ಆರೋಗ್ಯ ರಕ್ಷಣೆ ವಿಚಾರದಲ್ಲಿ ತಾರತಮ್ಯರಹಿತ ವಿಧಾನದ ಅಗತ್ಯವಿದೆ: ಸಂಸದ ಡಾ. ಸಿ.ಎನ್ ಮಂಜುನಾಥ್

ಆಕ್ಸ್‌ಫರ್ಡ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ತರಗತಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಡಾ. ಮಂಜುನಾಥ್, ಹೋಮಿಯೋಪತಿ ಮತ್ತು ಅಲೋಪತಿ ಎರಡನ್ನೂ ಗೌರವಿಸಬೇಕು ಹಾಗೂ ಆರೋಗ್ಯ ರಕ್ಷಣೆಗೆ ತಾರತಮ್ಯರಹಿತ ವಿಧಾನದ ಅಗತ್ಯವಿದೆ ಎಂದರು.
DR CN Manjunath
ಡಾ.ಸಿ ಎನ್ ಮಂಜುನಾಥ್
Updated on

ಬೆಂಗಳೂರು: ರೋಗಿಗಳಿಗೆ ಕರುಣೆ ಮತ್ತು ಸಹಾನುಭೂತಿಯಿಂದ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ವೈದ್ಯರಿಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಸಲಹೆ ನೀಡಿದ್ದಾರೆ.

ಆಕ್ಸ್‌ಫರ್ಡ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ತರಗತಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಡಾ. ಮಂಜುನಾಥ್, ಹೋಮಿಯೋಪತಿ ಮತ್ತು ಅಲೋಪತಿ ಎರಡನ್ನೂ ಗೌರವಿಸಬೇಕು ಹಾಗೂ ಆರೋಗ್ಯ ರಕ್ಷಣೆಗೆ ತಾರತಮ್ಯರಹಿತ ವಿಧಾನದ ಅಗತ್ಯವಿದೆ ಎಂದರು.

ಭಾರತದಲ್ಲಿ 700 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ವರ್ಷ 1,10,000 ವೈದ್ಯಕೀಯ ಸೀಟುಗಳು ಲಭ್ಯವಿದ್ದರೂ, ಕೊರತೆ ಎದ್ದು ಕಾಣುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು. ಆಸ್ಪತ್ರೆಗಳಲ್ಲಿ ಸೂಕ್ತ ಸುರಕ್ಷತೆ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದರು. ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ಒಲವು ತೋರುತ್ತಾರೆ, ಈ ಪ್ರಯತ್ನದಲ್ಲಿ ಸರ್ಕಾರದ ಸಹಕಾರ ನೀಡಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಆಕ್ಸ್‌ಫರ್ಡ್ ಬ್ರೈನ್ಸ್ ನ್ಯೂರೋಲಾಜಿಕಲ್ ಸೆಂಟರ್ ಉದ್ಘಾಟಿಸಲಾಯಿತು. ಡಾ.ಎಸ್.ಎನ್.ವಿ.ಎಲ್. ಆಕ್ಸ್‌ಫರ್ಡ್ ವೈದ್ಯಕೀಯ ಕಾಲೇಜಿನ ಅಧ್ಯಕ್ಷ ನರಸಿಂಹರಾಜು, ಡೀನ್ ಮತ್ತು ನಿರ್ದೇಶಕಿ ಡಾ.ಸಿ.ಆರ್.ಜಯಂತಿ, ನರರೋಗ ತಜ್ಞ ಡಾ.ಎನ್.ಕೆ. ವೆಂಕಟರಾಮನ್, ಆಸ್ಪತ್ರೆ ನಿರ್ದೇಶಕ ವೈ.ಶ್ರೀನಿವಾಸಲು, ಆಸ್ಪತ್ರೆ ಅಧೀಕ್ಷಕ ಡಾ.ವಿ.ಬಿ. ಗೌಡ ಮತ್ತಿತರರು ಉಪಸ್ಥಿತರಿದ್ದರು.

DR CN Manjunath
ನಿತಿನ್ ಗಡ್ಕರಿ ಭೇಟಿಯಾದ ಸಂಸದ ಡಾ. ಸಿ.ಎನ್ ಮಂಜುನಾಥ್: STRR ಯೋಜನೆಗೆ 1,769 ಕೋಟಿ ರೂ. ಪರಿಹಾರ ನೀಡುವ ಭರವಸೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com