ರೈತರ ಪಾಲಿಗೆ ಹುಳಿಯಾದ ಸಿಹಿ ಮಾವು: ಮಳೆಯಿಂದ ಬೆಳೆ ಹಾನಿಯಾಗಿ ತೀವ್ರ ನಷ್ಟ

ಈ ವರ್ಷ, ಜನವರಿ ಮತ್ತು ಫೆಬ್ರವರಿಯಲ್ಲಿ ಚಳಿಗಾಲದಲ್ಲಿ ಕಠಿಣ ಶಾಖದಿಂದಾಗಿ ಮಾವಿನ ಮೊಗ್ಗುಗಳು ಹಾನಿಗೊಳಗಾದವು. ನಂತರ ಉತ್ತಮ ಬೆಳೆ ಆರಂಭವಾದಾಗ, ಹಠಾತ್ ಮಳೆ ಬೆಳೆಗಳನ್ನು ಮತ್ತಷ್ಟು ಹಾನಿಗೊಳಿಸಿತು.
Sell of Mango
ಮಾವಿನ ಹಣ್ಣು ಮಾರಾಟ
Updated on

ಬೆಂಗಳೂರು: ಏಪ್ರಿಲ್-ಮೇ ತಿಂಗಳು, ಮಾವು ಸೀಸನ್. ಬೇಸಿಗೆ ಕಾಲದಲ್ಲಿ ಮಳೆ ಬರುತ್ತಿದೆ, ಇದರಿಂದಾಗಿ ಕರ್ನಾಟಕದ ಮಾವು ಬೆಳೆಯುವ ರೈತರು ಹವಾಮಾನ ವೈಪರೀತ್ಯದಿಂದಾಗಿ ಮತ್ತೊಮ್ಮೆ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಇಳುವರಿ ಪ್ರಮಾಣ ಮತ್ತು ಗುಣಮಟ್ಟ ಎರಡರಲ್ಲೂ ಉತ್ತಮವಾಗಿದ್ದರೂ, ಹೆಚ್ಚಿನ ಬೆಳೆ ಹಾನಿಗೊಳಗಾಗಿದ್ದು, ಮಾವಿನ ಬೆಳೆ ಭಾರೀ ನಷ್ಟವಾಗುತ್ತಿದೆ.

ಈ ವರ್ಷ, ಜನವರಿ ಮತ್ತು ಫೆಬ್ರವರಿಯಲ್ಲಿ ಚಳಿಗಾಲದಲ್ಲಿ ಕಠಿಣ ಶಾಖದಿಂದಾಗಿ ಮಾವಿನ ಮೊಗ್ಗುಗಳು ಹಾನಿಗೊಳಗಾದವು. ನಂತರ ಉತ್ತಮ ಬೆಳೆ ಆರಂಭವಾದಾಗ, ಹಠಾತ್ ಮಳೆ ಬೆಳೆಗಳನ್ನು ಮತ್ತಷ್ಟು ಹಾನಿಗೊಳಿಸಿತ ಎಂದು ಗೌರಿಬಿದನೂರಿನ ಮಾವು ಬೆಳೆಯುವ ರೈತ ಅಜಿತ್ ರಾಜ್ ಹೇಳಿಕೊಳ್ಳುತ್ತಾರೆ.

ಬೆಳೆ ಇಳುವರಿಯಲ್ಲಿನ ಏರಿಳಿತಗಳು ಅವರಿಗೆ ಹೊಸದಲ್ಲ, ಬೆಳೆಯ ಬಗ್ಗೆ ಹೇಳುವುದು ನಮಗೆ ಯಾವತ್ತೂ ಅನಿರೀಕ್ಷಿತವಾಗಿದೆ ಎಂದು ಕೋಲಾರದ ಮಾವಿನ ರೈತ ಯಶ್ವಂತ್ ಹೇಳುತ್ತಾರೆ. ಪ್ರತಿ ಬಾರಿಯೂ ಹಿನ್ನಡೆ ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ತಮ್ಮ ಮಾವಿನ ಇಳುವರಿಯ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ ಸಣ್ಣ ಪ್ರಮಾಣದ ರೈತರು ಎನ್ನುತ್ತಾರೆ.

