ವಾಲ್ಮೀಕಿ ಹಗರಣದ ಹಣ ಲೋಕಸಭೆ ಚುನಾವಣೆಗೆ ಬಳಕೆಯಾಗಿದೆ: ED

ವಿಜಯ್ ಕುಮಾರ್ ಗೌಡರ ಹೇಳಿಕೆಯನ್ನು ಉಲ್ಲೇಖಿಸಿದ ಇಡಿ, ನಾಗೇಂದ್ರ ಅವರ ಜಾಮೀನು ಅರ್ಜಿಗೆ ತನ್ನ ಆಕ್ಷೇಪಣೆ ವ್ಯಕ್ತ ಪಡಿಸಿದೆ, ಹಣವನ್ನು ವರ್ಗಾಯಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಮೋಸದ ಚಟುವಟಿಕೆಗಳನ್ನು ರೂಪಿಸುವಲ್ಲಿ ನಾಗೇಂದ್ರ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರತಿಪಾದಿಸಿದೆ.
File image
ಸಂಗ್ರಹ ಚಿತ್ರ
Updated on

ಬೆಂಗಳೂರು: ವಾಲ್ಮೀಕಿ ಹಗರಣದ 8ನೇ ಆರೋಪಿ ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತ ಸಹಾಯಕ ವಿಜಯ್ ಕುಮಾರ್ ಗೌಡ ಅವರ ಮೊಬೈಲ್ ಫೋನ್ ಸ್ಕ್ರೀನ್ ಶಾಟ್ ಮತ್ತು ಹಲವು ಸಂಭಾಷಣೆಗಳು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣವನ್ನು ಬಳ್ಳಾರಿ ಲೋಕಸಭೆ ಚುನಾವಣೆಗೆ ಬಳಸಲಾಗಿದೆ ಎಂದು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಇಡಿ ಹೇಳಿಕೊಂಡಿದೆ.

ವಿಜಯ್ ಕುಮಾರ್ ಗೌಡರ ಹೇಳಿಕೆಯನ್ನು ಉಲ್ಲೇಖಿಸಿದ ಇಡಿ, ನಾಗೇಂದ್ರ ಅವರ ಜಾಮೀನು ಅರ್ಜಿಗೆ ತನ್ನ ಆಕ್ಷೇಪಣೆ ವ್ಯಕ್ತ ಪಡಿಸಿದೆ, ಹಣವನ್ನು ವರ್ಗಾಯಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಮೋಸದ ಚಟುವಟಿಕೆಗಳನ್ನು ರೂಪಿಸುವಲ್ಲಿ ನಾಗೇಂದ್ರ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರತಿಪಾದಿಸಿದೆ.

ಹಗರಣದ ಹಣವನ್ನು ಅವರು ಚುನಾವಣಾ ಸಮಯದಲ್ಲಿ ನಗದು ನಿರ್ವಹಣೆ ಸೇರಿದಂತೆ ವೈಯಕ್ತಿಕ ಮತ್ತು ಚುನಾವಣಾ ವೆಚ್ಚಗಳಿಗೆ ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಹಣವನ್ನು ನಿಭಾಯಿಸುವಲ್ಲಿ ವಿಜಯ್ ಕಮಾರ್ ಗೌಡ ತೊಡಗಿಸಿಕೊಂಡಿದ್ದು, ನೆಕ್ಕುಂಟಿ ನಾಗರಾಜ್ (ಏ-6) ಅವರ ಸೂಚನೆ ಮೇರೆಗೆ ಎಡರು ರುದ್ರಯ್ಯ (ಏ-25) ವಿಜಯ್ ಕುಮಾರ್ ಗೌಡಗೆ ನೀಡಲು 61 ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ನಾಗೇಂದ್ರ ಅವರ ನೇತೃತ್ವದ ಬುಡಕಟ್ಟು ಕಲ್ಯಾಣ ಇಲಾಖೆಯು ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಹಣವನ್ನು ತ್ವರಿತವಾಗಿ ವಿತರಿಸಲು ಕಾರ್ಯವಿಧಾನದ ಪರಿಶೀಲನೆಗಳನ್ನು ಮಾಡಿದೆ ಎಂದು ಇಡಿ ಹೇಳಿದೆ. ಅನುದಾನದ ಹಣ ವಿತರಿಸಲು ಮಧ್ಯ ವರ್ಷದ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಇಲಾಖೆ ವಿಫಲವಾಗಿದೆ ಎಂದಿದೆ.

File image
ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ವಾಲ್ಮೀಕಿ ಹಗರಣದ ಮಾಸ್ಟರ್ ಮೈಂಡ್: ಇಡಿ

ಹೆಚ್ಚುವರಿಯಾಗಿ, ನಾಗೇಂದ್ರ ಅವರು ತಮ್ಮ ಮೂರು ಐಫೋನ್‌ಗಳನ್ನು ವಿಲೇವಾರಿ ಮಾಡುವ ಮೂಲಕ ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ. ಇಡಿ ಆರೋಪಗಳನ್ನು ತಳ್ಳಿಹಾಕಿದ ನಾಗೇಂದ್ರ ಪರ ವಾದ ಮಂಡಿಸಿದ ಹಿರಿಯ ವಕೀಲರು, ಕಸ್ಟಡಿಯಲ್ಲಿ ದಾಖಲಾದ ಒಬ್ಬ ವ್ಯಕ್ತಿಯ ಯಾವುದೇ ಹೇಳಿಕೆಯು ತನ್ನ ಪಾವಿತ್ರ್ಯವನ್ನು ಕಳೆದುಕೊಳ್ಳುತ್ತದೆ ಮತ್ತು ವಿಜಯ್ ಕುಮಾರ್ ಗೌಡರ ಅಸ್ಪಷ್ಟ ಹೇಳಿಕೆಯನ್ನು ಹೊರತುಪಡಿಸಿ, ನಾಗೇಂದ್ರ ಅವರು ಹಗರಣದ ಹಣವನ್ನು ಬಳಸಿದ್ದಾರೆಂದು ಸೂಚಿಸಲು ಯಾವುದೇ ಗಣನೀಯ ವಸ್ತುಗಳನ್ನು ಸಂಗ್ರಹಿಸಲಾಗಿಲ್ಲ ಎಂದು ವಾದಿಸಿದರು.

ಜಾಮೀನು ಮಂಜೂರು ಮಾಡುವಾಗ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಪಿಎಂಎಲ್‌ಎ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ಪೂರ್ವಭಾವಿ ಅಪರಾಧದಲ್ಲಿ ಸಿಲುಕಿಸಬೇಕಾಗಿಲ್ಲ ಎಂದು ಹೇಳಿದರು. ಆರೋಪಿ ನಂ.1 ನಾಗೇಂದ್ರ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ ಆದರೆ ಪ್ರಾಸಿಕ್ಯೂಷನ್ ಅವರು ನಾಗೇಂದ್ರ ಅವರನ್ನು ಅಪರಾಧದ ಕಿಂಗ್‌ಪಿನ್ ಮತ್ತು ಮಾಸ್ಟರ್‌ಮೈಂಡ್ ಎಂದು ವಾದಿಸುತ್ತಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com