ಮೇಲ್ವರ್ಗದ ಕುಟುಂಬಗಳಲ್ಲಿ ಒಂದೇ ಮಗು ಇದೆಯೇ? ಮುಸ್ಲಿಂ ಡೇಟಾ ಪರಿಪೂರ್ಣವಾಗಿದೆ ಏಕೆ?: ವೀರಶೈವ-ಲಿಂಗಾಯತ ಮಹಾಸಭಾ ಕಿಡಿ

ವೀರಶೈವ-ಲಿಂಗಾಯತ ಜನಸಂಖ್ಯೆಯ ಅಧಿಕೃತ ಅಂಕಿ ಅಂಶವನ್ನು ತಿರಸ್ಕರಿಸಿದ ಪ್ರಸನ್ನ, "66 ಲಕ್ಷ ವೀರಶೈವ -ಲಿಂಗಾಯತರಿದ್ದಾರೆ ಎಂಬುದು ಒಂದು ತಮಾಷೆಯಾಗಿದೆ" ಎಂದು ಹೇಳಿದರು.
representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಜಾತಿ ಸಮೀಕ್ಷೆ ವರದಿ ಕರ್ನಾಟಕದಾದ್ಯಂತ ಬಿರುಗಾಳಿ ಎಬ್ಬಿಸಿದ್ದು, ಶುಕ್ರವಾರ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರನ್ನು ಪ್ರಬಲ ಒಕ್ಕಲಿಗ ಮುಖಂಡರು ಭೇಟಿ ಮಾಡಿವೆ.

ಸಮೀಕ್ಷೆ "ಸಂಪೂರ್ಣವಾಗಿ ಅವೈಜ್ಞಾನಿಕ" ಎಂದು ಹೇಳಿರುವ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಹೆಚ್.ಎಂ.ರೇಣುಕಾ ಪ್ರಸನ್ನ ಭಾರೀ ಪ್ರಮಾಣದಲ್ಲಿ ಡೇಟಾ ಮ್ಯಾನಿಪ್ಯುಲೇಷನ್ ಮತ್ತು ವಿವರಿಸಲಾಗದ ಲೋಪ ಎಸಲಾಗಿದೆ ಎಂದು ಆರೋಪಿಸಿದ್ದಾರೆ. ವೀರಶೈವ-ಲಿಂಗಾಯತ ಜನಸಂಖ್ಯೆಯ ಅಧಿಕೃತ ಅಂಕಿ ಅಂಶವನ್ನು ತಿರಸ್ಕರಿಸಿದ ಪ್ರಸನ್ನ, "66 ಲಕ್ಷ ವೀರಶೈವ -ಲಿಂಗಾಯತರಿದ್ದಾರೆ ಎಂಬುದು ಒಂದು ತಮಾಷೆಯಾಗಿದೆ" ಎಂದು ಹೇಳಿದರು.

ನಮ್ಮ ಜನಸಂಖ್ಯೆಯು 1.3 ಕೋಟಿ ಮತ್ತು 1.4 ಕೋಟಿಗಳ ನಡುವೆ ಇದೆ ಎಂದು ಸ್ಪಷ್ಟವಾಗಿ ಹೇಳಿವೆ. ಈ ಸಂಖ್ಯೆಯು ಇದ್ದಕ್ಕಿದ್ದಂತೆ ಅರ್ಧಕ್ಕೆ ಹೇಗೆ ಕುಗ್ಗಿತು? ಇದು ಕೇವಲ ಲಿಂಗಾಯತರು ಮಾತ್ರವಲ್ಲ. ಹಲವಾರು ಜಾತಿಗಳ ಜನಸಂಖ್ಯೆಯು ತರ್ಕವನ್ನು ಮೀರಿ ಹೆಚ್ಚಿದ ಇಲ್ಲವೇ ಕಡಿಮೆಯಾಗಿದೆ" ಎಂದು ಪ್ರಸನ್ನ ಹೇಳಿದರು.

"ಮುಸ್ಲಿಮರು ಮತ್ತು ಕುರುಬರು 94% ಮತ್ತು 74% ಹೆಚ್ಚು ಎಂದು ತೋರಿಸಲಾಗಿದೆ, ಆದರೆ ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು ಮತ್ತು ಜೈನರ ಜನಸಂಖ್ಯೆಯು ನಿಗೂಢವಾಗಿ ಕಡಿಮೆಯಾಗಿದೆ. "ಮೇಲ್ವರ್ಗದ ಕುಟುಂಬಗಳು ತಲಾ ಒಂದು ಮಗುವನ್ನು ಹೊಂದಿವೆಯೇ? ಅದು ಕಾಲ್ಪನಿಕ ಅಂಕಿಅಂಶಗಳಾಗಿವೆ ಎಂದು ಅವರು ಹೇಳಿದ್ದಾರೆ.

representational image
Karnataka Caste Survey: 'ಮುಸ್ಲಿಮರ ಜನಸಂಖ್ಯೆ ಶೇ.94ರಷ್ಟು ಏರಿಕೆ... ಲಿಂಗಾಯತರು ಕೇವಲ 8.5ರಷ್ಟು ಮಾತ್ರ'; ಜಾತಿ ಗಣತಿ ವರದಿಯ ಮತ್ತಷ್ಟು ಮಾಹಿತಿ ಬಹಿರಂಗ

