
ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಗ್ಗೆ ಇಡಲು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಮುಂದಾಗಿದೆ.
ಐಕಾನಿಕ್ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) 150 ಗ್ರಾಂ ತೂಕದ 'ಮೈಸೂರು ಸ್ಯಾಂಡಲ್ ಮಿಲೇನಿಯಮ್ ಸೂಪರ್ ಪ್ರೀಮಿಯಂ ಸೋಪ್' ಅನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಇದರ ಬೆಲೆ ರೂ. 3,000 ರು ಆಗಿದೆ.
"ಕಲಾ ಲೋಕ - ಕರ್ನಾಟಕದ ನಿಧಿ" ಎಂದು ಬ್ರಾಂಡ್ ಮಾಡಲಾದ ಈ ಸೋಪ್ ಉತ್ತಮ ಗುಣಮಟ್ಟದ ನೈಸರ್ಗಿಕ ಶ್ರೀಗಂಧದ ಎಣ್ಣೆಯಿಂದ ತಯಾರಿಸಲ್ಪಟ್ಟಿದೆ. ಇದು ವಿಮಾನ ನಿಲ್ದಾಣಗಳಲ್ಲಿನ ಅಂಗಡಿಗಳಲ್ಲಿ ಮಾತ್ರ ಲಭ್ಯವಿರುತ್ತದೆ ಮತ್ತು ಬೇಡಿಕೆಯ ಆಧಾರದ ಮೇಲೆ ರಫ್ತು ಮಾಡಲಾಗುತ್ತದೆ. KSDL ಈ ಐಷಾರಾಮಿ ಸೋಪಿಗಾಗಿ ವಿಶೇಷ ಪ್ಯಾಕ್ ವಿನ್ಯಾಸಗೊಳಿಸಿದೆ, ತನ್ನ ಸಾಮಾನ್ಯ ಹಸಿರು, ಕೆಂಪು ಮತ್ತು ಹಳದಿ ಥೀಮ್ನಿಂದ ದೂರ ಸರಿದಿದೆ.
ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಸೋಪ್ ಗುಲಾಬಿ ಮತ್ತು ಕ್ರೀಮ್ ಪ್ಯಾಕ್ನಲ್ಲಿ ಬರುತ್ತದೆ, ಉತ್ಪನ್ನವು ವಿದೇಶಿ ಗ್ರಾಹಕರನ್ನು ಗುರಿಯಾಗಿಸಿಕೊಂಡಿರುವುದರಿಂದ, ಪ್ರತಿ ಪೆಟ್ಟಿಗೆಯಲ್ಲಿ 'ಮೈಸೂರು ಸ್ಯಾಂಡಲ್ನ ಕಥೆ'ಯನ್ನು ವಿವರಿಸುವ ಕಾರ್ಡ್ ಇರುತ್ತದೆ.
ಈ ಸೋಪ್ ಕಂಪನಿಯ ಅಂತರರಾಷ್ಟ್ರೀಯ ವಿಸ್ತರಣಾ ಕಾರ್ಯತಂತ್ರದ ಭಾಗವಾಗಿದೆ ಎಂದು KSDL ನ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಶಾಂತ್ ಹೇಳಿದ್ದಾರೆ. KSDL ಅನ್ನು ಐಷಾರಾಮಿ ವಿಭಾಗದಲ್ಲಿ ಇರಿಸುವ ಮೂಲಕ, ಕಂಪನಿಯು ಅಂತರರಾಷ್ಟ್ರೀಯ ಡೀಲರ್ಗಳನ್ನು ಆಕರ್ಷಿಸುವ ಮತ್ತು ಭಾರತದ ಹೊರಗೆ ಮಳಿಗೆಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ಅವರು TNIE ಗೆ ತಿಳಿಸಿದರು.