ಯಶವಂತರಂತಹ ರೈತರು ಕೆಲವೊಮ್ಮೆ ಮಾವಿನ ಇಳುವರಿ ಏರಿಳಿತಗಳಿಗೆ ಹೊಂದಿಕೊಳ್ಳಲು ಟೊಮೆಟೊ ಮತ್ತು ಬೀನ್ಸ್‌ ಬೆಳೆಯುತ್ತಾರೆ. ಮಾವಿನ ಕೃಷಿ ಜೂಜಾಟದಂತೆ ಎನ್ನುತ್ತಾರೆ ಅವರು. ಏನಾಗುತ್ತದೆ ಎಂದು ನಮಗೆ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಎಲ್ಲವೂ ಚೆನ್ನಾಗಿ ನಡೆಯುತ್ತಿರಬಹುದು, ಆದರೆ ಇದ್ದಕ್ಕಿದ್ದಂತೆ ನಷ್ಟಕ್ಕೊಳಗಾಗುತ್ತೀರಿ. ಆದರೆ ನಾವು ರೈತರು, ಇದು ನಮ್ಮ ವೃತ್ತಿ, ನಷ್ಟವಾಗಿದೆ ಎಂದು ಕೃಷಿ ಮಾಡದಿರಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ.

ಆರ್ಥಿಕವಾಗಿ ಸ್ಥಿರವಾಗಿರುವ ಯಶ್ವಂತ್‌ನಂತಹ ರೈತರು ಅಂತಹ ಸಂದರ್ಭಗಳಲ್ಲಿ ತಮ್ಮ ಗುರಿಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಆದರೆ ಯಾವಾಗಲೂ ತೊಂದರೆಯಲ್ಲಿ ಸಿಲುಕುವುದು ಸಣ್ಣ ಪ್ರಮಾಣದ ರೈತರು. ಸಣ್ಣ ಪ್ರಮಾಣದ ರೈತರು ಕೃಷಿಯನ್ನು ಬಿಡಲು ಸಾಧ್ಯವಿಲ್ಲ ಏಕೆಂದರೆ ಅದು ಅವರಿಗೆ ತಿಳಿದಿರುವ ಏಕೈಕ ಕೆಲಸ, ಅವರು ಬಹಳ ಸಮಯದಿಂದ ಕೃಷಿ ಮಾಡುತ್ತಿದ್ದಾರೆ. ಈ ರೀತಿಯ ಸಂದರ್ಭಗಳು ಅವರನ್ನು ದೊಡ್ಡ ತೊಂದರೆಗೆ ಸಿಲುಕಿಸುತ್ತವೆ ಎಂದು ಕೋಲಾರದ ಮಾವಿನ ಕೃಷಿಕ ಭಾಸ್ಕರ್ ರೆಡ್ಡಿ ಹೇಳುತ್ತಾರೆ.

Sell of Mango
ಕೊಪ್ಪಳದ ಮಾವು ಕೃಷಿಕರಿಗೆ ಬಂಪರ್: ಕೇಸರ್ ಮಾವಿಗೆ ಅಂತಾರಾಷ್ಟ್ರೀಯ ಮನ್ನಣೆ!

ಇದಲ್ಲದೆ, ಈ ಸಣ್ಣ ಪ್ರಮಾಣದ ರೈತರು ತಮ್ಮ ಮಾವಿನ ಬೆಳೆಗಳನ್ನು ಇತರ ಬೆಳೆಗಳೊಂದಿಗೆ ಬದಲಾಯಿಸಲು ಸಾಧ್ಯವಿಲ್ಲ ಏಕೆಂದರೆ ಅವರ ಆರ್ಥಿಕ ಅಸ್ಥಿರತೆಯು ಹೊಸ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ, ಇದರಲ್ಲಿ ಹೊಸ ಸಸಿಗಳನ್ನು ನೆಡುವಲ್ಲಿ ಬಹಳಷ್ಟು ಹಣದ ಹೂಡಿಕೆ, ಕಾರ್ಮಿಕರಿಗೆ ವೇತನ ಇತ್ಯಾದಿ ಸೇರಿವೆ.

ರೈತರು ತಮ್ಮ ಮಾವಿನ ಮಂಡಿಗಳಿಂದ ಹೆಚ್ಚಾಗಿ ಪ್ರಯೋಜನ ಪಡೆಯುವುದಿಲ್ಲ. ಮಂಡಿವಾಲರು ನಮ್ಮಿಂದ ಕಡಿಮೆ ಬೆಲೆಗೆ ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ, ಇದರಿಂದಾಗಿ ನಾವು ಎದುರಿಸುತ್ತಿರುವ ನಷ್ಟದ ನಡುವೆಯೂ ನಮಗೆ ಬಹಳ ಕಡಿಮೆ ಮೊತ್ತ ಉಳಿಯುತ್ತದೆ ಎಂದು ಭಾಸ್ಕರ್ ಹೇಳುತ್ತಾರೆ. ನಾನು ನಮ್ಮ ಮನೆಯಲ್ಲಿ ಬೆಳೆದ ಬೆಳೆಗಳನ್ನು ಪ್ರತಿ ಕಿಲೋಗೆ 25 ರಿಂದ 30 ರೂ.ಗಳಿಗೆ ಮಾರಾಟ ಮಾಡುತ್ತೇನೆ, ಆದರೆ ಈಗ 1 ಕೆಜಿ ಮಾವಿನ ಮಾರುಕಟ್ಟೆ ಬೆಲೆ 140 ರೂ.ಗಳಷ್ಟಿದೆ ಎನ್ನುತ್ತಾರೆ.