ಉಪ ಸಮುದಾಯಗಳ ಎಣಿಕೆಗಳಲ್ಲಿನ ವ್ಯತ್ಯಾಸಗಳು ಇನ್ನೂ ಹೆಚ್ಚು ಗೊಂದಲಮಯವಾಗಿವೆ. "ಕೇವಲ 2.5 ಲಕ್ಷ ಸದರ್ 2ಎ ಹಿಂದೂಗಳು" ಇದು ಅಂತರದಿಂದ ಭಾರಿ ದೂರವಿದೆ ಎಂದು ದೂರಿದ್ದಾರೆ. ಕೇವಲ ಒಂದು ಪ್ರದೇಶದಲ್ಲಿ 67,000 ಇರಬೇಕು. ದಾವಣಗೆರೆಯಲ್ಲಿ ಮಾತ್ರ ಅದು ಹೇಗೆ 4-5 ಲಕ್ಷ ಜನರಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ತುಮಕೂರಿನಿಂದ ಹುಬ್ಬಳ್ಳಿಯವರೆಗಿನ ಕೇವಲ 1.5 ಲಕ್ಷ ನೊಣಬರಿದ್ದಾರೆ ಎಂದು ತೋರಿಸಲಾಗಿದೆ - ಈ ಅಂಕಿಅಂಶ ನಿಖರವಾಗಿಲ್ಲ" ಎಂದು ಹೇಳಿದ್ದಾರೆ.

ಪಂಚಮಸಾಲಿ ಪಂಥದ 10 ಲಕ್ಷ ಜನರು ಕಾಣೆಯಾಗಿದೆ ಎಂದು ಆರೋಪಿಸಲಾಗಿದೆ. ವೀರಶೈವ-ಲಿಂಗಾಯತ ಮಹಾಸಭಾ ಸದಸ್ಯರೊಬ್ಬರು ಈ ಕಸರತ್ತನ್ನು ರಾಜಕೀಯ ಪಕ್ಷಪಾತ ಎಂದು ಬಣ್ಣಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಎಸ್ ನಿಜಲಿಂಗಪ್ಪ, ಬಿಡಿ ಜತ್ತಿ, ವೀರೇಂದ್ರ ಪಾಟೀಲ್, ಎಸ್ಆರ್ ಕಂಠಿ, ಜೆಹೆಚ್ ಪಟೇಲ್ ಮತ್ತು ಜಗದೀಶ್ ಶೆಟ್ಟರ್ - ಎಲ್ಲಾ ಬಣಜಿಗ ಲಿಂಗಾಯತರಾಗಿದ್ದಾರೆ. ಅವರ ಸಮುದಾಯ ಕೇವಲ 1 ಲಕ್ಷ ಎಂದು ತೋರಿಸಿರುವ ಸಮುದಾಯದಿಂದ ಬಂದವರು, ಆದರೆ ಅವರು ಸುಲಭವಾಗಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ" ಎಂದು ತಿಳಿಸಿದ್ದಾರೆ.

ಉಪ-ಪಂಗಡಗಳಾದ ರೆಡ್ಡಿ ಲಿಂಗಾಯತರು, ಗಾಣಿಗ ಲಿಂಗಾಯತರು, ಹಂದೆ ವಜೀರ್, ಅಗಸ, ಹಡಪದ್, ಮತ್ತು ಗೌಳಿ ಲಿಂಗಾಯತರನ್ನು ಕಡೆಗಣಿಸಲಾಗಿದೆ ಅಥವಾ ಸರಿಯಾಗಿ ಎಣಿಕೆ ಮಾಡಲಾಗಿಲ್ಲ ಎಂದು ಆರೋಪಿಸಲಾಗಿದೆ. ಇನ್ನೂ ಅದಕ್ಕಿಂತ ಕೆಟ್ಟದ ಅಂಶವೆಂದರೆ 16 ಲಿಂಗಾಯತ ಉಪ-ಪಂಗಡಗಳು ಎಣಿಕೆಯಿಂದ ಸಂಪೂರ್ಣವಾಗಿ ಕಾಣೆಯಾಗಿವೆ ಎಂದಿದ್ದಾರೆ.

ಮುಸ್ಲಿಂ ಡೇಟಾ ಪರಿಪೂರ್ಣವಾಗಿದೆ. ಏಕೆ? ಏಕೆಂದರೆ ಅವರು ಧರ್ಮ, ಜಾತಿ ಮತ್ತು ಉಪ-ಜಾತಿಗಳನ್ನು ಎಣಿಕೆಯ ಸಮಯದಲ್ಲಿ ಸರಿಯಾಗಿ ಜೋಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ನಮಗೆ ಆ ಅವಕಾಶ ಸಿಗಲಿಲ್ಲ. ಈ ಸಮೀಕ್ಷೆಯು ಕೇವಲ ದೋಷಪೂರಿತವಾಗಿಲ್ಲ - ಇದು ವಂಚನೆಯಾಗಿದೆ. ಇದು ಅವೈಜ್ಞಾನಿಕ, ಅಸಮಂಜಸ ಮತ್ತು ಹಾನಿಕರ ಎಂದು ಪ್ರಸನ್ನ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com