ಸುಸ್ಥಿರತೆಯನ್ನು ಉತ್ತೇಜಿಸುವ ಕ್ರಮವಾಗಿ, KSDL ತನ್ನ ಪ್ಲಾಸ್ಟಿಕ್ ಪ್ಯಾಕೇಜಿಂಗ್ ವಸ್ತುಗಳನ್ನು 'ಬಟರ್ ಪೇಪರ್' ಗೆ ಬದಲಾಯಿಸುತ್ತದೆ. ಆವರಣದಲ್ಲಿ ವಿದ್ಯುತ್ ವಾಹನಗಳನ್ನು ಬಳಸುವ ಮೂಲಕ ಇ-ಸಾರಿಗೆಯನ್ನು ಉತ್ತೇಜಿಸುತ್ತದೆ. 42 ಉತ್ಪನ್ನಗಳನ್ನು ತಯಾರು ಮಾಡುವ KSDL, ಮೈಸೂರು ಸ್ಯಾಂಡಲ್ ಸೋಪ್ಗೆ ಹೆಸರುವಾಸಿಯಾಗಿದೆ, ಇದು ಈ ವರ್ಷ ತನ್ನ ಲಾಭಕ್ಕೆ ಅತ್ಯಧಿಕ ಕೊಡುಗೆ ನೀಡಿದೆ. "ನಮ್ಮ ಉತ್ಪನ್ನಗಳನ್ನು ಪರಿಸರ ಸ್ನೇಹಿಯಾಗಿ ಮಾಡಲು ಇನ್ನು ಮುಂದೆ ಸೋಪ್ಗಳು ಮತ್ತು ಧೂಪ ಮತ್ತು ಗಂಧದ ಕಡ್ಡಿಗಳಂತಹ ಇತರ ವಸ್ತುಗಳನ್ನು ಪ್ಯಾಕ್ ಮಾಡಲು ಬಟರ್ ಪೇಪರ್ ಬಳಸಲಾಗುತ್ತದೆ" ಎಂದು ಪ್ರಶಾಂತ್ ಹೇಳಿದರು.
ಕಂಪನಿಯು ಹಳದಿ ಮತ್ತು ಗುಲಾಬಿ ಹೂವಿನ ವಿನ್ಯಾಸಗಳನ್ನು ಶ್ರೀಗಂಧದ ಕಡ್ಡಿಗಳು, ಎಣ್ಣೆ ಮತ್ತು ಮೈಸೂರು ಅರಮನೆ ವಿನ್ಯಾಸಗಳೊಂದಿಗೆ ಬದಲಾಯಿಸುವ ಮೂಲಕ ಮೈಸೂರು ಸ್ಯಾಂಡಲ್ ಸೋಪ್ನ ಪ್ಯಾಕೇಜಿಂಗ್ ನವೀಕರಿಸುತ್ತದೆ. ಯುವ ಗ್ರಾಹಕರನ್ನು ಆಕರ್ಷಿಸಲು ಇದು ನಟಿ ತಮನ್ನಾ ಭಾಟಿಯಾ ಅವರನ್ನು ತನ್ನ ಬ್ರಾಂಡ್ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು, ಸರ್ಕಾರವು ಉತ್ತಮ ಗುಣಮಟ್ಟದ ಶ್ರೀಗಂಧದ ಸುಗಂಧ ದ್ರವ್ಯಗಳು ಮತ್ತು ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ ಎಂದು ಟಿಎನ್ಐಇಗೆ ತಿಳಿಸಿದರು. "ಕರ್ನಾಟಕದ ಶ್ರೀಗಂಧ ಆಧಾರಿತ ಉತ್ಪನ್ನಗಳನ್ನು ಜಾಗತಿಕ ಐಷಾರಾಮಿ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯುವುದು ಮತ್ತು ರಾಜ್ಯದ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ" ಎಂದು ಅವರು ಹೇಳಿದರು.
ದೇಶಾದ್ಯಂತ ಮಳಿಗೆಗಳನ್ನು ಸ್ಥಾಪಿಸಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹೊಸ ಉತ್ಪನ್ನಗಳನ್ನು ಪರಿಚಯಿಸಲು ಕೆಎಸ್ಡಿಎಲ್ 331 ಡೀಲರ್ಗಳನ್ನು ಸೇರಿಸಿಕೊಂಡಿದೆ. ವಿಜಯಪುರದಲ್ಲಿ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುವುದು ಎಂದು ಪಾಟೀಲ್ ತಿಳಿಸಿದ್ದಾರೆ.
Advertisement