ಈ ಮಾವಿನ ಮಂಡಿಗಳಿಗೆ ಹೆಚ್ಚಿನ ರೈತರು ತೋತಾಪುರಿ ಮಾವಿನ ಹಣ್ಣುಗಳನ್ನು ಪೂರೈಸುತ್ತಾರೆ. ತೋತಾಪುರಿ ಮಾವುಗಳಿಂದ ರೈತರು ಸ್ವಲ್ಪ ಹೆಚ್ಚು ಲಾಭ ಮಾಡಿಕೊಳ್ಳುತ್ತಾರೆ. ರೈತರು ನೇರವಾಗಿ ಜ್ಯೂಸ್ ಕಾರ್ಖಾನೆಗಳನ್ನು ಸಂಪರ್ಕಿಸಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪರಿಸ್ಥಿತಿಗಳು ಹಾಗೆಯೇ ಮುಂದುವರಿದರೆ, ಒಂದು ದಿನ ತೋತಾಪುರಿ ಹೊರತುಪಡಿಸಿ ಯಾವುದೇ ಮಾವಿನ ಪ್ರಭೇದಗಳು ಉಳಿಯುವುದಿಲ್ಲ ಎನ್ನುತ್ತಾರೆ ಯಶ್ವಂತ್.

ಈ ಪರಿಸ್ಥಿತಿಯಲ್ಲಿ ಸರ್ಕಾರ ಮುಂದೆ ಬಂದು ನಮಗೆ ಸಹಾಯ ಮಾಡಬೇಕು ಎನ್ನುತ್ತಾರೆ ಯಶ್ವಂತ್. ಮಾವಿನ ಮಂಡಿಗಳು ರೈತರಿಗೆ ಪಾವತಿಸಬೇಕಾದ ಮಾವಿನಹಣ್ಣಿಗೆ ಕನಿಷ್ಠ ಬೆಲೆಯನ್ನು ನೀಡಬೇಕೆಂದು. ನಮ್ಮ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಹೆಚ್ಚಿನ ಹಣ ಕೇಳಿದರೆ ನಮ್ಮ ಬೆಳೆ ತೆಗೆದುಕೊಳ್ಳುವುದಿಲ್ಲ, ಕಡಿಮೆ ಬೆಲೆಗಾದರೆ ತೆಗೆದುಕೊಳ್ಳುತ್ತಾರೆ ಎಂದರು.

ಹಲವು ಬಾರಿ, ರೈತರಿಗೆ ಹಣದ ತೀವ್ರ ಅಗತ್ಯವಿದ್ದಾಗ, ಅವರು ಮಂಡಿಗಳಿಂದ ಭಾರಿ ಮೊತ್ತದ ಹಣವನ್ನು ತೆಗೆದುಕೊಳ್ಳುತ್ತಾರೆ, ಕೊನೆಗೆ ಟೆಂಡರ್ ನಲ್ಲಿ ನಮ್ಮ ಬೆಳೆ ಖರೀದಿಸುತ್ತಾರೆ ಎಂದು ಮಾವಿನ ರೈತ ಕೃಷ್ಣ ಸಾಗರ್ ರೆಡ್ಡಿ ಹೇಳಿಕೊಳ್ಳುತ್ತಾರೆ. ನಾನು ನನ್ನ ಸರಕುಗಳನ್ನು ನೇರವಾಗಿ ಸರ್ಕಾರಿ ಪೋರ್ಟಲ್‌ಗಳ ಮೂಲಕ ಮಾರಾಟ ಮಾಡುತ್ತೇನೆ, ಅಲ್ಲಿ ನಾನು ನನ್ನ ಬೆಳೆಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು ಎನ್ನುತ್ತಾರೆ.

ರೈತರು ವಿಮಾ ಮೊತ್ತವನ್ನು ಹೆಚ್ಚಿಸುವಂತೆ ಸರ್ಕಾರವನ್ನು ವಿನಂತಿಸುತ್ತಾರೆ, ಜೈ ಜವಾನ್ ಮತ್ತು ಜೈ ಕಿಸಾನ್ ನಂತಹ ಘೋಷಣೆಗಳನ್ನು ಹೇಳುತ್ತಿದ್ದರೂ ಅದು ಕೇವಲ ನುಡಿಗಟ್ಟುಗಳಿಗೆ ಸೀಮಿತವಾಗಿರುತ್ತದೆ ಎಂಬುದು ರೈತರ ಅಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com