿ ಉಗಮ ಸ್ಥಾನ) ಎಂದು ಹೆಸರಿಸಲಾಗಿದೆ.
ಹೊಸ ಪ್ರಭೇದದ ಜೇಡ
ಹೊಸ ಪ್ರಭೇದದ ಜೇಡ
Updated on

ತುಮಕೂರು: ತುಮಕೂರು ಜಿಲ್ಲೆಯ ದೇವರಾಯನದುರ್ಗ ಬೆಟ್ಟದ ಜಯಮಂಗಲಿ ನದಿಯ ಉಗಮ ಸ್ಥಾನದಲ್ಲಿ ಹೊಸ ಪ್ರಭೇದದ ಜಿಗಿಯುವ ಜೇಡವೊಂದು ಪತ್ತೆಯಾಗಿದೆ.

ದೇವರಾಯನದುರ್ಗದ ಜಯಮಂಗಲಿ ಉಗಮ ಸ್ಥಾನ ಪ್ರದೇಶದಲ್ಲಿ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಬಿ.ಜಿ.ನಿಶಾ, ಚಿನ್ಮಯ್ ಸಿ.ಮಲಿಯೆ, ಡಬ್ಲ್ಯೂ ಡಬ್ಲ್ಯೂ ಈ ಸಂಸ್ಥೆಯ ಲೋಹಿತ್ ವೈ.ಟಿ., ಇವರು ಗಿಡಮರಗಳಿಂದ ಬಿದ್ದ ಒಣ ತರಗೆಲೆಗಳಲ್ಲಿ ಜಂಪಿಂಗ್ ಸ್ಪೈಡರ್ ಗುಂಪಿನ ಈ ಜೇಡರ ಹುಳುಗಳ ಆವಾಸ, ವರ್ತನೆಯ ವೈಜ್ಞಾನಿಕ ಅಧ್ಯಯನವನ್ನು ಕೈಗೊಂಡಿದ್ದರು.

ಇತರೆ ಜೇಡರ ಹುಳುಗಳಿಗಿಂತ ಭಿನ್ನವಾಗಿರುವುದರಿಂದ ಈ ಜೇಡದ ಹೆಣ್ಣು ಮತ್ತು ಗಂಡು ಮಾದರಿಗಳನ್ನು ವಂಶವಾಹಿ ಡಿ.ಎನ್.ಎ ಹಾಗೂ ಅಣು ಮಟ್ಟದ ಅಧ್ಯಯನಕ್ಕಾಗಿ ಜಾನ್ ಕೆಲಬ್, ಕಿರಣ್ ಮರಾಠೆ, ಕೃಷ್ಣಮೇಘ ಕುಂಟೆ ಹಾಗೂ ಕೆನಡಾದ ವೈನೆ ಮ್ಯಾಡಿಸನ್ ವಿಜ್ಞಾನಿಗಳಿಗೆ ಕಳುಹಿಸಲಾಗಿತ್ತು.

ಬೇರೆ ಜೇಡಗಳ ಜತೆ ಈ ಜೇಡದ ಡಿ.ಎನ್.ಎ ಮ್ಯಾಪಿಂಗ್ ಮಾಡಿದಾಗ ಸಂಪೂರ್ಣ ಬಿನ್ನವಾಗಿರುವ ಅಣು ಸಂಯೋಜನೆ ಕಂಡುಬಂದಿರುವುದರಿಂದ ಇದನ್ನು ತೆಂಕಣ ಜಯಮಂಗಲಿ ಎಂದು ನಾಮಕರಣ ಮಾಡಲಾಗಿದೆ.

ಹೊಸ ಪ್ರಭೇದದ ಜೇಡ
ಕರ್ನಾಟಕದಲ್ಲಿ 2 ಹೊಸ ಏಡಿ ಪ್ರಭೇದ ಪತ್ತೆ, ಭಾರತದಲ್ಲಿನ ಏಡಿ ಪ್ರಭೇದಗಳ ಸಂಖ್ಯೆ 75ಕ್ಕೆ ಏರಿಕೆ

ಹೊಸ ಜಾತಿಗೆ ತೆಂಕಣ (ದಕ್ಷಿಣ ಏಷ್ಯಾ) ಎಂತಲೂ ಮತ್ತು ಪ್ರಭೇದ ಜಯಮಂಗಲಿ ( ಜಯಮಂಗಲಿ ಉಗಮ ಸ್ಥಾನ) ಎಂದು ಹೆಸರಿಸಲಾಗಿದೆ.

ಇಂತಹ ವಿಭಿನ್ನ ಲಕ್ಷಣದ ನಿಖರ ಮಾಹಿತಿಯ ಸಂಶೋಧನಾ ಬರಹ ಅಂತಾರಾಷ್ಟ್ರೀಯ ಜರ್ನಲ್ ಝೂಕೀಸ್ ನಿಯತಕಾಲಿಕೆಯಲ್ಲಿ ಅಕ್ಟೋಬರ್ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಬೆಂಗಳೂರಿನ ಜೀವ ವಿಜ್ಞಾನ ಕೇಂದ್ರ (ಎನ್‌ಸಿಬಿಎಸ್) ಮತ್ತು ಯೂನಿವರ್ಸಿಟ್ ಬ್ರಿಟಿಷ್ ಕೊಲಂಬಿಯಾ ಲ್ಯಾಬ್ ಸಹಯೋಗದಲ್ಲಿ ಈ ಸಂಶೋಧನೆ ಮಾಡಿದ್ದಾರೆ.

ಜೇಡಗಳು ಪರಿಸರ ಸಮತೋಲನೆಯಲ್ಲಿ, ಆಹಾರಜಾಲ ಹಾಗೂ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುವತ್ತವೆ. ಬೇಸಿಗೆಯಲ್ಲಿ ಬೀಳುವ ಕಾಡಿನ ಬೆಂಕಿಯಿಂದ ನೆಲ ಮಟ್ಟ ದಲ್ಲಿರುವ ಇಂತಹ ಹಲವು ಜೀವಿಗಳು ಹೊಸ ಪ್ರಪಂಚಕ್ಕೆ ಗೊತ್ತಾಗುವ ಮುನ್ನವೆ ವಿನಾಶ ಹೊಂದುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com